LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

50ರ ಹರೆಯದಲ್ಲೂ 25ರ ಯುವಕನಂತೆ ಕಾಣುವುದು ಹೇಗೆ ? ದಳಪತಿ ವಿಜಯ್ ಡಯಟ್ ರಹಸ್ಯ ರಿವೀಲ್.!


ತಮಿಳು ರಾಜಕೀಯದಲ್ಲಿ ವಿಜಯದ ಬಾವುಟ ಹಾರಿಸಿರುವ ವಿಜಯ್, 50ನೇ ವಯಸ್ಸಿನಲ್ಲೂ ತುಂಬಾ ಯಂಗ್ ಮತ್ತು ಆಕ್ಟಿವ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸುತ್ತಿದ್ದಾರೆ. ಮಿಂಚಿನ ವೇಗದಲ್ಲಿ ಡ್ಯಾನ್ಸ್ ಮಾಡುತ್ತಾ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತಾರೆ.ಸಿನಿಮಾ ರಂಗದಲ್ಲಿ ಅಜೇಯ ನಾಯಕನಾಗಿ ಮಿಂಚಿ ಈಗ ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ದಳಪತಿ ವಿಜಯ್, ತಮ್ಮ 50ರ ಹರೆಯದಲ್ಲೂ 25ರ ಯುವಕನಂತೆ ಕಾಣುವ ಫಿಟ್‌ನೆಸ್ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಕೇವಲ ತೆರೆಯ ಮೇಲಷ್ಟೇ ಅಲ್ಲದೆ, ಈಗ ಚುನಾವಣಾ ಅಖಾಡದಲ್ಲೂ ಮಿಂಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯ್ ಅವರ ಎನರ್ಜಿ ಮತ್ತು ಯೌವನದ ಹಿಂದೆ ಯಾವುದೇ ಕಟ್ಟುನಿಟ್ಟಾದ ಜಿಮ್ ವರ್ಕೌಟ್ ಇಲ್ಲಿದೆ, ಬದಲಿಗೆ ಶಿಸ್ತುಬದ್ಧ ಜೀವನಶೈಲಿ ಮತ್ತು ವಿಶೇಷ ಆಹಾರ ಪದ್ಧತಿಯೇ ಅವರ ಈ ‘ಯಂಗ್ ಲುಕ್’ಗೆ ಪ್ರಮುಖ ಕಾರಣವಾಗಿದೆ. ದಳಪತಿ ಪಾಲಿಸುವ ಆ ಆಸಕ್ತಿದಾಯಕ ಫಿಟ್‌ನೆಸ್ ಮಂತ್ರಗಳ ಸಂಪೂರ್ಣ ವಿವರ ಇಲ್ಲಿದೆ.

ಅವರ ಈ ಎನರ್ಜಿಯ ರಹಸ್ಯವೇನು ಗೊತ್ತೇ?
ತಮಿಳುನಾಡಿನ ಸಿಎಂ ಗದ್ದುಗೆಯ ಮೇಲೆ ಕೂರಲು ಸಿದ್ಧರಾಗುತ್ತಿದ್ದಾರೆ ದಳಪತಿ ವಿಜಯ್. ಸಿನಿಮಾದಲ್ಲಿ ಸ್ಟಾರ್ ಆಗಿ ಮಿಂಚಿದ ವಿಜಯ್, ಪಕ್ಷ ಸ್ಥಾಪಿಸಿದ ಎರಡೇ ವರ್ಷಗಳಲ್ಲಿ ಸಿಎಂ ಮಟ್ಟಕ್ಕೆ ಬೆಳೆದಿದ್ದಾರೆ. 50ರ ಹರೆಯದಲ್ಲೂ ದಳಪತಿ ಯಂಗ್ ಲುಕ್ನಲ್ಲಿ ಕಂಗೊಳಿಸುತ್ತಿದ್ದಾರೆ ಮತ್ತು ಯುವ ನಾಯಕರಿಗೆ ಪೈಪೋಟಿ ನೀಡುತ್ತಿದ್ದಾರೆ.
ಅಷ್ಟಕ್ಕೂ ಅವರ ಫಿಟ್ನೆಸ್ ರಹಸ್ಯವೇನು? ಗಂಟೆಗಟ್ಟಲೆ ಜಿಮ್ನಲ್ಲಿ ವೇಯ್ಟ್ ಲಿಫ್ಟಿಂಗ್ ಮಾಡುವುದಕ್ಕಿಂತ, ತಮ್ಮ ಸ್ಟಾಮಿನಾ (ದೈಹಿಕ ಸಾಮರ್ಥ್ಯ) ಹೆಚ್ಚಿಸುವ ಕಾರ್ಡಿಯೋ ವ್ಯಾಯಾಮಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿದಿನ ಬೆಳಿಗ್ಗೆ 10 ರಿಂದ 40 ನಿಮಿಷಗಳ ಕಾಲ ಬ್ರಿಸ್ಕ್ ವಾಕಿಂಗ್ (ವೇಗದ ನಡಿಗೆ) ಮಾಡುವುದು ಅವರ ಅಭ್ಯಾಸ.

ಆಹಾರ ಪದ್ಧತಿ (Diet Plan)
ವಿಜಯ್ ಯಾವುದೇ ಕಠಿಣವಾದ ಡಯಟ್ ಪಾಲಿಸುವುದಿಲ್ಲ. ಆದರೆ, ಅವರು ಪಾಲಿಸುವ ಏಕೈಕ ರಹಸ್ಯವೆಂದರೆ “ಮಿತಾಹಾರ”. ತಮಗೆ ಇಷ್ಟವಾದ ಆಹಾರವನ್ನೇ ಸೇವಿಸುತ್ತಾರೆ, ಆದರೆ ಅತ್ಯಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಾರೆ. ಎಷ್ಟೇ ಇಷ್ಟವಾದ ಆಹಾರವಿದ್ದರೂ ಅತಿಯಾಗಿ ತಿನ್ನುವ ಅಭ್ಯಾಸ ವಿಜಯ್ಗಿಲ್ಲ.
• ಮನೆಯ ಊಟ: ಶೂಟಿಂಗ್ ಸ್ಪಾಟ್ನಲ್ಲೂ ವಿಜಯ್ ತುಂಬಾ ಸಿಂಪಲ್ ಆಗಿರುವ ಮನೆಯ ಊಟವನ್ನೇ ಇಷ್ಟಪಡುತ್ತಾರೆ.
• ಮಧ್ಯಾಹ್ನದ ಊಟ: ಹೆಚ್ಚಾಗಿ ಪ್ರೋಟೀನ್ ಇರುವ ತರಕಾರಿಗಳು, ಮೊಸರನ್ನ ಅಥವಾ ಕಡಿಮೆ ಕಾರ್ಬೋಹೈಡ್ರೇಟ್ ಇರುವ ಆಹಾರವನ್ನು ಸೇವಿಸುತ್ತಾರೆ.
• ಎಣ್ಣೆ ಪದಾರ್ಥಗಳಿಗೆ ಗುಡ್ಬೈ: ತಮ್ಮ ಆಹಾರದಲ್ಲಿ ಎಣ್ಣೆಯಂಶ ತುಂಬಾ ಕಡಿಮೆ ಇರುವಂತೆ ನೋಡಿಕೊಳ್ಳುತ್ತಾರೆ. ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಜಂಕ್ ಫುಡ್ ಅನ್ನು ವಿಜಯ್ ಮುಟ್ಟುವುದೇ ಇಲ್ಲ. ಅವರ ಈ ‘ಕ್ಲಾಸಿ’ ಲುಕ್ಗೆ ಇದೇ ಮುಖ್ಯ ಕಾರಣ. ಕೊಬ್ಬು ಹೆಚ್ಚಿಸುವ ಯಾವುದೇ ಆಹಾರದಿಂದ ಅವರು ದೂರವಿರುತ್ತಾರೆ.

ರಾತ್ರಿಯ ಊಟ ಮತ್ತು ಸಮಯ
ವಿಜಯ್ ಫಿಟ್ನೆಸ್ನ ಅಸಲಿ ರಹಸ್ಯ ಅವರು ರಾತ್ರಿ ಊಟ ಮಾಡುವ ಸಮಯದಲ್ಲಿದೆ.
• ನಿದ್ದೆ ಮಾಡುವ 2-3 ಗಂಟೆಗಳ ಮೊದಲೇ ಊಟ ಮುಗಿಸುತ್ತಾರೆ.
• ಸಾಮಾನ್ಯವಾಗಿ ರಾತ್ರಿ 7 ಗಂಟೆಗೇ ಲಘು ಆಹಾರ ಸೇವಿಸುತ್ತಾರೆ.
• ತಿಂದ ತಕ್ಷಣ ಮಲಗದೆ, ಎರಡು ಗಂಟೆಗಳ ಕಾಲ ಯಾವುದಾದರೂ ಕೆಲಸದಲ್ಲಿ ತೊಡಗಿರುತ್ತಾರೆ.

ಡ್ಯಾನ್ಸ್ ಮತ್ತು ಮಾನಸಿಕ ನೆಮ್ಮದಿ
ಸಿನಿಮಾಗಳಲ್ಲಿನ ಹಾಡುಗಳಿಗಾಗಿ ಅವರು ಮಾಡುವ ಕಠಿಣವಾದ ಡ್ಯಾನ್ಸ್ ಮೂಮೆಂಟ್ಸ್ ಅವರ ಪಾಲಿಗೆ ಒಂದು ಪೂರ್ಣ ಪ್ರಮಾಣದ ವ್ಯಾಯಾಮ. ಒಂದು ಹಾಡಿನ ರಿಹರ್ಸಲ್ ಮಾಡುವಾಗಲೇ ಅವರು ಸಾಕಷ್ಟು ಕ್ಯಾಲೊರಿಗಳನ್ನು ದಹಿಸುತ್ತಾರೆ. ಇದು ಅವರ ದೇಹವನ್ನು ಯಾವಾಗಲೂ ಫ್ಲೆಕ್ಸಿಬಲ್ ಆಗಿ ಇರಿಸುತ್ತದೆ.
ಕೇವಲ ದೈಹಿಕ ವ್ಯಾಯಾಮ ಮಾತ್ರವಲ್ಲ, ವಿಜಯ್ ಅವರ ಪ್ರಶಾಂತ ಮುಖದ ಹಿಂದೆ ಇರುವುದು ಅವರ ‘ಮೈಂಡ್ ಸೆಟ್’. ಶೂಟಿಂಗ್ ಒತ್ತಡಗಳ ನಡುವೆಯೂ ಪ್ರಶಾಂತವಾಗಿರುವುದು ಮತ್ತು ಸರಿಯಾದ ನಿದ್ದೆ ಮಾಡುವುದು ಅವರ ಯೌವನವನ್ನು ಇನ್ನಷ್ಟು ಹೆಚ್ಚಿಸುತ್ತವೆ.”ಒಂದೇ ದಿನದಲ್ಲಿ ಫಿಟ್ ಬಾಡಿ ಬರುವುದಿಲ್ಲ. ತಾಳ್ಮೆ, ನಿರಂತರ ಸಾಧನೆ ಮತ್ತು ಆಹಾರದ ಮೇಲೆ ನಿಯಂತ್ರಣವಿದ್ದರೆ 50ನೇ ವಯಸ್ಸಿನಲ್ಲೂ ಎನರ್ಜಿಟಿಕ್ ಆಗಿರಬಹುದು” – ಇದೇ ದಳಪತಿ ವಿಜಯ್ ತಮ್ಮ ಅಭಿಮಾನಿಗಳಿಗೆ ನೀಡುವ ಸಂದೇಶ.ವಿಜಯ್ ತಮ್ಮ ದೇಹವನ್ನು ಹೇಗೆ ಬೇಕಾದರೂ ಬದಲಾಯಿಸಬಲ್ಲರು, ಏಕೆಂದರೆ ಆಹಾರ, ಜಿಮ್ ಮತ್ತು ಇತರ ಅಭ್ಯಾಸಗಳ ವಿಷಯದಲ್ಲಿ ಅವರು ತಮ್ಮನ್ನು ತಾವು ಅಷ್ಟರಮಟ್ಟಿಗೆ ನಿಯಂತ್ರಿಸಿಕೊಳ್ಳಬಲ್ಲರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ರಾಜ್ಯಪಾಲ ಅರ್ಲೇಕರ್ ಭೇಟಿಯಾದ ಟಿವಿಕೆ ಮುಖ್ಯಸ್ಥ ವಿಜಯ್: ಸರ್ಕಾರ ರಚನೆಗೆ ಹಕ್ಕು ಮಂಡನೆಬಸ್ಸಿನೊಳಗೆ ನಿಲ್ಲಲು ಕಷ್ಟಪಡುತ್ತಿದ್ದ ಕಂಡಕ್ಟರ್‌ ನೋವಿಗೆ ಕರಗಿದ ಸಾರಿಗೆ ಸಂಸ್ಥೆ ; ಈಗ ಕಚೇರಿ ಕೆಲಸಕ್ಕೆ ನಿಯೋಜನೆ !ವಿಜಯ್ ಟಿವಿಕೆ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಕನ್ನಡಿಗ; ತುಮಕೂರಿನ ವ್ಯಕ್ತಿ ಈಗ ತಮಿಳುನಾಡಿನ ಶಾಸಕ!ಗಡಿಬಿಡಿಯಲ್ಲಿ 15 ರೂಪಾಯಿಗೆ ₹1515 ಪಾವತಿ ಮಾಡಿದ ಗ್ರಾಹಕ, ಪ್ರಾಮಾಣಿಕತೆ ಮೆರೆದ ಹಣ್ಣಿನ ವ್ಯಾಪಾರಿ!ಶೃಂಗೇರಿ ಫಲಿತಾಂಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ; ಸಿಎಂ ಸಿದ್ದರಾಮಯ್ಯBIG NEWS: ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು; ಜಾತ್ಯಾತೀತ ಶಕ್ತಿಗಳು ಒಂದಾಗಿ ಇರಬೇಕೆಂದು ಟಿವಿಕೆ ಜತೆ ಮೈತ್ರಿ: ಡಿಸಿಎಂ ಡಿ.ಕೆ.ಶಿವಕುಮಾರ್ಶಾಸಕರಿಗೆ ಟಿಕೆಟ್ ವಿತರಣೆಗೂ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆRain alert Karnataka : ರಾಜ್ಯದ ಹಲವೆಡೆ ನಾಳೆಯಿಂದ 3 ದಿನ ಭಾರೀ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆBIG NEWS: ವಿಜಯ್ ಭೇಟಿಯಾದ ಕಾಂಗ್ರೆಸ್ ಶಾಸಕರು; ನಾಳೆಯೇ ದಳಪತಿ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಕುವೆಂಪು ವಿವಿ ಘಟಿಕೋತ್ಸವ : ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು