LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಂದೆ ಬದುಕಿರುವಾಗಲೇ ಆಸ್ತಿಯಲ್ಲಿ ಮಗಳು ಪಾಲು ಕೇಳಬಹುದೇ? ಕಾನೂನು ನಿಯಮಗಳು ಏನು ಹೇಳುತ್ತವೆ?

ಕುಟುಂಬಗಳಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ವಿವಾದಗಳು ಸಾಮಾನ್ಯ. ಅದರಲ್ಲೂ ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಹಕ್ಕಿದೆಯೇ, ತಂದೆ ಬದುಕಿರುವಾಗಲೇ ಮಗಳು ಪಾಲು ಕೇಳಬಹುದೇ ಎಂಬ ಗೊಂದಲ ಹಲವರಲ್ಲಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಇಂತಹ ಕೌಟುಂಬಿಕ ಕಲಹಗಳನ್ನು ಸುಲಭವಾಗಿ ತಪ್ಪಿಸಬಹುದು. ಈ ಕುರಿತ ಕಾನೂನು ನಿಬಂಧನೆಗಳ ವಿವರ ಇಲ್ಲಿದೆ.

ಪೂರ್ವಜರ ಆಸ್ತಿಯಲ್ಲಿ ಸಮಾನ ಹಕ್ಕು

ತಂದೆಗೆ ತನ್ನ ಪೂರ್ವಜರಿಂದ (ಅಜ್ಜ-ಮುತ್ತಜ್ಜರಿಂದ) ಬಂದ ಪಿತ್ರಾರ್ಜಿತ ಆಸ್ತಿಯಾಗಿದ್ದರೆ, ಅದರಲ್ಲಿ ಮಗನಂತೆಯೇ ಮಗಳಿಗೂ ಹುಟ್ಟಿನಿಂದಲೇ ಸಮಾನ ಹಕ್ಕಿರುತ್ತದೆ.

ಪೂರ್ವಜರ ಆಸ್ತಿಯಲ್ಲಿ ತಂದೆ ಜೀವಂತವಾಗಿದ್ದಾಗಲೇ ಮಗಳು ಕಾನೂನುಬದ್ಧವಾಗಿ ತನ್ನ ಪಾಲನ್ನು ಕೇಳಬಹುದು.

ತಂದೆ ಪಾಲು ನೀಡಲು ನಿರಾಕರಿಸಿದರೆ ನ್ಯಾಯಾಲಯದ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ.

ಮಕ್ಕಳ ಒಪ್ಪಿಗೆಯಿಲ್ಲದೆ ತಂದೆ ಇಂತಹ ಪಿತ್ರಾರ್ಜಿತ ಆಸ್ತಿಯನ್ನು ಪರಭಾರೆ ಮಾಡಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ.

ಸ್ವಯಾರ್ಜಿತ ಆಸ್ತಿಗೆ ನಿಯಮಗಳೇನು?

ತಂದೆ ತನ್ನ ಸ್ವಂತ ದುಡಿಮೆ ಅಥವಾ ಸ್ವಂತ ಪರಿಶ್ರಮದಿಂದ ಸಂಪಾದಿಸಿದ ಆಸ್ತಿಯಾಗಿದ್ದರೆ ನಿಯಮಗಳು ಸಂಪೂರ್ಣವಾಗಿ ಭಿನ್ನವಾಗಿರುತ್ತವೆ:

ಸ್ವಯಾರ್ಜಿತ ಆಸ್ತಿಯ ಮೇಲೆ ತಂದೆಗೆ ಸಂಪೂರ್ಣ ವೈಯಕ್ತಿಕ ಅಧಿಕಾರವಿರುತ್ತದೆ.

ಈ ಆಸ್ತಿಯನ್ನು ತಂದೆ ಜೀವಂತವಾಗಿರುವಾಗ ಪಾಲು ನೀಡುವಂತೆ ಕೇಳುವ ಹಕ್ಕು ಮಗನಿಗಾಗಲಿ, ಮಗಳಿಗಾಗಲಿ ಇರುವುದಿಲ್ಲ.

ತಂದೆ ತನ್ನ ಇಷ್ಟದಂತೆ ಆಸ್ತಿಯನ್ನು ಯಾರಿಗಾದರೂ ಮಾರಾಟ ಮಾಡಬಹುದು, ಉಡುಗೊರೆಯಾಗಿ (Gift Deed) ನೀಡಬಹುದು ಅಥವಾ ಯಾರ ಹೆಸರಿಗಾದರೂ ವಿಲ್ (ಉಯಿಲು) ಬರೆಯಬಹುದು.

ವಿಲ್ ಬರೆಯದೆ ತಂದೆ ಮೃತಪಟ್ಟರೆ?

ಒಂದು ವೇಳೆ ತಂದೆ ತನ್ನ ಸ್ವಯಾರ್ಜಿತ ಆಸ್ತಿಗೆ ಯಾವುದೇ ವಿಲ್ ಬರೆಯದೆ ಮೃತಪಟ್ಟರೆ, ಆ ಆಸ್ತಿಯು ಕಾನೂನುಬದ್ಧವಾಗಿ ಆತನ ಹೆಂಡತಿ, ಪುತ್ರರು ಮತ್ತು ಪುತ್ರಿಯರಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ.

ಕಾನೂನಿನ ಸ್ಪಷ್ಟ ಅರಿವಿದ್ದರೆ ಮತ್ತು ಸ್ವಯಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಜೀವಿತಾವಧಿಯಲ್ಲೇ ಸೂಕ್ತ ವಿಲ್ ಸಿದ್ಧಪಡಿಸಿಕೊಂಡರೆ ಮುಂದಿನ ಪೀಳಿಗೆಯಲ್ಲಿ ಆಸ್ತಿ ಕಲಹಗಳು ತಲೆದೋರುವುದಿಲ್ಲ.

 

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಕರ್ನಾಟಕ 'SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ | Karnataka SSLC Examಮಂಗಳೂರಿನಲ್ಲಿಂದು ಐತಿಹಾಸಿಕ ಸಂಪುಟ ಸಭೆ: ಕರಾವಳಿ ಜನರ ಚಿತ್ತ ಸರ್ಕಾರದ ನಿರ್ಧಾರಗಳತ್ತಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಡಿಕೆಶಿ ಹೊಸ ಮಿಷನ್ : 50,000 ನಿವೇಶನ, ಕಲಬುರಗಿಯಲ್ಲಿ ಐಇ ಪಾರ್ಕ್.!