ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಬಗ್ಗೆ ಈಗಾಗಲೇ ಚಿತ್ರರಂಗದಲ್ಲಿ ಮತ್ತು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ದಿಕ್ಸೂಚಿ ಚಿತ್ರದ ಕುರಿತು ಇದೀಗ ಪ್ರಸಿದ್ಧ ಜ್ಯೋತಿಷಿ ಹಾಗೂ ಟ್ಯಾರೋ ಕಾರ್ಡ್ ರೀಡರ್ ರಿನಿ ಸುಬ್ಬರ್ವಾಲ್ ಪ್ರಮುಖ ಭವಿಷ್ಯ ನುಡಿದಿದ್ದಾರೆ. ಸಿದ್ಧಾರ್ಥ್ ಕನ್ನನ್ ಅವರ ಪಾಡ್ ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರದರ್ಶನ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ ತಿಂಗಳ ನಂತರ ಈ ಸಿನಿಮಾ ಬಿಡುಗಡೆಯಾದರೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಗಳಿಸಲಿದೆ ಎಂಬುದು ರಿನಿ ಅವರ ಗಣನೆಯಾಗಿದೆ. ಆದರೆ ಇದೇ ವೇಳೆ ಚಿತ್ರಕ್ಕೆ ಪ್ರೇಕ್ಷಕರಿಂದ ತೀವ್ರ ಟೀಕೆಗಳು ಮತ್ತು ಹೋಲಿಕೆಗಳ ಎದುರಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಹಿಂದೆ ತೆರೆಗೆ ಬಂದಿರುವ ರಾಮಾಯಣ ಆಧಾರಿತ ಧಾರಾವಾಹಿ ಅಥವಾ ಸಿನಿಮಾಗಳಿಗೆ ಹೋಲಿಸಿ ನೋಡುವುದರಿಂದ ಇಂತಹ ವಿಮರ್ಶೆಗಳು ಬರುತ್ತವೆ. ಆದರೆ ವೀಕ್ಷಕರು ಇದನ್ನು ಕೇವಲ ಒಂದು ಸೃಜನಶೀಲ ಸಿನಿಮಾ ಪ್ರಯತ್ನವಾಗಿ ಮಾತ್ರ ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನಟರ ವೈಯಕ್ತಿಕ ಜೀವನ ಮತ್ತು ಆಹಾರ ಪದ್ಧತಿಯನ್ನು ಅವರು ನಿರ್ವಹಿಸುವ ಪೌರಾಣಿಕ ಪಾತ್ರಗಳಿಗೆ ಮುಡಿಪಾಗಿಟ್ಟು ನೋಡುವುದು ಸರಿಯಲ್ಲ ಎಂದು ರಿನಿ ತಿಳಿಸಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರ ಮಾಡುವುದಕ್ಕೆ ಕೆಲವರು ಎತ್ತುತ್ತಿರುವ ಆಕ್ಷೇಪಣೆಗಳಿಗೆ ಉತ್ತರ ನೀಡಿರುವ ಅವರು, ಬೆಳ್ಳಿತೆರೆಯ ಅಭಿನಯವನ್ನು ಕಲಾತ್ಮಕ ದೃಷ್ಟಿಕೋನದಿಂದಷ್ಟೇ ಸ್ವೀಕರಿಸಬೇಕು ಎಂದಿದ್ದಾರೆ. ಸರಿಯಾದ ಸಮಯದಲ್ಲಿ ಬಿಡುಗಡೆಯಾದರೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಈ ಬೃಹತ್ ಕ್ಯಾನ್ವಾಸ್ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಿದ್ದಾರೆ. ಲಕ್ಷಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ರಾವಣನ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿದ್ದಾರೆ. ಶೂರ್ಪಣಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಕಾಣಿಸಿಕೊಳ್ಳಲಿದ್ದು, ಲಾರಾ ದತ್ತಾ, ಅರುಣ್ ಗೋವಿಲ್ ಹಾಗೂ ವಿವೇಕ್ ಒಬೆರಾಯ್ ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಸಿನಿಯಾನದ ಮೊದಲ ಭಾಗವನ್ನು ದೀಪಾವಳಿ ಹಬ್ಬದ ವೇಳೆಗೆ ತೆರೆಗೆ ತರಲು ಚಿತ್ರತಂಡ ಯೋಜಿಸಿದೆ.