LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಒಟಿಟಿಗೆ ಬಂದಿದೆ ಕನ್ನಡದ ಈ ಸೂಪರ್ ಹಿಟ್ ಚಿತ್ರ ಮಿಸ್ ಮಾಡದೇ ನೋಡಿ

ಸಿನಿಮಾ ಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಸದ್ಯ ಒಟಿಟಿ (Zee5) ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಿರುವ ಕನ್ನಡದ ಚಿತ್ರ ‘ವಲವಾರ’. ಈ ಹೃದಯಸ್ಪರ್ಶಿ ಕಲಾಕೃತಿ ಈಗ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತಿದೆ.

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಕನ್ನಡದ ಸೂಪರ್ ಹಿಟ್ ಸಿನಿಮಾ ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅದ್ಭುತ ಅಭಿನಯ ಮತ್ತು ಮನರಂಜನೆಯ ಸಂಪೂರ್ಣ ಪ್ಯಾಕೇಜ್‌ನೊಂದಿಗೆ ಬಂದಿರುವ ಈ ಚಿತ್ರವನ್ನು ಸಿನಿಪ್ರಿಯರು ಈಗ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ನೀವು ಥಿಯೇಟರ್‌ನಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ, ಇದೀಗ ಒಟಿಟಿಯಲ್ಲಿ ತಪ್ಪದೇ ನೋಡಲೇಬೇಕಾದ ಅವಕಾಶ ನಿಮ್ಮದಾಗಿದೆ.

ಕಥೆ ಏನು ?

ಪಶ್ಚಿಮ ಘಟ್ಟದ ಸುಂದರ ಪರಿಸರದ ನಡುವೆ ನಡೆಯುವ ಕಥೆಯಲ್ಲಿ ಕುಂಡೇಸಿ ಎಂಬ ಬಾಲಕ ಪ್ರಮುಖ ಪಾತ್ರ. ತಂದೆಯ ಪ್ರೀತಿ ಮತ್ತು ಗಮನ ತಮ್ಮನ ಕಡೆ ಹೆಚ್ಚು ಇರುವುದರಿಂದ ಕುಂಡೇಸಿ ಮನಸ್ಸಿನಲ್ಲಿ ಒಂಟಿತನ ಹಾಗೂ ನೋವು ಬೆಳೆದಿರುತ್ತದೆ. ಅವನಿಗೆ ತಾಯಿ ಮತ್ತು ಗೌರ ಎಂಬ ಗರ್ಭಿಣಿ ಹಸು ಮಾತ್ರ ಆತ್ಮೀಯ ಸಂಗಾತಿಗಳು. ಒಂದು ದಿನ ಗೌರ ಕಾಣೆಯಾಗುತ್ತಿದ್ದಂತೆ ಕುಂಡೇಸಿಯ ಜೀವನವೇ ಬದಲಾಗುತ್ತದೆ. ಹಸುವನ್ನು ಹುಡುಕುವ ಪ್ರಯಾಣದಲ್ಲಿ ಆತ ಜೀವನದ ಹಲವು ಕಠಿಣ ಸತ್ಯಗಳನ್ನು ಅರಿಯುತ್ತಾನೆ

ವಲವಾರ’ ಕೇವಲ ಮಕ್ಕಳ ಸಿನಿಮಾ ಅಲ್ಲ. ಕುಟುಂಬ, ಪೋಷಕರು ಮತ್ತು ಬಾಲ್ಯದ ನೆನಪುಗಳನ್ನು ಹೊತ್ತು ಸಾಗುವ ಪ್ರತಿಯೊಬ್ಬರಿಗೂ ಇದು ಮನಮುಟ್ಟುವ ಅನುಭವ ನೀಡುತ್ತದೆ. ಸರಳ ಕಥೆಯೊಳಗೆ ದೊಡ್ಡ ಭಾವನೆಗಳನ್ನು ಅಡಗಿಸಿಕೊಂಡಿರುವ ಈ ಚಿತ್ರ ಕುಟುಂಬ ಸಮೇತ ನೋಡಬಹುದಾದ ಉತ್ತಮ ಕನ್ನಡ ಸಿನಿಮಾ

ಸಕಲೇಶಪುರದ ಹಸಿರು ಪರಿಸರದಲ್ಲಿ ನಡೆಯುವ ಈ ಚಿತ್ರವು ಅಣ್ಣ-ತಮ್ಮಂದಿರ ಬಾಂಧವ್ಯ ಮತ್ತು ತಂದೆ ಇಬ್ಬರು ಮಕ್ಕಳ ನಡುವೆ ಮಾಡುವ ತಾರತಮ್ಯದ (ವಲವಾರ ಎಂದರೆ ತಾರತಮ್ಯ ಎಂದರ್ಥ) ಕಥೆಯನ್ನು ಹೇಳುತ್ತದೆ.ಬಡ ಕುಟುಂಬದ ಅಣ್ಣ ಕುಂಡೇಸಿ ಮತ್ತು ತಮ್ಮ ಕೊಸುಡಿ, ತಮ್ಮ ಮನೆಯ ಗರ್ಭಿಣಿ ಹಸು ‘ಗೌರ’ಳನ್ನು ಹುಡುಕಲು ನಡೆಸುವ ಪ್ರಯತ್ನ ಮತ್ತು ಆ ಮೂಲಕ ಅವರಿಗೆ ಸಿಗುವ ಜೀವನಾನುಭವವೇ ಚಿತ್ರದ ಮುಖ್ಯ ತಿರುಳು. ಸುತನ್ ಗೌಡ ಅವರ ನಿರ್ದೇಶನವಿರುವ ಈ ಚಿತ್ರದಲ್ಲಿ ಮಾಸ್ಟರ್ ವೇದಿಕ್ ಕುಶಾಲ್ ಮತ್ತು ಮಾಸ್ಟರ್ ಶಯಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕದ್ರಿ ಮಣಿಕಾಂತ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಹೆಚ್ಚಿನ ಮೆರುಗು ನೀಡಿದೆ. ಈ ಚಿತ್ರವನ್ನು ಸದ್ಯ ಜೀ5 (Zee5) ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ