LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ಫೋನ್‌ಪೇ’ ಬಳಕೆದಾರರಿಗೆ ಬಿಗ್ ಶಾಕ್ ; ಈ ತಪ್ಪು ಮಾಡಿದರೆ ಪ್ರತಿ 3 ತಿಂಗಳಿಗೆ ₹100 ದಂಡ!

ಫೋನ್‌ಪೇ ಬಳಸುವವರಿಗೆ ಇದು ಮಹತ್ವದ ಮಾಹಿತಿ. ಫೋನ್‌ಪೇ ತನ್ನ ವಾಲೆಟ್ ಸೇವೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ದೀರ್ಘಕಾಲ ಬಳಸದೇ ಇರುವ ವಾಲೆಟ್‌ಗಳ ಮೇಲೆ ನಿರ್ವಹಣಾ ಶುಲ್ಕ (Maintenance Charge) ವಿಧಿಸಲು ಮುಂದಾಗಿದೆ.

ಫೋನ್‌ಪೇ ವಾಲೆಟ್ ಅನ್ನು ಸಕ್ರಿಯಗೊಳಿಸಿದರೆ ಬ್ಯಾಂಕ್ ಖಾತೆ ಇಲ್ಲದಿದ್ದರೂ ವಹಿವಾಟು ನಡೆಸಬಹುದು. ಸಣ್ಣ ಮೊತ್ತದ ಪಾವತಿಗಳನ್ನು ವೇಗವಾಗಿ ಮಾಡಲು ಹಾಗೂ ಯುಪಿಐ ಪಿನ್ ನಮೂದಿಸುವ ಅಗತ್ಯವಿಲ್ಲದ ಕಾರಣ ಅನೇಕರು ಈ ಸೇವೆಯನ್ನು ಬಳಸುತ್ತಿದ್ದಾರೆ. ಆದರೆ ವಾಲೆಟ್ ಸಕ್ರಿಯಗೊಳಿಸಿ ದೀರ್ಘಕಾಲ ಬಳಸದ ಬಳಕೆದಾರರಿಗೆ ಇದೀಗ ಹೆಚ್ಚುವರಿ ಶುಲ್ಕದ ಹೊರೆ ಬೀಳಲಿದೆ.

ಎಷ್ಟು ಶುಲ್ಕ ವಿಧಿಸಲಾಗುತ್ತದೆ?

ವಾಲೆಟ್ ಅನ್ನು ದೀರ್ಘಕಾಲ ಬಳಸದೇ ಇದ್ದರೆ ಅದು ನಿಷ್ಕ್ರಿಯ (Inactive) ಆಗುತ್ತದೆ. ಇಂತಹ ವಾಲೆಟ್‌ಗಳ ಮೇಲೆ ಫೋನ್‌ಪೇ ಪ್ರತಿ ಮೂರು ತಿಂಗಳಿಗೊಮ್ಮೆ ₹100 (ಜಿಎಸ್‌ಟಿ ಸೇರಿದಂತೆ) ನಿರ್ವಹಣಾ ಶುಲ್ಕ ವಿಧಿಸಲಿದೆ. ಈ ಕುರಿತು ಕಂಪನಿ ಈಗಾಗಲೇ ಬಳಕೆದಾರರಿಗೆ ನೋಟಿಫಿಕೇಶನ್‌ಗಳನ್ನು ಕಳುಹಿಸಲು ಆರಂಭಿಸಿದೆ.

ವಾಲೆಟ್‌ನಲ್ಲಿ ₹100 ಅಥವಾ ಅದಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇದ್ದರೆ, ಕಂಪನಿ ನೇರವಾಗಿ ₹100 ಕಡಿತಗೊಳಿಸುತ್ತದೆ. ಬ್ಯಾಲೆನ್ಸ್ ₹100ಕ್ಕಿಂತ ಕಡಿಮೆ ಇದ್ದರೆ ಲಭ್ಯವಿರುವ ಸಂಪೂರ್ಣ ಮೊತ್ತವನ್ನು ಶುಲ್ಕವಾಗಿ ಕಡಿತ ಮಾಡಿಕೊಳ್ಳಲಿದೆ.

ದಂಡ ತಪ್ಪಿಸಿಕೊಳ್ಳುವುದು ಹೇಗೆ?

ವಾಲೆಟ್ ನಿಷ್ಕ್ರಿಯವಾಗದಂತೆ ನೋಡಿಕೊಳ್ಳಲು ವರ್ಷದಲ್ಲಿ ಕೆಲವು ಬಾರಿ ವಾಲೆಟ್ ಬಳಸಿ ವಹಿವಾಟು ನಡೆಸಬೇಕು. ವಾಲೆಟ್ ಮೂಲಕ ಪಾವತಿ ಮಾಡುವುದು, ಹಣ ವರ್ಗಾವಣೆ ಮಾಡುವುದು ಅಥವಾ ಇತರೆ ಹಣಕಾಸು ವ್ಯವಹಾರಗಳನ್ನು ನಡೆಸುವುದರಿಂದ ಖಾತೆ ಸಕ್ರಿಯವಾಗಿರುತ್ತದೆ.

ಯಾವಾಗ ವಾಲೆಟ್ ನಿಷ್ಕ್ರಿಯವಾಗುತ್ತದೆ?

ಬಳಕೆದಾರರು ತಮ್ಮ ಫೋನ್‌ಪೇ ವಾಲೆಟ್‌ನಲ್ಲಿ ಸತತ 365 ದಿನಗಳ ಕಾಲ ಯಾವುದೇ ಹಣಕಾಸು ವಹಿವಾಟು ನಡೆಸದಿದ್ದರೆ, ಆ ವಾಲೆಟ್ ಅನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಖಾತೆಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ₹100 ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ.ಫೋನ್‌ಪೇ ವಾಲೆಟ್ ಹೊಂದಿರುವವರು ವರ್ಷಕ್ಕೆ ಕನಿಷ್ಠ ಒಂದು ಬಾರಿ ಆದರೂ ವಹಿವಾಟು ನಡೆಸುವುದು ಉತ್ತಮ. ಇಲ್ಲವಾದರೆ 365 ದಿನಗಳ ಬಳಿಕ ವಾಲೆಟ್ ನಿಷ್ಕ್ರಿಯಗೊಂಡು, ಪ್ರತಿ ಮೂರು ತಿಂಗಳಿಗೆ ₹100ರಷ್ಟು ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾಗಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ