LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

”ಒಂದು ಸಮಯದಲ್ಲಿ ನನ್ನಲ್ಲಿ ಅಹಂಕಾರ ಹೆಚ್ಚಾಗಿತ್ತು” ; ನಟಿ ಸಮಂತಾ ಶಾಕಿಂಗ್ ಹೇಳಿಕೆ

ಟಾಲಿವುಡ್‌ನ ಖ್ಯಾತ ನಟಿ ಸಮಂತಾ ರುತ್  ಪ್ರಭು ತಮ್ಮ ನಿರ್ಮಾಣದ ‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ತಮ್ಮದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಜೂನ್ 19ರಂದು ತೆರೆಗೆ ಬರಲಿದ್ದು, ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಮಂತಾ ನಿರತರಾಗಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಪಯಣದ ಕುರಿತು ಮಾತನಾಡಿದ ಸಮಂತಾ, ಒಂದು ಹಂತದಲ್ಲಿ ಸ್ಟಾರ್‌ಡಮ್‌ನ ಮೋಹಕ್ಕೆ ತಾವು ಒಳಗಾಗಿದ್ದೆ ಎಂದು ಹೇಳಿದ್ದಾರೆ.

“ನನ್ನ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಹಿಟ್ ಆಗುತ್ತಿದ್ದಂತೆ ನನ್ನಲ್ಲಿ ನಿಧಾನವಾಗಿ ಅಹಂಕಾರವೂ ಹೆಚ್ಚಾಗತೊಡಗಿತ್ತು. ಸಣ್ಣ ಪಟ್ಟಣದಿಂದ ಬಂದ ಹುಡುಗಿಗೆ ಇಷ್ಟೊಂದು ದೊಡ್ಡ ಮಟ್ಟದ ಸ್ಟಾರ್‌ಡಮ್ ಸಿಗುತ್ತದೆ ಎಂದು ನಾನು ಕೂಡ ಊಹಿಸಿರಲಿಲ್ಲ,” ಎಂದು ಸಮಂತಾ ಹೇಳಿದ್ದಾರೆ.

ಒಂದೇ ವರ್ಷದಲ್ಲಿ ಐದು ಸಿನಿಮಾಗಳಲ್ಲಿ ನಟಿಸಿದ್ದೆ. ಅವೆಲ್ಲವೂ ಯಶಸ್ವಿಯಾದ ಕಾರಣ ಹಲವರು ನನ್ನನ್ನು ಗೋಲ್ಡನ್ ಲೆಗ್’ ಎಂದು ಕರೆಯುತ್ತಿದ್ದರು. ಅದರಿಂದ ನನ್ನ ಮೇಲಿನ ನಿರೀಕ್ಷೆ ಹಾಗೂ ಒತ್ತಡವೂ ಹೆಚ್ಚಾಯಿತು. ಇನ್ನಷ್ಟು ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಂಡಿದ್ದೆ. ನನ್ನ ನಟನಾ ಬದುಕಿಗೆ ಅಂತ್ಯವೇ ಇಲ್ಲ ಎಂದು ಭಾವಿಸಿದ್ದೆ ಎಂದು ಅವರು ನೆನಪಿಸಿಕೊಂಡರು.

ಆದರೆ, ಅನಾರೋಗ್ಯ ಮತ್ತು ಸಿನಿಮಾಗಳಿಂದ ಪಡೆದ ವಿರಾಮ ನನ್ನ ಜೀವನದ ದೃಷ್ಟಿಕೋಣವನ್ನೇ ಬದಲಿಸಿತು ಎಂದು ಸಮಂತಾ ಹೇಳಿದ್ದಾರೆ.ಮತ್ತೆ ಸಿನಿಮಾಗಳಿಗೆ ಮರಳುವ ಮೊದಲು ನನ್ನ ಕೆಲವು ಹಳೆಯ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಆ ವಿರಾಮ ನನ್ನ ಜೀವನ ಮತ್ತು ವೃತ್ತಿಜೀವನವನ್ನು ಹೊಸ ದೃಷ್ಟಿಯಿಂದ ನೋಡುವಂತೆ ಮಾಡಿತು,” ಎಂದು ಅವರು ತಿಳಿಸಿದ್ದಾರೆ.ಗಮನಾರ್ಹವಾಗಿ, 2022ರಿಂದ ಸಮಂತಾ Myositis ಎಂಬ ಸ್ವಯಂಪ್ರತಿರೋಧಕ (ಆಟೋ ಇಮ್ಯೂನ್) ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ಅನಾರೋಗ್ಯದ ನಡುವೆಯೂ ಅವರು ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ