LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೆಜ್ ಬದಲಿಗೆ ನಾನ್ ವೆಜ್ ಬರ್ಗರ್ ನೀಡಿದ ಜೊಮ್ಯಾಟೊ, ಹೋಟೆಲ್ ಮಾಲೀಕರಿಗೆ ದಂಡ

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೆಜ್ ಬರ್ಗರ್ ಬದಲಿಗೆ ಮಾಂಸಾಹಾರಿ(ನಾನ್‌ವೆಜ್) ಬರ್ಗರ್ ತಲುಪಿಸಿ ಸೇವಾ ನ್ಯೂನತೆ ಎಸಗಿದ ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ (Zomato) ಮತ್ತು ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದೆ.

 ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಪ್ರಮುಖ ವಕೀಲ ಚಾಂದ್  ಎಸ್. ಅವರು ವಾದ ಮಂಡಿಸಿದ್ದರು. ಘಟನೆಯ ಹಿನ್ನೆಲೆ ಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆ ನಿವಾಸಿಯಾದ ನಂದೀಶ್ ಎಂಬುವವರು 2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಜೊಮ್ಯಾಟೊ ಆ್ಯಪ್ ಮೂಲಕ ₹313.15 ಪಾವತಿಸಿ ಸಸ್ಯಾಹಾರಿ ಬರ್ಗರ್ ಆರ್ಡರ್ ಮಾಡಿದ್ದರು.

ಆದರೆ, ಅವರಿಗೆ ಸಸ್ಯಾಹಾರದ ಬದಲಾಗಿ ಮಾಂಸಾಹಾರಿ ಬರ್ಗರ್ ವಿತರಿಸಲಾಗಿತ್ತು. ಗ್ರಾಹಕರು ಈ ಬಗ್ಗೆ ಸಂಸ್ಥೆಗೆ ದೂರು ನೀಡಿದಾಗ, ಜೊಮ್ಯಾಟೊ ಕೇವಲ ಬರ್ಗರ್‌ ನ ಹಣವನ್ನು ಮರುಪಾವತಿಸಿ ಕೈತೊಳೆದುಕೊಂಡಿತ್ತು. ಆದರೆ, ಪವಿತ್ರವಾದ ಗಣೇಶ ಹಬ್ಬದ ದಿನದಂದೇ ಮನೆಯೊಳಗೆ ಮಾಂಸಾಹಾರಿ ಆಹಾರ ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರಾದ ಚಾಂದ್ ಎಸ್. ಅವರ ಮೂಲಕ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.

ಕಂಪನಿಯ ವಾದ ವಿಚಾರಣೆ ವೇಳೆ ಜೊಮ್ಯಾಟೊ ಸಂಸ್ಥೆಯು, “ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ಆನ್‌ಲೈನ್ ವೇದಿಕೆಯಾಗಿದ್ದು(ಪ್ಲಾಟ್‌ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್‌ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ” ಎಂದು ವಾದಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತು.

ಆಯೋಗದ ಮಹತ್ವದ ತೀರ್ಪು

ದೂರುದಾರರ ಪರ ವಕೀಲರಾದ ಚಾಂದ್  ಎಸ್. ಅವರು ಮಂಡಿಸಿದ ವಾದ-ಪ್ರತಿವಾದಗಳು, ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು ಸಂಸ್ಥೆಯ ಸೇವಾನ್ಯೂನತೆಯನ್ನು ಎತ್ತಿಹಿಡಿಯಿತು.

ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ:

ಪರಿಹಾರ: ಎದುರುದಾರರಾದ ಜೊಮ್ಯಾಟೊ ಸಿಇಒ(ಗುರುಗ್ರಾಮ, ಹರಿಯಾಣ), ಜೋನಲ್ ಹೆಡ್(ಬೆಂಗಳೂರು) ಮತ್ತು ಶಿವಮೊಗ್ಗದ ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ₹10,000 ಮಾನಸಿಕ ಅಸಮಾಧಾನ ಹಾಗೂ ತೊಂದರೆಗಾಗಿ ಪರಿಹಾರ ನೀಡಬೇಕು.

ಪ್ರಕರಣದ ವೆಚ್ಚ: ಕಾನೂನು ಹೋರಾಟದ ವೆಚ್ಚವಾಗಿ ಹೆಚ್ಚುವರಿಯಾಗಿ ₹10,000 ಗಳನ್ನು ಪಾವತಿಸಬೇಕು.

ಗಡುವು: ಈ ಒಟ್ಟು ಮೊತ್ತವನ್ನು ಆದೇಶ ಹೊರಬಿದ್ದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಖಡಕ್ ಆದೇಶ ನೀಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING NEWS: 90ನೇ ಹುಟ್ಟುಹಬ್ಬಕ್ಕೆ 10 ದಿನ ಇರುವಾಗಲೇ ವೆಸ್ಟ್ ಇಂಡೀಸ್ ಕ್ರಿಕೆಟ್ ಲೆಜೆಂಡ್ ‘ಸರ್ ಗ್ಯಾರಿ ಸೋಬರ್ಸ್’ ವಿಧಿವಶ | Sir Garry Sobers Passes Awayಅಭಿವೃದ್ಧಿ ನೆಪದಲ್ಲಿ ರಿಯಲ್ ಎಸ್ಟೇಟ್, ಹೈಕಮಾಂಡ್ ಗೆ ಗಿಫ್ಟ್ ಕೊಡಲು ಟೌನ್ ಶಿಪ್: ಯತ್ನಾಳ್ ಆರೋಪಹವಾಮಾನ ಇಲಾಖೆಯಿಂದ ಭಾರೀ ಮಳೆ ಮುನ್ಸೂಚನೆ: ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆBREAKING NEWS: ಮೆಕ್ಸಿಕೋದಲ್ಲಿ 7.3 ತೀವ್ರತೆಯ ಭಾರೀ ಪ್ರಬಲ ಭೂಕಂಪ: ದಕ್ಷಿಣ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆಸಾರಿಗೆ ಸಂಸ್ಥೆಯ ಬಸ್ ಚಕ್ರಕ್ಕೆ ಸಿಲುಕಿ ವಿದ್ಯಾರ್ಥಿನಿ ಸಾವುಬಿಜೆಪಿ ಟಿಕೆಟ್‌ ನಲ್ಲಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಟಿಎಂಸಿ ಬಂಡಾಯಗಾರರಾದ ​​ಸುಖೇಂದು ಶೇಖರ್ ರಾಯ್, ಸುಶ್ಮಿತಾ ದೇವ್, ಪ್ರಕಾಶ್ ಬರೈಕ್ಎರಡನೇ ವಿಮಾನ ನಿಲ್ದಾಣ ವಿಚಾರ: ಸಿಎಂ ಡಿ.ಕೆ.ಶಿವಕುಮಾರ್ ಗೆ ಬಹಿರಂಗ ಪತ್ರ ಬರೆದ ವಿಜಯೇಂದ್ರಧಾರವಾಡದಲ್ಲಿ ಶೀಘ್ರದಲ್ಲಿಯೇ ಕ್ರೀಡಾ ಸಂಕೀರ್ಣ ಪ್ರಾರಂಭ: ಕೇಂದ್ರ ಸಚಿವ ಪ್ರಲ್ಹಾದ ಜೋಶಿವೆಜ್ ಬದಲಿಗೆ ನಾನ್ ವೆಜ್ ಬರ್ಗರ್ ನೀಡಿದ ಜೊಮ್ಯಾಟೊ, ಹೋಟೆಲ್ ಮಾಲೀಕರಿಗೆ ದಂಡಪ್ರೀತಿಸಿ ಮದುವೆಯಾಗಿದ್ರೂ ಮತ್ತೊಬ್ಬನೊಂದಿಗೆ ಚಾಟಿಂಗ್ ಮಾಡ್ತಿದ್ದ ಅಪ್ರಾಪ್ತೆಗೆ ಗುಂಡು ಹಾರಿಸಿ ಕೊಲೆ: ಶವ ಹೂತಿಟ್ಟಿದ್ದ ಅಪ್ರಾಪ್ತ ಪತಿ ಸೇರಿ ಮೂವರು ಅರೆಸ್ಟ್