LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಚೆ ಕಚೇರಿ ಗ್ರಾಹಕರಿಗೆ ಗುಡ್ ನ್ಯೂಸ್ : ಇನ್ಮುಂದೆ ಮನೆಬಾಗಿಲಿಗೆ ಬರಲಿದೆ ‘ಪರ್ಸನಲೈಸ್ಡ್ ಚೆಕ್ ಬುಕ್’!

ಬ್ಯಾಂಕುಗಳಿಗೆ ಪೈಪೋಟಿ ನೀಡಲು ಸಜ್ಜಾಗಿರುವ ಅಂಚೆ ಇಲಾಖೆಯು ತನ್ನ ಗ್ರಾಹಕರಿಗೆ ಹೆಚ್ಚಿನ ಭದ್ರತೆ ಮತ್ತು ಆಧುನಿಕ ಸೌಲಭ್ಯಗಳನ್ನು ನೀಡಲು ಮುಂದಾಗಿದೆ. ಇದರ ಭಾಗವಾಗಿ ಈಗ ‘ಪರ್ಸನಲೈಸ್ಡ್ಚೆಕ್ಬುಕ್’ (Personalized Check Book) ಸೌಲಭ್ಯವನ್ನು ಜಾರಿಗೆ ತಂದಿದೆ.

ಈ ಹಿಂದೆ ನೀಡಲಾಗುತ್ತಿದ್ದ ಚೆಕ್ ಬುಕ್‌ಗಳಲ್ಲಿ ಗ್ರಾಹಕರ ಹೆಸರು ಇರುತ್ತಿರಲಿಲ್ಲ. ಆದರೆ ಇನ್ನು ಮುಂದೆ ಬರುವ ಚೆಕ್ ಬುಕ್‌ಗಳಲ್ಲಿ ಗ್ರಾಹಕರ ಹೆಸರು, ಖಾತೆಸಂಖ್ಯೆ ಮತ್ತು IFSC ಕೋಡ್ ಮುದ್ರಿತವಾಗಿರುತ್ತದೆ.ಈ ಪರ್ಸನಲೈಸ್ಡ್ ಚೆಕ್ ಬುಕ್ ಅನ್ನು ಗ್ರಾಹಕರು ಪೋಸ್ಟ್ ಆಫೀಸ್‌ಗೆ ಬಂದು ಪಡೆಯುವ ಅಗತ್ಯವಿಲ್ಲ. ಇದನ್ನು ನಿಮ್ಮ ನೋಂದಾಯಿತ ವಿಳಾಸಕ್ಕೆ ಉಚಿತವಾಗಿ ಅಂಚೆಮೂಲಕ ಕಳುಹಿಸಲಾಗುತ್ತದೆ.ಒಂದು ವೇಳೆ ನಿಮಗೆ ತುರ್ತಾಗಿ ಚೆಕ್ ಬುಕ್ ಬೇಕಿದ್ದಲ್ಲಿ, ಹಳೆಯ ಮಾದರಿಯ (ಹೆಸರಿಲ್ಲದ) ಇನ್‌ಸ್ಟಂಟ್ ಚೆಕ್ ಬುಕ್‌ಗಳನ್ನು ಅಂಚೆ ಕಚೇರಿಯ ಕೌಂಟರ್‌ಗಳಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ ?

  • ಸದ್ಯಕ್ಕೆ ಗ್ರಾಹಕರು ತಮ್ಮ ಖಾತೆ ಇರುವ ಅಂಚೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
  • ಶೀಘ್ರದಲ್ಲೇ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಮೂಲಕವೂ ಅರ್ಜಿ ಸಲ್ಲಿಸುವ ಸೌಲಭ್ಯ ಬರಲಿದೆ.

ಪ್ರಮುಖ ನಿಯಮಗಳು ಮತ್ತು ಷರತ್ತುಗಳು:

  • ಮೊಬೈಲ್ ಲಿಂಕ್: ಗ್ರಾಹಕರ ಮೊಬೈಲ್ ಸಂಖ್ಯೆಯು ಕಡ್ಡಾಯವಾಗಿ CIF ಸಂಖ್ಯೆಗೆ ಲಿಂಕ್ ಆಗಿರಬೇಕು.
  • ಕನಿಷ್ಠ ಬ್ಯಾಲೆನ್ಸ್: ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಬಾಕಿ ಇರಬೇಕು. ಇದರೊಂದಿಗೆ ಚೆಕ್ ಬುಕ್ ವಿತರಣಾ ಶುಲ್ಕ 20 ರೂಪಾಯಿ ಹಾಗೂ ಅನ್ವಯವಾಗುವ GST ಮೊತ್ತ ಖಾತೆಯಲ್ಲಿರಬೇಕು.
  • ಸಕ್ರಿಯ ಖಾತೆ: ಖಾತೆಯು ಚಾಲ್ತಿಯಲ್ಲಿರಬೇಕು (Active). ಫ್ರೀಜ್ ಆದ ಅಥವಾ ಡಾರ್ಮೆಂಟ್ ಖಾತೆಗಳಿಗೆ ಈ ಸೌಲಭ್ಯ ಸಿಗುವುದಿಲ್ಲ.
  • ಡೆಲಿವರಿ ಮಾಹಿತಿ: ಒಂದು ವೇಳೆ ವಿಳಾಸ ಸರಿಯಿಲ್ಲದೆ ಚೆಕ್ ಬುಕ್ ವಾಪಸ್ ಬಂದರೆ, ಅದನ್ನು ಅಂಚೆ ಕಚೇರಿಯಲ್ಲಿ 45 ದಿನಗಳ ಕಾಲ ಇರಿಸಲಾಗುತ್ತದೆ. ಅಷ್ಟರೊಳಗೆ ಪಡೆದುಕೊಳ್ಳದಿದ್ದರೆ ಅದನ್ನು ರದ್ದುಗೊಳಿಸಲಾಗುತ್ತದೆ.

ಅಂಚೆ ಇಲಾಖೆಯ ಈ ಕ್ರಮದಿಂದಾಗಿ ಹಣಕಾಸಿನ ವಹಿವಾಟುಗಳು ಹೆಚ್ಚು ಸುರಕ್ಷಿತವಾಗಲಿದ್ದು, ಗ್ರಾಹಕರಿಗೆ ಬ್ಯಾಂಕಿಂಗ್ ಮಾದರಿಯ ಅನುಭವ ಸಿಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ