LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

“ಅವನನ್ನು ಮತ್ತೆ ನೋಡುವವರೆಗೂ ಶಾಂತಿ ಇಲ್ಲ”: ಪತಿ ದಿಲೀಪ್ ರಾಜ್ ಅಗಲಿಕೆಗೆ ಪತ್ನಿ ಶ್ರೀವಿದ್ಯಾ ಹಂಚಿಕೊಂಡ ಭಾವುಕ ಪೋಸ್ಟ್ ವೈರಲ್

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಿಲೀಪ್‌ ರಾಜ್‌ (47) ಅವರ ಅಕಾಲಿಕ ನಿಧನ ಇಡೀ ಸ್ಯಾಂಡಲ್‌ವುಡ್‌ಅನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಮೇ 13ರಂದು ಹೃದಯಾಘಾತದಿಂದ ವಿಧಿವಶರಾದ ದಿಲೀಪ್‌ ಅವರ ಅಗಲಿಕೆಯಿಂದ ಕಂಗಾಲಾಗಿರುವ ಪತ್ನಿ ಶ್ರೀವಿದ್ಯಾ ಅವರು, ಈಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೊದಲ ಪೋಸ್ಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

https://www.instagram.com/p/DYTS7r_P3xt/?utm_source=ig_web_copy_link&igsh=NTc4MTIwNjQ2YQ==

“ಅವರನ್ನು ಸೇರೋವರೆಗೂ ನನಗೆ ನೆಮ್ಮದಿಯಿಲ್ಲ”

ಪತಿಯ ಶವದ ಮುಂದೆ ಗೋಳಾಡಿದ್ದ ಶ್ರೀವಿದ್ಯಾ ಅವರು, ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕವಾಗಿ ಬರೆದುಕೊಂಡಿದ್ದಾರೆ,”ದಿಲೀಪ್ ಅವರು ಕಲೆ, ಸಿನಿಮಾ ಮತ್ತು ಅವರು ಮಾಡಿದ ಪ್ರತಿ ಕರುಣೆಯ ಕೆಲಸದ ರೂಪದಲ್ಲಿ ನಮ್ಮ ನಡುವೆಯೇ ಇರುತ್ತಾರೆ. ಅವರು ಶಾಂತಿಯಿಂದ ಇರಲಿ ಎಂದು ನಾನು ಅವರನ್ನು ಕಳುಹಿಸಿಕೊಡಲು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವಂತೂ ಖಚಿತ ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು.”

25ನೇ ವಿವಾಹ ವಾರ್ಷಿಕೋತ್ಸವ

ವಿಪರ್ಯಾಸವೆಂದರೆ, ದಿಲೀಪ್ ಮತ್ತು ಶ್ರೀವಿದ್ಯಾ ದಂಪತಿಗೆ ಈ ವರ್ಷ 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮವಿತ್ತು. “25ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಇಂಥದ್ದೊಂದು ಗಿಫ್ಟ್ ಕೊಟ್ಟು ಹೋದರು. ನಮಗೆಲ್ಲ ನೋವು ಕೊಟ್ಟು ಅವರು ನಗುತ್ತಾ ಹೊರಟು ಹೋದರು” ಎಂದು ಅಂತ್ಯಕ್ರಿಯೆಯ ವೇಳೆ ಶ್ರೀವಿದ್ಯಾ ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ನೆರೆದಿದ್ದವರ ಎದೆಯನ್ನು ಕಲಕುವಂತಿತ್ತು.

“ಪತ್ನಿಯ ಖುಷಿಯೇ ನನ್ನ ಲೈಫ್ ಗೋಲ್” ಎಂದಿದ್ದ ದಿಲೀಪ್

ದಿಲೀಪ್ ರಾಜ್ ಅವರು ಈ ಹಿಂದೆ ನೀಡಿದ್ದ ಸಂದರ್ಶನವೊಂದು ಈಗ ವೈರಲ್ ಆಗುತ್ತಿದೆ. ಅದರಲ್ಲಿ ಅವರು, “ಶ್ರೀವಿದ್ಯಾ ಅವರನ್ನು ಖುಷಿಯಾಗಿ ಇಡೋದೇ ನನ್ನ ಜೀವನದ ಉದ್ದೇಶ. ಅವರು ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೇನೆ” ಎಂದು ಹೇಳಿದ್ದರು. ಕಾಲೇಜು ದಿನಗಳಿಂದಲೇ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ, ಕಿರುತೆರೆಯಲ್ಲಿ ಅತ್ಯಂತ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಪತ್ನಿಯ ಸಪೋರ್ಟ್ ಇಲ್ಲದೆ ನಾನು ಏನೂ ಅಲ್ಲ ಎಂದು ದಿಲೀಪ್ ಸದಾ ಹೇಳುತ್ತಿದ್ದರು.

ಸಾಧನೆಯ ಹಾದಿ ಮತ್ತು ಅಂತಿಮ ವಿದಾಯ

ನಿರ್ಮಾಣ: ‘ಪಾರು’, ‘ಮಲೆಮಹದೇಶ್ವರ’ ಹಾಗೂ ಅತೀ ಹೆಚ್ಚು ಜನಪ್ರಿಯತೆ ತಂದುಕೊಟ್ಟ ‘ಹಿಟ್ಲರ್ ಕಲ್ಯಾಣ’ ಸೇರಿದಂತೆ ಹಲವು ಧಾರಾವಾಹಿಗಳನ್ನು ಈ ಜೋಡಿ ನಿರ್ಮಿಸಿತ್ತು.’ಎಜೆ’ (AJ) ಪಾತ್ರದ ಮೂಲಕ ಮನೆಮಾತಾಗಿದ್ದ ದಿಲೀಪ್, ಸಜ್ಜನ ಕಲಾವಿದ ಎಂದು ಹೆಸರು ಮಾಡಿದ್ದರು.

ರಾಮನಗರದಲ್ಲಿರುವ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ದಿಲೀಪ್ ರಾಜ್ ಅವರ ಅಂತಿಮ ಸಂಸ್ಕಾರ ನೆರವೇರಿತು.ಕನಸಿನ ಮನೆ ‘ರಾಜ್ ಶ್ರೀ’ ಪ್ರವೇಶಿಸಿದ ಕೆಲವೇ ವರ್ಷಗಳಲ್ಲಿ ದಿಲೀಪ್ ಇಹಲೋಕ ತ್ಯಜಿಸಿರುವುದು ಅವರ ಪತ್ನಿ ಮತ್ತು ಪುತ್ರಿಯರಾದ ಧೃತಿ ಹಾಗೂ ಅದಿತಿಗೆ ತುಂಬಲಾರದ ನಷ್ಟವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಇಂಧನ ಉಳಿತಾಯಕ್ಕೆ ದೆಹಲಿ ಸರ್ಕಾರದ ಬಿಗ್‌ ಪ್ಲಾನ್: ವಾರದಲ್ಲಿ 2 ದಿನ WFH, ಅಧಿಕಾರಿಗಳ ವಿದೇಶ ಪ್ರವಾಸಕ್ಕೆ ಬ್ರೇಕ್BREAKING : ಬ್ರಿಕ್ಸ್ ಸಭೆ : ದೆಹಲಿಯಲ್ಲಿ ರಷ್ಯಾ-ಇರಾನ್ ವಿದೇಶಾಂಗ ಸಚಿವರ ಜೊತೆ ಪ್ರಧಾನಿ ಮೋದಿ ಮಾತುಕತೆ..!BREAKING : ತಮಿಳುನಾಡಿನಲ್ಲಿ ‘ಮದ್ಯ’ ಖರೀದಿಸಲು ಇನ್ಮುಂದೆ 21 ವರ್ಷ ಕಡ್ಡಾಯ ; ಸಿಎಂ ದಳಪತಿ ವಿಜಯ್ ಆದೇಶSHOCKING : ಬಿರುಗಾಳಿ ಅಬ್ಬರಕ್ಕೆ ತಗಡಿನ ಶೀಟ್‌ ಸಮೇತ ಆಕಾಶಕ್ಕೆ ಹಾರಿದ ಯುವಕ ; ಭಯಾನಕ ವೀಡಿಯೋ ವೈರಲ್ |WATCH VIDEOBREAKING : ರೇಣುಕಾಸ್ವಾಮಿ ಕೊಲೆ ಕೇಸ್ ; ನಾಳೆ ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಭವಿಷ್ಯ ನಿರ್ಧಾರಹಿಜಾಬ್ ಧರಿಸಿ ಬಂದರೆ ರಾಜ್ಯದ ಎಲ್ಲಾ ಶಾಲಾ-ಕಾಲೇಜು ಕೇಸರಿಮಯವಾಗಲಿದೆ: ಮಾಜಿ ಸಚಿವ ಈಶ್ವರಪ್ಪ ಎಚ್ಚರಿಕೆBREAKING : ಮೇ 24 ರಂದು ನಡೆಯಬೇಕಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ : KEA ಮಾಹಿತಿBIG NEWS: ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಬೈಕ್ ಏರಿ ವಿಧಾನಭವನಕ್ಕೆ ಆಗಮಿಸಿದ ಸಿಎಂ ದೇವೇಂದ್ರ ಫಡ್ನವಿಸ್ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ್ ಶಾಮನೂರು ಪ್ರಮಾಣವಚನ ಸ್ವೀಕಾರBREAKING : ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ