ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು, ತಿರುನೆಲ್ವೇಲಿ ಜಂಕ್ಷನ್ ಹಾಗೂ ಬೆಂಗಳೂರು ಕ್ಯಾಂಟ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈ ರೈಲುಗಳು ಸೆಪ್ಟೆಂಬರ್ 11 ಮತ್ತು 12, 2026ರಂದು ತಲಾ ಒಂದು ಟ್ರಿಪ್ನಂತೆ ಎರಡೂ ದಿಕ್ಕುಗಳಲ್ಲಿ ಸಂಚರಿಸಲಿವೆ.
ರೈಲುಗಳ ವೇಳಾಪಟ್ಟಿ ಮತ್ತು ಸಮಯ
1). ರೈಲು ಸಂಖ್ಯೆ 06527 ಕೆಎಸ್ಆರ್ ಬೆಂಗಳೂರು–ತಿರುನೆಲ್ವೇಲಿ ಎಕ್ಸ್ಪ್ರೆಸ್ ವಿಶೇಷ ರೈಲು ಶುಕ್ರವಾರ, 11.09.2026ರಂದು ಒಂದು ಟ್ರಿಪ್ ಸಂಚರಿಸಲಿದ್ದು, ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 11:35 ಗಂಟೆಗೆ ಹೊರಟು, ಶನಿವಾರ ತಿರುನೆಲ್ವೇಲಿ ಜಂಕ್ಷನ್ಗೆ ಮಧ್ಯಾಹ್ನ 01:15 ಗಂಟೆಗೆ ತಲುಪಲಿದೆ.
2). ಹಿಂತಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06528 ತಿರುನೆಲ್ವೇಲಿ–ಬೆಂಗಳೂರು ಕ್ಯಾಂಟ್ ಎಕ್ಸ್ಪ್ರೆಸ್ ವಿಶೇಷ ರೈಲು ಶನಿವಾರ, 12.09.2026ರಂದು ಒಂದು ಟ್ರಿಪ್ ಸಂಚರಿಸಲಿದ್ದು, ತಿರುನೆಲ್ವೇಲಿ ಜಂಕ್ಷನ್ನಿಂದ ಮಧ್ಯಾಹ್ನ ೦3:45 ಗಂಟೆಗೆ ಹೊರಟು, ಭಾನುವಾರ ಬೆಂಗಳೂರು ಕ್ಯಾಂಟ್ ನಿಲ್ದಾಣಕ್ಕೆ ಮುಂಜಾನೆ 03:30 ಗಂಟೆಗೆ ತಲುಪಲಿದೆ.
ಮಾರ್ಗಮಧ್ಯೆ ನಿಲುಗಡೆಗಳು: ಬೆಂಗಳೂರು ಕ್ಯಾಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್, ದಿಂಡಿಗಲ್, ಮಧುರೈ, ವಿರುದುನಗರ, ಸತ್ತೂರು ಮತ್ತು ಕೋವಿಲ್ಪಟ್ಟಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ರೈಲುಗಳ ಸಂಯೋಜನೆ
ಈ ವಿಶೇಷ ರೈಲುಗಳು ಒಟ್ಟು 20 ಕೋಚ್ಗಳನ್ನು ಹೊಂದಿದ್ದು, 01 ಎಸಿ 2-ಟೈರ್ ಕೋಚ್, 03 ಎಸಿ 3-ಟೈರ್ ಕೋಚ್, 10 ಸ್ಲೀಪರ್ ಕ್ಲಾಸ್ ಕೋಚ್, 04 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ ಹಾಗೂ 02 ಲಗೇಜ್-ಕಮ್-ಬ್ರೇಕ್ ವ್ಯಾನ್ಗಳನ್ನು ಒಳಗೊಂಡಿರುತ್ತವೆ.
ಪ್ರಯಾಣಿಕರು ರೈಲಿನ ವೇಳಾಪಟ್ಟಿ ಹಾಗೂ ಆಸನಗಳ ಲಭ್ಯತೆಯನ್ನು NTES/IRCTC ಅಪ್ಲಿಕೇಶನ್ ಮೂಲಕ ಪರಿಶೀಲಿಸುವಂತೆ ಕೋರಲಾಗಿದೆ.