LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಯೂರಿಕ್ ಆಸಿಡ್ ಹೆಚ್ಚಾದರೆ ಕೈ-ಕಾಲುಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು? ಕಡಿಮೆ ಮಾಡಲು ಏನು ತಿನ್ನಬೇಕು ?

ಇತ್ತೀಚಿನ ದಿನಗಳಲ್ಲಿ ಯೂರಿಕ್ ಆಸಿಡ್ (Uric Acid) ಸಮಸ್ಯೆ ಅನೇಕರನ್ನು ಕಾಡುತ್ತಿದೆ. ಹಲವರು ಇದನ್ನು ಕೇವಲ ಗೌಟ್ (Gout) ಅಥವಾ ಕಾಲಿನ ಹೆಬ್ಬೆರಳಿನ ನೋವಿಗೆ ಮಾತ್ರ ಸಂಬಂಧಿಸಿದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ, ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದು ಕೈಗಳು, ಕಾಲುಗಳು, ಮೊಣಕಾಲುಗಳು, ಮಣಿಕಟ್ಟು ಸೇರಿದಂತೆ ಹಲವು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ.

ನಾವು ಸೇವಿಸುವ ರೆಡ್ ಮೀಟ್, ಮದ್ಯ, ಕೆಲವು ಬೇಳೆಕಾಳುಗಳು ಮುಂತಾದ ಆಹಾರಗಳಲ್ಲಿ ಪ್ಯೂರಿನ್‌ಗಳು (Purines) ಇರುತ್ತವೆ. ದೇಹವು ಇವುಗಳನ್ನು ಜೀರ್ಣಿಸುವಾಗ ಯೂರಿಕ್ ಆಸಿಡ್ ಉತ್ಪತ್ತಿಯಾಗುತ್ತದೆ. ಸಾಮಾನ್ಯವಾಗಿ ಇದು ಮೂತ್ರಪಿಂಡಗಳ ಮೂಲಕ ಶೋಧನೆಗೊಂಡು ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಯೂರಿಕ್ ಆಸಿಡ್ ಅಧಿಕವಾದರೆ, ಅದು ರಕ್ತದಲ್ಲಿ ಸಂಗ್ರಹವಾಗಿ ಸ್ಫಟಿಕಗಳಾಗಿ (Crystals) ಕೀಲುಗಳ ಸುತ್ತ ಸೇರಿ ತೀವ್ರ ನೋವು ಮತ್ತು ಊತಕ್ಕೆ ಕಾರಣವಾಗುತ್ತದೆ.

ಯೂರಿಕ್ ಆಸಿಡ್ ಹೆಚ್ಚಾದಾಗ ಕಾಣಿಸಿಕೊಳ್ಳುವ ಲಕ್ಷಣಗಳು

1. ಕಾಲಿನ ಬೆರಳು ಹಾಗೂ ಹಿಮ್ಮಡಿಯಲ್ಲಿ ತೀವ್ರ ನೋವು
ಗೌಟ್‌ನಿಂದ ಕಾಲಿನ ಹೆಬ್ಬೆರಳಿನಲ್ಲಿ ನೋವು ಸಾಮಾನ್ಯ. ಆದರೆ ಹಿಮ್ಮಡಿಯಲ್ಲಿಯೂ ಯೂರಿಕ್ ಆಸಿಡ್ ಸ್ಫಟಿಕಗಳು ಸೇರಿ, ಬೆಳಿಗ್ಗೆ ಎದ್ದಾಗ ಅಥವಾ ಹೆಚ್ಚು ಹೊತ್ತು ಕುಳಿತು ಎದ್ದಾಗ ತೀವ್ರ ಚುಚ್ಚುವಂತ ನೋವು ಉಂಟಾಗಬಹುದು.

2. ಕೈ ಬೆರಳುಗಳಲ್ಲಿ ಊತ ಮತ್ತು ಕೆಂಪಾಗುವುದು
ಕೈ ಬೆರಳುಗಳು ಏಕಾಏಕಿ ಊದಿಕೊಂಡು, ಕೆಂಪಾಗಿ, ಬಿಗಿಯಾಗಿ ಕಂಡುಬಂದರೆ ಅದು ಯೂರಿಕ್ ಆಸಿಡ್ ಹೆಚ್ಚಳದ ಲಕ್ಷಣವಾಗಿರಬಹುದು. ಈ ಭಾಗ ಮುಟ್ಟಿದರೆ ಬಿಸಿಯಾಗಿರುವಂತೆ ಅನಿಸುತ್ತದೆ.

3. ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ
ಯೂರಿಕ್ ಆಸಿಡ್ ಸ್ಫಟಿಕಗಳು ನರಗಳ ಮೇಲೂ ಒತ್ತಡ ಉಂಟುಮಾಡಬಹುದು. ಇದರಿಂದ ಸೂಜಿ ಚುಚ್ಚಿದಂತ ಅನುಭವ, ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಕಾಣಿಸಬಹುದು. ರಾತ್ರಿ ವೇಳೆ ಈ ಸಮಸ್ಯೆ ಹೆಚ್ಚಾಗಬಹುದು.

4. ಮಣಿಕಟ್ಟು ಹಾಗೂ ಪಾದದ ಕೀಲುಗಳ ಚಲನೆ ಕಡಿಮೆಯಾಗುವುದು
ದೀರ್ಘಕಾಲ ಯೂರಿಕ್ ಆಸಿಡ್ ಕೀಲುಗಳಲ್ಲಿ ಸಂಗ್ರಹವಾದರೆ ಮಣಿಕಟ್ಟನ್ನು ತಿರುಗಿಸುವುದು, ಬರೆಯುವುದು, ಬಾಟಲಿ ಮುಚ್ಚಳ ತೆರೆಯುವುದು ಅಥವಾ ನಡೆಯುವುದೂ ಕಷ್ಟವಾಗಬಹುದು.

5. ಮೊಣಕಾಲು ಹಾಗೂ ಮೊಣಕೈಗಳಲ್ಲಿ ಬಿಗಿತ
ಬೆಳಿಗ್ಗೆ ಎದ್ದಾಗ ಮೊಣಕಾಲು ಅಥವಾ ಮೊಣಕೈ ಗಟ್ಟಿಯಾದಂತೆ, ಚಲಿಸಲು ಕಷ್ಟವಾದರೆ ಅದು ಯೂರಿಕ್ ಆಸಿಡ್‌ನ ಪರಿಣಾಮವಾಗಿರಬಹುದು.

6. ಚರ್ಮದ ಕೆಳಗೆ ಗಟ್ಟಿಯಾದ ಗಡ್ಡೆಗಳು (Tophi)
ಯೂರಿಕ್ ಆಸಿಡ್ ದೀರ್ಘಕಾಲ ಹೆಚ್ಚಿದ್ದರೆ ಚರ್ಮದ ಕೆಳಗೆ ಬಿಳಿ ಬಣ್ಣದ ಗಟ್ಟಿಯಾದ ಗಡ್ಡೆಗಳು ಉಂಟಾಗಬಹುದು. ಇವುಗಳನ್ನು ಟೋಫಿ (Tophi) ಎಂದು ಕರೆಯಲಾಗುತ್ತದೆ. ಇವು ಸಾಮಾನ್ಯವಾಗಿ ಕೈ ಬೆರಳು, ಪಾದ ಹಾಗೂ ಹಿಮ್ಮಡಿಯ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.

7. ಅಂಗೈ ಮತ್ತು ಪಾದದ ತಳದಲ್ಲಿ ಉರಿ
ಕೆಲವರಲ್ಲಿ ಅಂಗೈ ಅಥವಾ ಪಾದದ ತಳದಲ್ಲಿ ತೀವ್ರ ಉರಿ ಹಾಗೂ ಅತಿಯಾದ ಸಂವೇದನೆ ಕಾಣಿಸಿಕೊಳ್ಳಬಹುದು. ಇದಕ್ಕೂ ಯೂರಿಕ್ ಆಸಿಡ್ ಕಾರಣವಾಗಿರಬಹುದು.

ಯೂರಿಕ್ ಆಸಿಡ್ ಹೆಚ್ಚಾದರೆ ಉಂಟಾಗುವ ಇತರ ಸಮಸ್ಯೆಗಳು

  • ಮೂತ್ರಪಿಂಡದ ಕಲ್ಲುಗಳು (Kidney Stones) ಮತ್ತು ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯ ಅಪಾಯ.
  • ಅಧಿಕ ರಕ್ತದೊತ್ತಡ (BP), ಮಧುಮೇಹ (ಇನ್ಸುಲಿನ್ ಪ್ರತಿರೋಧ) ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗಬಹುದು.

ಯೂರಿಕ್ ಆಸಿಡ್ ಕಡಿಮೆ ಮಾಡಲು ಏನು ಮಾಡಬೇಕು?

  • ದಿನಕ್ಕೆ 3–4 ಲೀಟರ್ ನೀರು ಕುಡಿಯಿರಿ. ಇದರಿಂದ ಯೂರಿಕ್ ಆಸಿಡ್ ಮೂತ್ರದ ಮೂಲಕ ಹೊರಹೋಗಲು ಸಹಾಯವಾಗುತ್ತದೆ.
  • ವಿಟಮಿನ್-ಸಿ ಸಮೃದ್ಧ ಹಣ್ಣುಗಳು – ನಿಂಬೆ, ಕಿತ್ತಳೆ, ನೆಲ್ಲಿಕಾಯಿ ಸೇವಿಸಿ.
  • ಕಡಿಮೆ ಕೊಬ್ಬಿನ ಹಾಲು ಮತ್ತು ಮೊಸರು ಸೇವಿಸುವುದು ಗೌಟ್ ಅಪಾಯವನ್ನು ಕಡಿಮೆ ಮಾಡಬಹುದು.
  • ಚೆರ್ರಿ ಹಣ್ಣುಗಳನ್ನು (Cherries) ಸೇವಿಸುವುದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕ ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.

ಸೂಚನೆ: ಮೇಲಿನ ಮಾಹಿತಿ ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಯೂರಿಕ್ ಆಸಿಡ್ ಸಂಬಂಧಿತ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ಸೇವಿಸದೆ ವೈದ್ಯರನ್ನು ಸಂಪರ್ಕಿಸಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಉಕ್ರೇನ್‌ ಒಡೆಸಾ ಬಂದರಿನಿಂದ ಹೊರಟಿದ್ದ ಹಡಗಿನ ಮೇಲೆ ದಾಳಿ: ನಾಲ್ವರು ಭಾರತೀಯರು ಸಾವುಅಕ್ರಮ ಮರಳು ದಂಧೆಕೋರರಿಗೆ ಶಾಕ್: 3000 ಮೆಟ್ರಿಕ್ ಟನ್ ಮರಳು ಜಪ್ತಿಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶದಲ್ಲೇ ವ್ಯಕ್ತಿ ಆತ್ಮಹತ್ಯೆವ್ಯವಸ್ಥೆ ಶುದ್ಧೀಕರಿಸದಿದ್ದರೆ ಅರ್ಹತೆ ಇರುವ ಯುವ ಜನತೆ ನರಳುತ್ತಾರೆ: ಶಿವಶಂಕರಪ್ಪ ಸಾಹುಕಾರ್ ವಿರುದ್ಧ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಗೆ ಅರ್ಜಿʻಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆʼಗೆ ಮರು ನಾಮಕರಣ: ʻಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆʼ ಕಡ್ಡಾಯ ಬಳಕೆಗೆ ಆದೇಶಪೆಟ್ರೋಲ್‌ ನಲ್ಲಿ ಎಥೆನಾಲ್ ಮಿಶ್ರಣ 20% ಕ್ಕಿಂತ ಹೆಚ್ಚಿಸಲು ಯಾವುದೇ ನಿರ್ಧಾರ ಕೈಗೊಂಡಿಲ್ಲ: ಕೇಂದ್ರ ಸಚಿವ ಸುರೇಶ್ ಗೋಪಿಚಿನ್ನದ ಬೆಲೆ ಮತ್ತೆ ಏರಿಕೆ ಬೆಳ್ಳಿ ಕೆಜಿಗೆ ₹5,000 ಜಿಗಿತ: ಜುಲೈ 20ರ ಹೊಸ ದರ ಇಲ್ಲಿದೆರಾಜ್ಯ ಸರ್ಕಾರ ತನ್ನ ಅಧಿಕಾರದ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿರುವುದು ಸಂವಿಧಾನ ವ್ಯವಸ್ಥೆಗೆ ವಿರುದ್ಧ: ಆರ್.ಅಶೋಕ್ ಕಿಡಿಉದ್ಯೋಗಾಕಾಂಕ್ಷಿಗಳಿಗೆ ಮುಖ್ಯ ಮಾಹಿತಿ: ಜುಲೈ 23 ರಂದು ಉದ್ಯೋಗ ನೇರ ಸಂದರ್ಶನಚೆನ್ನಮ್ಮ ಇನ್ನು ನೆನಪು ಮಾತ್ರ: ಸ್ವಾಮಿಯ ಸಾನ್ನಿಧ್ಯಕ್ಕೆ ಕಳುಹಿಸಿಕೊಡುತ್ತೇನೆ….ಎನ್ನುತ್ತಾ ಅಂತ್ಯಕ್ರಿಯೆ ವೇಳೆ ಪತ್ನಿ ಬಗ್ಗೆ ಗದ್ಗದಿತರಾದ ಮಾಜಿ ಪ್ರಧಾನಿ ದೇವೇಗೌಡ