ಬಾಗಲಕೋಟೆ : ರಾಜ್ಯಾಧ್ಯಕ್ಷರ ಬದಲಾವಣೆ ಆಗದೆ ಬಿಜೆಪಿ ಉದ್ಧಾರ ಆಗಲ್ಲ ರಾಜ್ಯಾಧ್ಯಕ್ಷರ ಬದಲಾವಣೆ ಆದರೆ ಇವತ್ತೇ ನಾನು ಬಿಜೆಪಿಗೆ ಸೇರುವ ಸಮಯ ಬರುತ್ತದೆ ಇನ್ನೊಂದು ಎರಡು ತಿಂಗಳು ಆದಮೇಲೆ ಮಾತಾಡೋಣ. ನವೆಂಬರ ಅಂತ್ಯಕ್ಕೆ ರಾಜ್ಯಾಧ್ಯಕ್ಷರ ಅವಧಿ ಮುಗಿಯುತ್ತದೆ. ಇಂತಹ ಅಯೋಗ್ಯ, ಅಸಫಲರನ್ನು ಮುಂದುವರಿಸಿದರೆ ಪಕ್ಷ ಉಳಿಯಲ್ಲ ಎಂದು ಬಾಗಲಕೋಟೆಯಲ್ಲಿ ಶಾಸಕ ಬಸನಗೌಡ ಪಾಟೀಲ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಸತೀಶ್ ಜಾರಕಿಹೊಳಿ ಮನೆಯ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ ದಾಳಿಯನ್ನು ಕಾಂಗ್ರೆಸ್ ಪಕ್ಷದವರೇ ಮಾಡಿಸಿದ್ದು. ಇಡಿ ದಾಳಿಗೆ ಸಿದ್ದರಾಮಯ್ಯನವರ ಶಾಪವೇ ಕಾರಣ. ಸಿದ್ದರಾಮಯ್ಯ ಅವರನ್ನು ಇಳಿಸಿದರೆ ನಮ್ಮ ಅಭ್ಯಂತರ ಇಲ್ಲ ಅಂದರು. ಎಂಬಿ ಪಾಟೀಲ್, ಜಮೀರ್, ಜಾರಕಿಹೊಳಿ ಇವರೆಲ್ಲ ಹೇಳಿದರು 36 ಶಾಸಕರ ಸಹಿ ಮಾಡಿಸಿಕೊಟ್ಟಿದ್ದೆ ಸತೀಶ್ ಜಾರಕಿಹೊಳಿ. ಬಿಜೆಪಿಯಲ್ಲಿ ಇಂತಹದನ್ನು ಮಾಡುವವರು ಯಾರು ಇಲ್ಲ. ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ನಲ್ಲಿಯೇ ದ್ವೇಷ ಇದೆ. ವಾಲ್ಮೀಕಿ ಸಮುದಾಯದಲ್ಲಿ ಒಳ್ಳೆಯ ಲೀಡರ್ ಆಗುತ್ತಿದ್ದಾನೆ.ಒಳ್ಳೆಯ ಲೀಡರ್ ರೆಡಿಯಾಗುತ್ತಿದ್ದಾನೆ ಅಂತ ಹೇಗೆ ಮಾಡಿದರು ಎಂದರು.
ಕೆಪಿಎಸ್ಸಿ ಹಗರಣದ ಹಣದಲ್ಲಿ ವಿಜಯೇಂದ್ರಗೂ ಪಾಲು ಹೋಗಿದೆ ಅದೇ ಹಣದಿಂದ ವಿಜೇಂದ್ರ ಬಳ್ಳಾರಿ ಪಾದಯಾತ್ರೆ ನಡೆಸಿದ್ದಾರೆ ಎಂದು ಶಾಸಕ ಯತ್ನಾಳ್ ಗಂಭೀರವಾಗಿ ಆರೋಪಿಸಿದರು. ಪಾದಯಾತ್ರೆ ಮಾಡುವ ಅವಶ್ಯಕತೆ ಏನಿತ್ತು ಪಾಪ ವೀ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾನೆ. ರಾಜೀನಾಮೆ ಕೊಟ್ಟ ಬಳಿಕ ಪಾದಯಾತ್ರೆ ನಡೆಸುವ ಅವಶ್ಯಕತೆ ಇರಲಿಲ್ಲ. ಬಿ ವೈ ವಿಜಯೇಂದ್ರ ಜೀರೋ ಆಗಿದ್ದಾರೆ. ಅವರನ್ನು ಹೈಕಮಾಂಡ್ ಬದಲಿಸುವುದರಲ್ಲಿದೆ ಹೈ ಕಮಾಂಡ್ ಗಮನ ಸೆಳೆಯಲು ವಿಜಯೇಂದ್ರ ಪಾದಯಾತ್ರೆ ನಡೆಸಿದ್ದಾರೆ.ಅಲ್ಲೂ ಅವರ ಫೋಟೋ ಬರಬೇಕು ಹೊಸ ಬಟ್ಟೆ ಹಾಕಿ ನಾಟಿ ಮಾಡಿದ್ದಾನೆ. ಒಂದು ದಿನವಾದರೂ ಬಿ ವೈ ವಿಜಯೇಂದ್ರ ಹೊಲಕ್ಕೆ ಹೋಗಿದ್ದಾರ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.