LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನ ಐಷಾರಾಮಿ ಏರಿಯಾದಲ್ಲಿ ನಟಿ ಅಮೂಲ್ಯ ಒಡೆತನದ ಅದ್ಧೂರಿ ಪಬ್‌ ಓಪನ್‌ ಲಕ್ಸುರಿ ಲುಕ್‌ಗೆ ನೆಟ್ಟಿಗರು ಫಿದಾ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಗಳಾಗಿದ್ದ ನಟಿ ಅಮೂಲ್ಯ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ ಮದುವೆ ಹಾಗೂ ತಾಯಿಯಾದ ಬಳಿಕ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಅಮೂಲ್ಯ, ಮರಳಿ ಸಿನಿಮಾಗೆ ಬರ್ತಾರೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಆರ್. ಚಂದ್ರ ಜಂಟಿಯಾಗಿ ಬೆಂಗಳೂರಿನ ಐಷಾರಾಮಿ ಏರಿಯಾಗಳಲ್ಲೊಂದಾದ ರಾಜರಾಜೇಶ್ವರಿ ನಗರದಲ್ಲಿ (RR Nagar) ಕಣ್ಣು ಕೋರೈಸುವಂತಹ ಪ್ರೀಮಿಯಂ ಪಬ್‌ ಒಂದನ್ನು ಉದ್ಘಾಟನೆ ಮಾಡಿ ಬಿಸಿನೆಸ್ ವುಮನ್ ಆಗಿ ಅಖಾಡಕ್ಕಿಳಿದಿದ್ದಾರೆ

ಝೀರೋ ಡಿಗ್ರಿ ಆನ್ ದಿ ಹಿಲ್’: ಭೂಮಿ ಮೇಲಿನ ಸ್ವರ್ಗ

ಆರ್.ಆರ್. ನಗರದ 5 ನೇ ಹಂತದ ಎಸ್.ಎಸ್. ಹಿಲ್ಸ್‌ನ (ಶಕ್ತಿ ಹಿಲ್ ರೆಸಾರ್ಟ್ ಹತ್ತಿರ) ಎತ್ತರದ ಬೆಟ್ಟದ ಪ್ರದೇಶದಲ್ಲಿ ಈ ಐಷಾರಾಮಿ ಪಬ್ ತಲೆಎತ್ತಿದೆ. ಇದಕ್ಕೆ ಝೀರೋ ಡಿಗ್ರಿ ಆನ್ ದಿ ಹಿಲ್ ಬ್ರೂವರಿ ಅಂಡ್ ಕಿಚನ್(Zero Degree on the Hill) ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಬೆಟ್ಟದ ಮೇಲಿರುವ ಈ ಪಬ್‌ನಿಂದ ಇಡೀ ಬೆಂಗಳೂರು ಸಿಟಿಯ ನೈಟ್‌ಲೈಫ್ ಸುಂದರವಾಗಿ ಕಣ್ಣಿಗೆ ಕಟ್ಟುತ್ತದೆ.

ಅದ್ಭುತ ಥೀಮ್: ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯದ ಥೀಮ್‌ಗಳನ್ನು ಇಲ್ಲಿ ಮಿಕ್ಸ್ ಮಾಡಲಾಗಿದೆ.

ಪ್ರಕೃತಿಯ ಸೌಂದರ್ಯ: ಕೃತಕ ಬಂಡೆಗಳು, ನೀರಿನ ಕೊಳಗಳು, ಮತ್ತು ಮನುಷ್ಯನ ಮುಖದಾಕೃತಿಯಲ್ಲಿ ಹರಿಯುವ ನೀರಿನ ಝರಿ (Waterfalls) ಇಲ್ಲಿದೆ.

ಯೂತ್ಸ್ ಫೇವರೆಟ್ ವಿನ್ಯಾಸ: ಗುಡಿಸಲು ಮತ್ತು ಅರಮನೆ ಮಾದರಿಯ ವಿನ್ಯಾಸ, ಸಿಂಹ ಮತ್ತು ಹುಲಿ ಬಾಯಿಯ ಕೌಂಟರ್‌ಗಳು, ಗುಹೆಯಾಕಾರದ ತಾಣ ಹಾಗೂ ಹಳ್ಳಿ ಸೊಗಡಿನ ನೆಲಹಾಸು ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್‌ಸ್ಟಾಗ್ರಾಮ್ ಪ್ರಿಯರು ಮತ್ತು ರೀಲ್ಸ್ ಪ್ರೇಮಿಗಳಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರತಿಯೊಂದು ಮೂಲೆಯೂ ಅದ್ಭುತ ಬ್ಯಾಕ್‌ಗ್ರೌಂಡ್ ನೀಡುತ್ತದೆ.

View this post on Instagram

A post shared by Amulya (@nimmaamulya)

ದೊಡ್ಮನೆ ಉದ್ಘಾಟನೆಗೆ ಹರಿದುಬಂದ ಸ್ಯಾಂಡಲ್‌ವುಡ್ ತಾರಾಗಣ

ಅಮೂಲ್ಯ-ಜಗದೀಶ್ ದಂಪತಿಯ ಈ ಹೊಸ ಉದ್ಯಮದ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್‌ವುಡ್‌ ದಿಗ್ಗಜರೇ ಹರಿದುಬಂದಿದ್ದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ, ನಟ ಶರಣ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಸತೀಶ್ ನೀನಾಸಂ, ಆರಾಧನಾ ರಾಮ್, ದಿಶಾ ಮದನ್, ಪ್ರಗತಿ ಶೆಟ್ಟಿ (ರಿಷಬ್ ಶೆಟ್ಟಿ ಪತ್ನಿ) ಹಾಗೂ ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್ ಸೇರಿದಂತೆ ಘಟಾನುಘಟಿ ಸ್ಟಾರ್ ಸೆಲೆಬ್ರಿಟಿಗಳು ಭಾಗವಹಿಸಿ ಹೊಸ ಉದ್ಯಮಕ್ಕೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಸ್ವತಃ ನಟಿ ಅಮೂಲ್ಯ ಅವರೇ ವಿಡಿಯೋ ಮೂಲಕ ಪಬ್‌ನ ಮೂಲೆ ಮೂಲೆಗಳನ್ನು ಎಕ್ಸ್‌ಪ್ಲೋರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ