LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆಗಾಲದಲ್ಲಿ ಬೈಕ್ ಓಡಿಸುತ್ತೀರಾ ? ಈ ಟಿಪ್ಸ್ ಪಾಲಿಸಿದರೆ ಅಪಘಾತಗಳಿಂದ ದೂರ ಇರಬಹುದು !

ಮಳೆಗಾಲ ಆರಂಭವಾಗಿದ್ದು, ರಾಜ್ಯದ ಹಲವೆಡೆ ನಿರಂತರ ಮಳೆಯಾಗುತ್ತಿದೆ. ರಸ್ತೆಗಳ ಮೇಲೆ ನೀರು ನಿಂತಿರುವುದು, ಗುಂಡಿಗಳು ಕಾಣಿಸದಿರುವುದು ಮತ್ತು ಜಾರುವ ರಸ್ತೆಗಳ ಕಾರಣದಿಂದ ಬೈಕ್ ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರೆ ಅಪಾಯಗಳನ್ನು ತಪ್ಪಿಸಿ ಸುರಕ್ಷಿತವಾಗಿ ಸಂಚರಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಏಕಾಏಕಿ ಬ್ರೇಕ್ ಹಾಕಬೇಡಿ

ಮಳೆಯ ಸಮಯದಲ್ಲಿ ರಸ್ತೆಗಳು ಒದ್ದೆಯಾಗಿರುವುದರಿಂದ ವಾಹನದ ಹಿಡಿತ ಕಡಿಮೆಯಾಗಿರುತ್ತದೆ. ಈ ವೇಳೆ ಹಠಾತ್ ಬ್ರೇಕ್ ಹಾಕಿದರೆ ಬೈಕ್ ಜಾರಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ತಿರುವುಗಳಲ್ಲಿ ಬ್ರೇಕ್ ಹಾಕುವುದನ್ನು ತಪ್ಪಿಸಿ. ಅಗತ್ಯವಿದ್ದರೆ ಮುಂಭಾಗ ಮತ್ತು ಹಿಂಭಾಗದ ಬ್ರೇಕ್‌ಗಳನ್ನು ಸಮತೋಲನವಾಗಿ ಬಳಸಿ.

ಟೈರ್‌ಗಳ ಸ್ಥಿತಿ ಪರಿಶೀಲಿಸಿ

ಸವೆದುಹೋದ ಅಥವಾ ಹಳೆಯ ಟೈರ್‌ಗಳನ್ನು ಬಳಸುವುದು ಅಪಾಯಕಾರಿ. ಮಳೆಯ ಸಮಯದಲ್ಲಿ ಇಂತಹ ಟೈರ್‌ಗಳು ರಸ್ತೆಯ ಮೇಲೆ ಸರಿಯಾದ ಹಿಡಿತ ನೀಡುವುದಿಲ್ಲ. ಆದ್ದರಿಂದ ಟೈರ್‌ಗಳ ಟ್ರೆಡ್‌ ಆಳವನ್ನು ಪರಿಶೀಲಿಸಿ, ಅಗತ್ಯವಿದ್ದರೆ ಹೊಸ ಟೈರ್‌ಗಳನ್ನು ಅಳವಡಿಸಿಕೊಳ್ಳಿ.

ನೀರು ನಿಂತಿರುವ ರಸ್ತೆಗಳಲ್ಲಿ ಎಚ್ಚರಿಕೆ

ರಸ್ತೆಯಲ್ಲಿನ ಗುಂಡಿಗಳು ನೀರಿನಿಂದ ಮುಚ್ಚಿಹೋಗಿರುವುದರಿಂದ ಅವು ಕಾಣಿಸದೇ ಅಪಘಾತಕ್ಕೆ ಕಾರಣವಾಗಬಹುದು. ಹೆಚ್ಚಿನ ನೀರು ನಿಂತಿರುವ ಪ್ರದೇಶಗಳಲ್ಲಿ ಬೈಕ್ ಓಡಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಎಂಜಿನ್ ಅಥವಾ ಎಕ್ಸಾಸ್ಟ್ ಒಳಗೆ ನೀರು ಸೇರಿದರೆ ವಾಹನ ಮಧ್ಯದಲ್ಲೇ ನಿಲ್ಲುವ ಸಾಧ್ಯತೆಯೂ ಇದೆ.

ಅತಿವೇಗ ಬೇಡ

ಮಳೆಯ ಸಮಯದಲ್ಲಿ ವೇಗವಾಗಿ ಬೈಕ್ ಚಲಾಯಿಸುವುದು ಅಪಾಯಕರ. ಒದ್ದೆಯಾದ ರಸ್ತೆಯಲ್ಲಿ ವಾಹನದ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಭಾರೀ ಮಳೆಯ ವೇಳೆ ರಸ್ತೆಯ ಸ್ಥಿತಿಯೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದ್ದರಿಂದ ನಿಧಾನಗತಿಯಲ್ಲಿ ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸಿ.

ಹೆಲ್ಮೆಟ್ ಧರಿಸುವುದು ಕಡ್ಡಾಯ

ಮಳೆಯಲ್ಲಿಯೂ ಹೆಲ್ಮೆಟ್ ಧರಿಸುವುದನ್ನು ಮರೆಯಬೇಡಿ. ಹೆಲ್ಮೆಟ್‌ನ ವೈಸರ್ ಮೇಲೆ ನೀರಿನ ಹನಿಗಳು ಸೇರುವುದರಿಂದ ದೃಷ್ಟಿ ಮಸುಕಾಗಬಹುದು. ಇದಕ್ಕಾಗಿ ವೈಸರ್ ಕ್ಲೀನರ್ ಅಥವಾ ಫಿಂಗರ್ ವೈಪರ್‌ಗಳನ್ನು ಬಳಸಬಹುದು. ಇವು ಕಾರಿನ ವೈಪರ್‌ಗಳಂತೆ ಕಾರ್ಯನಿರ್ವಹಿಸಿ ಸ್ಪಷ್ಟ ದೃಷ್ಟಿ ಒದಗಿಸುತ್ತವೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ