LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಶ್ರಮ, ಆರ್ಥಿಕ ಶಿಸ್ತಿನಿಂದ ಉದ್ಯಮದಲ್ಲಿ ಯಶಸ್ಸು: ಸಾಗರದಲ್ಲಿ ಆನಂದ ಸುವರ್ಣ ಅಭಿಮತ

ಸಾಗರ: ಸ್ವಂತ ಉದ್ಯಮ ಆರಂಭಿಸಲು ಬಯಸುವ ಅರ್ಹ ಸದಸ್ಯರಿಗೆ ಸೂಕ್ತ ಆರ್ಥಿಕ ನೆರವು ನೀಡಿ, ಅವರ ಬದುಕನ್ನು ಸ್ವಾವಲಂಬಿಯಾಗಿಸುವ ಉದ್ದೇಶದಿಂದ ಸಿಡ್ಬಿ ಪ್ರಯಾಸ್ (SIDBI Prayaas) ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದ್ದಾರೆ.

ಪಟ್ಟಣದ ಯೋಜನಾ ಕಚೇರಿಯಲ್ಲಿ ಸ್ವ-ಉದ್ಯೋಗ ಆರಂಭಿಸುವ ಆಸಕ್ತ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ವಿಶೇಷ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಗತಿಬಂಧು ಸ್ವಸಹಾಯ ಸಂಘಗಳ ಅರ್ಹ ಸದಸ್ಯರಿಗೆ ಈ ಯೋಜನೆಯ ಮೂಲಕ ಆರ್ಥಿಕ ಉತ್ತೇಜನ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಪರಿಶ್ರಮ ಮತ್ತು ಗುಣಮಟ್ಟವೇ ಯಶಸ್ಸಿನ ಮೂಲಮಂತ್ರ

ಹೊರನೋಟಕ್ಕೆ ಸ್ವಂತ ಉದ್ಯಮ ನಡೆಸುವುದು ಸುಲಭವೆನಿಸಿದರೂ, ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಶ್ರಮವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಯಾವುದೇ ವಹಿವಾಟು ಆರಂಭಿಸುವ ಮೊದಲು ಅದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮತ್ತು ವೃತ್ತಿಪರ ಬದ್ಧತೆ ಇರಬೇಕು. ಉತ್ಪಾದನೆ ಅಥವಾ ಸೇವೆಯಲ್ಲಿ ಗುಣಮಟ್ಟ ಕಾಪಾಡಿಕೊಂಡಾಗ ಗ್ರಾಹಕರ ವಿಶ್ವಾಸ ಗಳಿಸಬಹುದು. ನಗುಮುಖದ ಸಮಯೋಚಿತ ಸೇವೆ ಮತ್ತು ಪ್ರಾಮಾಣಿಕತೆ ವ್ಯಾಪಾರವನ್ನು ಸುಸ್ಥಿರವಾಗಿ ಬೆಳೆಸುತ್ತದೆ ಎಂದು ಸುವರ್ಣ ಕಿವಿಮಾತು ಹೇಳಿದರು.

ಬಂಡವಾಳದ ಸದ್ಬಳಕೆ ಹಾಗೂ ಆರ್ಥಿಕ ಶಿಸ್ತು ಅತ್ಯಗತ್ಯ

ಸಂಸ್ಥೆಯಿಂದ ದೊರೆಯುವ ಸಾಲ ಸೌಲಭ್ಯವನ್ನು ವ್ಯಾಪಾರದ ಬೆಳವಣಿಗೆಗೆ ಮಾತ್ರ ಸದ್ಬಳಕೆ ಮಾಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಷ್ಟು ಬಂಡವಾಳವನ್ನು ಪಡೆದು, ಪ್ರತಿಯೊಂದು ಹಂತದಲ್ಲೂ ನಿಖರ ಲೆಕ್ಕಾಚಾರ ಇಟ್ಟುಕೊಳ್ಳುವುದು ಅತ್ಯಗತ್ಯ. ಹಣದ ದುರ್ಬಳಕೆ ಮಾಡದೆ, ವ್ಯವಹಾರದಲ್ಲಿ ಶಿಸ್ತು ಮತ್ತು ತ್ಯಾಗ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಿಡ್ಬಿ ಪ್ರಯಾಸ್ ಯೋಜನೆಯ ಆರ್ಥಿಕ ನೆರವು ನಿಜವಾದ ಪ್ರಗತಿಗೆ ದಾರಿದೀಪವಾಗುತ್ತದೆ ಎಂದು ಅವರು ವಿವರಿಸಿದರು. ಸ್ವಸಹಾಯ ಸಂಘಗಳನ್ನು ತಾಯಿಯಂತೆ ಗೌರವಿಸಿ ಸಂಘಟಿತವಾಗಿ ಮುನ್ನಡೆಯಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕ ದಿನೇಶ್ ಎಂ. ಉಪಸ್ಥಿತರಿದ್ದರು. ತಾಲ್ಲೂಕಿನ ಹಲವು ಭಾಗಗಳಿಂದ ಆಗಮಿಸಿದ್ದ ನೂತನ ಉದ್ಯಮ ಆಕಾಂಕ್ಷಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾರ್ಗದರ್ಶನ ಪಡೆದರು.

ತಾಲ್ಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ. ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೆಕ್ಕ ಪರಿಶೋಧಕ ಭಾಸ್ಕರ್ ವಂದನಾರ್ಪಣೆ ಮಾಡಿದರು. ಕಚೇರಿ ಸಹಾಯಕ ಮಧು ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೈಲಲ್ಲಿ ಪ್ರಜ್ವಲ್ ರೇವಣ್ಣ ಮೊಬೈಲ್ ಬಳಕೆ ಪ್ರಕರಣ: ಜೈಲು ಸಿಬ್ಬಂದಿ ಸೇರಿ ಏಳು ಜನರ ವಿರುದ್ಧ FIR ದಾಖಲುಸತೀಶ್ ಜಾರಕಿಹೊಳಿ ಪರ ಸಿಎಂ ಡಿ.ಕೆ.ಶಿವಕುಮಾರ್ ಬ್ಯಾಟಿಂಗ್: ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ED ದಾಳಿ ಆರೋಪನೇರ ಕಾಲೇಜು ಚುನಾವಣೆಗೆ ಸರ್ಕಾರದ ಆದೇಶ: ನಿಯಮ ಧಿಕ್ಕರಿಸಿ ಮಂಗಳೂರು ವಿವಿಯಲ್ಲಿ ಪರೋಕ್ಷ ಮತದಾನ ಆರೋಪರಾಜ್ಯದ ಜನತೆ ಗಮನಕ್ಕೆ: ಸೆ.19, 20ರಂದು 'ವಿಶೇಷ ಮತದಾರರ ನೋಂದಣಿ ಅಭಿಯಾನ'ಭಾವನಾತ್ಮಕ ಸಂಕಷ್ಟವನ್ನು ಒಬ್ಬರೇ ಎದುರಿಸುತ್ತಿರುವ ಭಾರತದ ಶೇ 49.5ರಷ್ಟು ಯುವಜನತೆ: ಎಂಪವರ್ ಸಮೀಕ್ಷೆ ಬಹಿರಂಗBREAKING: ನ.1ರೊಳಗೆ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಿ: ಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಆದೇಶಪರಿಶ್ರಮ, ಆರ್ಥಿಕ ಶಿಸ್ತಿನಿಂದ ಉದ್ಯಮದಲ್ಲಿ ಯಶಸ್ಸು: ಸಾಗರದಲ್ಲಿ ಆನಂದ ಸುವರ್ಣ ಅಭಿಮತಈ ಸರ್ಕಾರದ ಆಡಳಿತದಲ್ಲಿ ಒಂದೇ ಒಂದು ಉತ್ತಮ ಯೋಜನೆಗಳಿಲ್ಲ: ಛಲವಾದಿ ನಾರಾಯಣಸ್ವಾಮಿಡಿಕೆಶಿ ಸರ್ಕಾರದ 100 ದಿನದ ಸಾಧನೆ ಅಂದ್ರೆ ಅದು ಮೊದಲ ವಿಕೆಟ್ ಬಿದ್ದಿದ್ದು: ಪ್ರತಿಪಕ್ಷ ನಾಯಕ ಆರ್.ಅಶೋಕ್BIG NEWS: ದೇಶದ ನೈಜ ಯಜಮಾನರು ದಲಿತರು ಮತ್ತು ಆದಿವಾಸಿಗಳು: KPCC ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪ್ರತಿಪಾದನೆ