LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎದುರಾಳಿ ತಂಡ, ಅಂಪೈರ್ ಎಷ್ಟೇ ಹೇಳಿದರೂ ಹಠ ಬಿಡದೇ ಸೂಪರ್ ಓವರ್ ಆಡಿಸಿ ಭಾರತ ಸೋಲಿಸಿದ ಆ ಆಟಗಾರ; ಇಷ್ಟು ಕೊಬ್ಬು ಒಳ್ಳೆಯದಲ್ಲ ಎಂದ ನೆಟ್ಟಿಗರು!

ನಿನ್ನೆ ( ಜೂನ್ 15 ) ಡಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳ ನಡುವಿನ ತ್ರಿಕೋನ ಸರಣಿಯ ನಾಲ್ಕನೇ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಸೂಪರ್ ಓವರ್ ನಡೆಯಿತು. ಈ ರೋಚಕ ಪಂದ್ಯದಲ್ಲಿ ಶ್ರೀಲಂಕಾ ಎ ತಂಡ ಗೆದ್ದುಬೀಗಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತ ತಂಡಕ್ಕೆ 266 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಈ ಮೂಲಕ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಈ ಸಮಯಕ್ಕಾಗಲೇ ಕೆಟ್ಟ ಬೆಳಕು ಮೈದಾನವನ್ನು ಆವರಿಸಿದ್ದ ಕಾರಣ ಶ್ರೀಲಂಕಾ ಆಟಗಾರರು ಹಾಗೂ ಅಂಪೈರ್‌ಗಳು ಸೂಪರ್ ಓವರ್ ಅಸಾಧ್ಯ ಎಂದು ಕೈಕುಲುಕಿ ಪೆವಿಲಿಯನ್‌ನತ್ತ ತೆರಳಲು ಸಜ್ಜಾಗಿದ್ದರು. ಆದರೆ ಭಾರತ ತಂಡದ ಆಟಗಾರರು ಮಾತ್ರ ಸೂಪರ್ ಓವರ್ ಬೇಕೇಬೇಕು ಎಂದು ಪಟ್ಟುಹಿಡಿದರು.

ಅದರಲ್ಲೂ ಭಾರತ ತಂಡದ ನಾಯಕ ತಿಲಕ್ ವರ್ಮಾ ಮೈದಾನಲ್ಲೇ ಇದೆಂಥ ಕೆಟ್ಟ ನಡೆ ಎಂದು ಕಿಡಿಕಾರಿ ಸೂಪರ್ ಓವರ್ ಆಡಿಸಲೇಬೇಕು ಎಂದು ಪಟ್ಟುಹಿಡಿದರು. ಅಂಪೈರ್ ಮಂದ ಬೆಳಕಿನ ಕಾರಣ ನೀಡಿದರೂ ಕೇಳದ ತಿಲಕ್ ವರ್ಮಾ ಹಠ ಮಾಡಿ ಸೂಪರ್ ಓವರ್ ಆಡುವಂತೆ ಮಾಡಿದರು.

ಇದಕ್ಕೆ ಮಣಿದು ಸೂಪರ್ ಓವರ್ ನಡೆಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 16 ರನ್ ಬಾರಿಸಿ ಭಾರತಕ್ಕೆ 17 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಆದರೆ ಭಾರತ ಕೇವಲ 9 ರನ್ ಕಲೆಹಾಕಿ 7 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿತು.

ಈ ಮೂಲಕ ಅಂಕಪಟ್ಟಿಯಲ್ಲಿ ಶ್ರೀಲಂಕಾ 3 ಪಂದ್ಯಗಳನ್ನಾಡಿ 4 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದು, ಭಾರತ 3 ಪಂದ್ಯಗಳನ್ನಾಡಿ ಕೇವಲ ಒಂದರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳನ್ನಾಡಿ ಒಂದರಲ್ಲಿ ಗೆದ್ದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ.

ಹೀಗೆ ಬೇಡವೆಂದರೂ ಸೂಪರ್ ಓವರ್ ಆಡುವಂತೆ ಮಾಡಿದ ತಿಲಕ್ ವರ್ಮಾ ಅತಿಯಾದ ವಿಶ್ವಾಸವನ್ನು ಕಂಡ ನೆಟ್ಟಿಗರು ಇಷ್ಟು ಕೊಬ್ಬು ಒಳ್ಳೆಯದಲ್ಲ ಎಂದು ಖಂಡಿಸಿದ್ದು, ಸುಮ್ಮನಿದ್ದಿದ್ದರೆ ಒಂದು ಅಂಕವಾದರೂ ಬರುತ್ತಿತ್ತಲ್ಲ ಎಂದು ಕಿಡಿಕಾರಿದ್ದಾರೆ. ಈ ಮೂಲಕ ಭಾರತಕ್ಕೆ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಅಫ್ಘಾನಿಸ್ತಾನ ವಿರುದ್ಧ ಈಗಾಗಲೇ ಆಡಿದ ಒಂದು ಪಂದ್ಯ ಸೋತಿರುವ ಭಾರತ ಮುಂದಿನ ಪಂದ್ಯದಲ್ಲೂ ಸೋತರೆ ಫೈನಲ್ ಪ್ರವೇಶಿಸುವ ಅರ್ಹತೆ ಕಳೆದುಕೊಂಡು ಸರಣಿಯಿಂದ ಹೊರಬೀಳಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಗುಡ್ ನ್ಯೂಸ್: ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ಬೆಲೆ ಇಂದಿನ ಲೇಟೆಸ್ಟ್ ದರ ವಿವರ ಇಲ್ಲಿದೆಮಗನಿಗಾಗಿ ಜಮೀನು ಮಾರಿದ ತಂದೆ, ಮುಂಜಾನೆ 3ಕ್ಕೆ ಏಳುತ್ತಿದ್ದ ತಾಯಿ: ಬಿಹಾರದ ಹಳ್ಳಿಯಿಂದ ಐಪಿಎಲ್‌ಗೆ ಬಂದ ವೈಭವ್ ಸೂರ್ಯವಂಶಿ ಯಶೋಗಾಥೆ!ಧರ್ಮಸ್ಥಳ ಕೇಸ್ : ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ ; ನಟ ‘ಪ್ರಕಾಶ್ ರಾಜ್’ ಸ್ಪೋಟಕ ಹೇಳಿಕೆಸಿಎಂ ಆದಮೇಲೂ ಡಿಕೆಶಿ ಬ್ಲೂ ಫಿಲಂ ಮಾಡಿಸುವ, ಪೋಸ್ಟರ್ ಅಂಟಿಸುವ ಚಾಳಿ ಬಿಟ್ಟಿಲ್ಲ; ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯBIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ ; ‘ಕರ್ತವ್ಯ’ ಆ್ಯಪ್ ನಲ್ಲಿ ಕಡ್ಡಾಯವಾಗಿ ಹಾಜರಾತಿ ದಾಖಲಿಸಲು ಸೂಚನೆ.!ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ‘EPFO’ ಚಂದಾದಾರರಿಗೆ ಬಿಗ್ ಅಲರ್ಟ್ ; ಬಡ್ಡಿ ಜಮಾ ಬಗ್ಗೆ ಪ್ರಮುಖ ಅಪ್‌ಡೇಟ್ ಇಲ್ಲಿದೆ‘ಹಿಂದೂ ಹೃದಯ ಸಾಮ್ರಾಟ್’ ಬಾಳಾ ಠಾಕ್ರೆ ಕಟ್ಟಿದ ಶಿವಸೇನೆ ಇಂದು ಇಬ್ಭಾಗ; ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಉದ್ಧವ್ ಠಾಕ್ರೆ!SHOCKING : ಪ್ರೇಯಸಿಯನ್ನು ಕೊಂದು ಶವವನ್ನೇ ಅಪ್ಪಿಕೊಂಡು ಮಲಗಿದ್ದ ಪ್ರಿಯಕರ ; ಬೆಂಗಳೂರನ್ನೇ ಬೆಚ್ಚಿಬೀಳಿಸಿದ ಭವಾನಿ ಕೊಲೆ ಕೇಸ್.!“ಇವರ ಬೆದರಿಕೆಗೆ ನಾವು ಹೆದರಲ್ಲ”: ಡಿಕೆಶಿ ವಿರುದ್ಧ ಕೆಂಡಾಮಂಡಲರಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ