LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಜೆ ಸ್ನ್ಯಾಕ್ಸ್‌ಗೆ ಹೇಳಿಮಾಡಿಸಿದ ಟೇಸ್ಟಿ ಖಾದ್ಯ: ಮನೆಯಲ್ಲೇ ಮಾಡಿ ಖಾರ-ಖಾರ ಡ್ರೈ ಚಿಲ್ಲಿ ಪನ್ನೀರ್

ಸಂಜೆ ವೇಳೆ ಸವಿಯಲು ಅಥವಾ ದಿಢೀರ್ ಆಗಿ ಏನಾದರೂ ರುಚಿಕರವಾದ ತಿನಿಸು ಬೇಕೆನಿಸಿದಾಗ ಮನೆಯಲ್ಲೇ ಸುಲಭವಾಗಿ ಡ್ರೈ ಚಿಲ್ಲಿ ಪನ್ನೀರ್ ತಯಾರಿಸಬಹುದು. ರೆಸ್ಟೋರೆಂಟ್ ಶೈಲಿಯ ಈ ಖಾದ್ಯವನ್ನು ಯಾವುದೇ ಶ್ರಮವಿಲ್ಲದೆ ಕೇವಲ 20 ನಿಮಿಷಗಳಲ್ಲಿ ಸಿದ್ಧಪಡಿಸಬಹುದು.

ಅಗತ್ಯವಿರುವ ಸಾಮಗ್ರಿಗಳು:

  • ಪನ್ನೀರ್ – 1 ಕಪ್ (ಕ್ಯೂಬ್ ಆಕಾರದಲ್ಲಿ ಹೆಚ್ಚಿದ್ದು)

  • ಈರುಳ್ಳಿ – 1 (ದೊಡ್ಡದಾಗಿ ಹೆಚ್ಚಿದ್ದು)

  • ಕ್ಯಾಪ್ಸಿಕಂ – 1 (ದೊಡ್ಡದಾಗಿ ಹೆಚ್ಚಿದ್ದು)

  • ಹಸಿಮೆಣಸಿನಕಾಯಿ – 2 ರಿಂದ 3 (ದೊಡ್ಡದಾಗಿ ಹೆಚ್ಚಿದ್ದು)

  • ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಚಮಚ

  • ಸಣ್ಣಗೆ ಹೆಚ್ಚಿದ ಶುಂಠಿ – 1 ಚಮಚ

  • ಸೋಯಾ ಸಾಸ್ – 1 ಚಮಚ

  • ಟೊಮೆಟೊ ಸಾಸ್ – 1 ರಿಂದ 2 ಚಮಚ

  • ವಿನೆಗರ್ – ಅರ್ಧ ಚಮಚ

  • ಇತರೆ: ಸಪ್ರಿಂಗ್ ಆನಿಯನ್, ಎಣ್ಣೆ, ಉಪ್ಪು, ಕಪ್ಪು ಮೆಣಸಿನ ಪುಡಿ ಮತ್ತು ಚಿಟಿಕೆ ಸಕ್ಕರೆ

ತಯಾರಿಸುವ ವಿಧಾನ: ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಪನ್ನೀರ್ ತುಂಡುಗಳನ್ನು ಹಗುರವಾಗಿ ಫ್ರೈ ಮಾಡಿ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಮತ್ತಷ್ಟು ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಬಾಡಿಸಿ. ನಂತರ ಈರುಳ್ಳಿ ಹಾಕಿ ಹೆಚ್ಚಿನ ಉರಿಯಲ್ಲಿ ತಿಳಿ ಬಣ್ಣ ಬರುವವರೆಗೆ ಹುರಿಯಿರಿ.

ಬಳಿಕ ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ. ಈಗ ಸೋಯಾ ಸಾಸ್, ಟೊಮೆಟೊ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕಪ್ಪು ಮೆಣಸಿನ ಪುಡಿ ಮತ್ತು ಒಂದು ಚಿಟಿಕೆ ಸಕ್ಕರೆ ಸೇರಿಸಿ ಡ್ರೈ ಹದಕ್ಕೆ ಬರುವವರೆಗೆ ತಿರುವಿ.

ಕೊನೆಯಲ್ಲಿ ಫ್ರೈ ಮಾಡಿಟ್ಟ ಪನ್ನೀರ್ ತುಂಡುಗಳು ಹಾಗೂ ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಮೇಲೆ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಉದುರಿಸಿದರೆ ಬಿಸಿಬಿಸಿಯಾದ ಡ್ರೈ ಚಿಲ್ಲಿ ಪನ್ನೀರ್ ಸವಿಯಲು ಸಿದ್ಧ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಾಧ್ಯಂತ ಗಣೇಶ ಹಬ್ಬಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನಿಯೋಜನೆBIG NEWS: ಜೈಲಲ್ಲಿ ಪ್ರಜ್ವಲ್​​​​ ರೇವಣ್ಣ ಕರೆ ಮಾಡಿದ್ದು ಯಾರಿಗೆ ಗೊತ್ತಾ?ದೇವನಹಳ್ಳಿ ಎಂಎಸ್‌ಎಂಇ ತಂತ್ರಜ್ಞಾನ ಕೇಂದ್ರದಿಂದ ವರ್ಷಕ್ಕೆ 10,000 ಮಂದಿಗೆ ಆಧುನಿಕ ಕೌಶಲ್ಯ ತರಬೇತಿ: ರೋಹಿಣಿ ಸಿಂಧೂರಿBIG NEWS: ಇದು ಸಮಗ್ರ ಕರ್ನಾಟಕ ನಿರ್ಮಾಣಕ್ಕೆ ಡಿಕೆಶಿ ನೀಲನಕ್ಷೆ: ಆಡಳಿತದ 100ನೇ ದಿನಕ್ಕೆ 3 ಮಹಾಸಂಕಲ್ಪ, 9 ಯೋಜನೆಗಳ ಘೋಷಣೆಹೇಮಾವತಿ ಕಾಲುವೆಗೆ ಉರುಳಿದ ಅಕ್ಕಿ ಲಾರಿ: ಕ್ಲೀನರ್ ಸಾವು, ಚಾಲಕ ಗಂಭೀರಇದು 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಿಸಿಎಂ ಡಾ.ಜಿ.ಪರಮೇಶ್ವರ್BREAKING: ದಕ್ಷಿಣ ಭಾರತದಲ್ಲೂ ನೇಪಾಳದಂತ ದುರಂತ ಮರುಕಳಿಸಲಿದೆ: ಕೋಡಿಮಠ ಶ್ರೀಗಳ ಸ್ಪೋಟಕ ಭವಿಷ್ಯಭಾರತೀಯ ಮೂಲದ ದಂಪತಿಗಳಿಂದ ಅಮೆರಿಕದ ವಿಶ್ವವಿದ್ಯಾಲಯಕ್ಕೆ ₹167 ಕೋಟಿಗೂ ಅಧಿಕ ದೇಣಿಗೆ₹2.5 ಲಕ್ಷ ಸಾಲಕ್ಕೆ ಸಿವಿಲ್ಸ್ ವಿದ್ಯಾರ್ಥಿ ಬಲಿ; 19 ಮಂದಿಯ ಹೆಸರು ಬರೆದಿಟ್ಟು ಆತ್ಮಹತ್ಯೆ20 ದಿನ ಗೆಸ್ಟ್‌ಹೌಸ್‌ನಲ್ಲಿ ವಾಸವಿದ್ದ ನವವಿವಾಹಿತ ಜೋಡಿ ಕೊನೆಗೆ ಶವವಾಗಿ ಪತ್ತೆ! ನಡೆದಿದ್ದೇನು..?