LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘ವಾಟ್ಸಾಪ್ ಸ್ಪ್ಯಾಮ್’ ಕರೆಗಳಿಂದ ಬೇಸತ್ತಿದ್ದೀರಾ ? ಈ ಸೀಕ್ರೆಟ್ ಸೆಟ್ಟಿಂಗ್ ಆನ್ ಮಾಡಿ, ನಿರಾಳರಾಗಿ !

ಇಂದಿನ ತಂತ್ರಜ್ಞಾನದ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್ ಎನ್ನುವುದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಸ್ಮಾರ್ಟ್‌ಫೋನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ ಎನ್ನುವಷ್ಟು ನಾವು ಅದರ ಮೇಲೆ ಅವಲಂಬಿತರಾಗಿದ್ದೇವೆ. ಆಫೀಸ್ ಕೆಲಸ, ವ್ಯಾಪಾರ, ಕುಟುಂಬದ ಸದಸ್ಯರೊಂದಿಗೆ ಮಾತನಾಡಲು, ಫೋಟೋಗಳು ಮತ್ತು ವಿಡಿಯೋಗಳನ್ನು ಕಳುಹಿಸಲು ವಾಟ್ಸಾಪ್ ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿಯೂ ಕಡ್ಡಾಯವಾಗಿದೆ.

ಆದರೆ, ಈ ವಾಟ್ಸಾಪ್‌ನಲ್ಲಿ ಕೆಲವೊಮ್ಮೆ ಅನಗತ್ಯವಾದ ಅಥವಾ ಸ್ಪ್ಯಾಮ್ ಕರೆಗಳು ಬರುವ ಸಾಧ್ಯತೆ ಇರುತ್ತದೆ. ಇದನ್ನು ತಡೆಗಟ್ಟಲು ವಾಟ್ಸಾಪ್ ಅದ್ಭುತವಾದ ಫೀಚರ್ ಒಂದನ್ನು ಪರಿಚಯಿಸಿದೆ. ಅನೇಕರಿಗೆ ಈ ಫೀಚರ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ.

ಈ ಫೀಚರ್ ಹೇಗೆ ಕೆಲಸ ಮಾಡುತ್ತದೆ?

ವಾಟ್ಸಾಪ್ ಮೂಲಕ ನಡೆಯುವ ವಂಚನೆಗಳನ್ನು ತಡೆಗಟ್ಟಲು ಸೈಲೆನ್ಸ್ ಅನ್ನೋನ್ ಕಾಲರ್ಸ್” (Silence Unknown Callers) ಎಂಬ ಫೀಚರ್ ಅನ್ನು ತರಲಾಗಿದೆ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಸಂಖ್ಯೆಗಳಿಂದ ಬರುವ ವಾಟ್ಸಾಪ್ ವಾಯ್ಸ್ ಅಥವಾ ವಿಡಿಯೋ ಕರೆಗಳನ್ನು ಇದು ಸ್ವಯಂಚಾಲಿತವಾಗಿ ಮ್ಯೂಟ್ (Silence) ಮಾಡುತ್ತದೆ.

ಒಂದು ವೇಳೆ ನೀವು ಆ ಸಂಖ್ಯೆಯೊಂದಿಗೆ ಹಿಂದೆ ಒಮ್ಮೆಯಾದರೂ ಮಾತನಾಡಿದ್ದರೆ, ಆ ಕರೆಗಳಿಗೆ ಈ ಫೀಚರ್ ಅನ್ವಯಿಸುವುದಿಲ್ಲ. ಆದರೆ, ನೀವು ಎಂದಿಗೂ ಮಾತನಾಡದ ಅಥವಾ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಸಂಖ್ಯೆಗಳಿಂದ ಬರುವ ಕಿರಿಕಿರಿ ಕರೆಗಳನ್ನು ಇದು ತಡೆಯುತ್ತದೆ.

ಈ ಸೆಟ್ಟಿಂಗ್ ಅನ್ನು ಆನ್ ಮಾಡುವುದು ಹೇಗೆ?

ಈ ಫೀಚರ್ ಅನ್ನು ಬಳಸಲು ಕೆಳಗಿನ ಹಂತಗಳನ್ನು ಅನುಸರಿಸಿ:

  1. ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ.
  2. ಬಲ ಮೂಲೆಯಲ್ಲಿರುವ ಮೂರು ಚುಕ್ಕೆಗಳ (Menu) ಮೇಲೆ ಕ್ಲಿಕ್ ಮಾಡಿ.
  3. ಸೆಟ್ಟಿಂಗ್ಸ್ (Settings) ಆಯ್ಕೆಗೆ ಹೋಗಿ.
  4. ಅಲ್ಲಿ ಪ್ರೈವೆಸಿ (Privacy) ಆಪ್ಷನ್ ಅನ್ನು ಆಯ್ಕೆ ಮಾಡಿ.
  5. ಅದರಲ್ಲಿರುವ ಸೈಲೆನ್ಸ್ ಅನ್ನೋನ್ ಕಾಲರ್ಸ್ (Silence Unknown Callers) ಎಂಬ ಆಪ್ಷನ್ ಅನ್ನು ಎನೇಬಲ್ (Enable) ಮಾಡಿಕೊಳ್ಳಿ.

ಈ ಒಂದೇ ಒಂದು ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳುವ ಮೂಲಕ ನೀವು ಅನಗತ್ಯ ಸ್ಪ್ಯಾಮ್ ಕರೆಗಳಿಂದ ಮುಕ್ತಿ ಪಡೆಯಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ