ಬೆಂಗಳೂರು: ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯ ಹೆಸರನ್ನು ʻಬೆಂಗಳೂರು ದಕ್ಷಿಣʼ ಜಿಲ್ಲೆ ಎಂದು ಮರುನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ʻಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆʼಯ ಹೆಸರನ್ನು ಆಡಳಿತಾತ್ಮಕ ದೃಷ್ಟಿಯಿಂದ ʻಬೆಂಗಳೂರು ಕೇಂದ್ರ (Bangalore Central) ಶೈಕ್ಷಣಿಕ ಜಿಲ್ಲೆʼ ಎಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಇನ್ನು ಮುಂದೆ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಚೇರಿಗಳು ಹಾಗೂ ಇಲಾಖೆಯ ಎಲ್ಲಾ ತಂತ್ರಾಂಶಗಳು, ವೆಬ್ಸೈಟ್ಗಳು, ದತ್ತಾಂಶ ನಿರ್ವಹಣಾ ವ್ಯವಸ್ಥೆಗಳಲ್ಲಿ, ಸರ್ಕಾರಿ ಆದೇಶ, ಅಧಿಸೂಚನೆ, ಜ್ಞಾಪನೆಗಳಲ್ಲಿ, ದಾಖಲೆ, ವರದಿಗಳು ಹಾಗೂ ಇತರೆ ಎಲ್ಲಾ ಅಧಿಕೃತ ದಾಖಲಾತಿಗಳಲ್ಲಿ ʻಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆʼ ಎಂಬ ಹೆಸರನ್ನೇ ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ.
ಷರತ್ತುಗಳು :
1. ಕಂದಾಯ ಇಲಾಖೆಯ ಅಧಿಸೂಚನೆಯನ್ವಯ “ರಾಮನಗರ” ಜಿಲ್ಲೆಯ ಹೆಸರನ್ನು “ಬೆಂಗಳೂರು ದಕ್ಷಿಣ” ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದರಿಂದ, ಇನ್ನು ಮುಂದೆ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ಸರ್ಕಾರಿ ಆದೇಶಗಳು, ಅಧಿಸೂಚನೆಗಳು, ಅಧಿಕೃತ ದಾಖಲೆಗಳು ಹಾಗೂ ಇಲಾಖೆಯ ಎಲ್ಲಾ ತಂತ್ರಾಂಶಗಳಲ್ಲಿ “ಬೆಂಗಳೂರು ದಕ್ಷಿಣ ಜಿಲ್ಲೆ” ಎಂಬ ಹೆಸರನ್ನೇ ಕಡ್ಡಾಯವಾಗಿ ಬಳಸತಕ್ಕದ್ದು
2. ಈ ಆದೇಶ ಹೊರಡಿಸಿದ ದಿನಾಂಕದಿಂದಲೇ ಶಾಲಾ ಶಿಕ್ಷಣ ಇಲಾಖೆಯ ಪ್ರಸ್ತುತ “ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ”ಯನ್ನು “ಬೆಂಗಳೂರು ಕೇಂದ್ರ (Bengaluru Central) ಶೈಕ್ಷಣಿಕ ಜಿಲ್ಲೆ” ಎಂದು ಹಾಗೂ “ರಾಮನಗರ” ಜಿಲ್ಲೆಯ ಹೆಸರನ್ನು “ಬೆಂಗಳೂರು ದಕ್ಷಿಣ” ಜಿಲ್ಲೆ ಎಂದು ಪರಿಗಣಿಸತಕ್ಕದ್ದು.
3. ಇನ್ನು ಮುಂದೆ ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ಕಚೇರಿಗಳು ಹಾಗೂ ಇಲಾಖೆಯ ಎಲ್ಲಾ ತಂತ್ರಾಂಶಗಳು, ವೆಬ್ಸೈಟ್ಗಳು, ದತ್ತಾಂಶ ನಿರ್ವಹಣಾ ವ್ಯವಸ್ಥೆಗಳಲ್ಲಿ, ಅಧಿಕೃತ ವತ್ರ ವ್ಯವಹಾರಗಳು, ಸರ್ಕಾರಿ ಆದೇಶಗಳು, ಅಧಿಸೂಚನೆಗಳು, ಜ್ಞಾಪನೆಗಳು, ದಾಖಲೆಗಳು, ವರದಿಗಳು, ಮುದ್ರಿತ ನಮೂನೆಗಳು ಹಾಗೂ ಇತರ ಎಲ್ಲಾ ಅಧಿಕೃತ ದಾಖಲಾತಿಗಳಲ್ಲಿ ” ಬೆಂಗಳೂರು ಕೇಂದ್ರ ಶೈಕ್ಷಣಿಕ ಜಿಲ್ಲೆ “ಎಂಬ ಹೆಸರನ್ನೇ ಕಡ್ಡಾಯವಾಗಿ ಬಳಸತಕ್ಕದ್ದು.
4. ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಬೆಂಗಳೂರು ಇವರು ಈ ಆದೇಶವನ್ನು ಮತ್ತು ಈ ಸಂಬಂಧ ಹೊರಡಿಸಲಾಗುವ ಸುತ್ತೋಲೆಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸತಕ್ಕದ್ದು.
5. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ (SSK) ಇವರು ಈ ಸಂಬಂಧ UDISE+ ತಂತ್ರಾಂಶ ಮತ್ತು ದತ್ತಾಂಶ ವ್ಯವಸ್ಥೆಯಲ್ಲಿ ಅಗತ್ಯ ತಿದ್ದುಪಡಿಗಳು ಹಾಗೂ ನವೀಕರಣಗಳನ್ನು ಅಳವಡಿಸಲು ಕ್ರಮಕೈಗೊಳ್ಳತಕ್ಕದ್ದು ಎಂದು ತಿಳಿಸಲಾಗಿದೆ.
ಚಿತ್ರಕೃಪೆ:ಎಐ

