LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೆಟ್‌ಫ್ಲಿಕ್ಸ್‌ನವರು ಕನ್ನಡ ಸಿನಿಮಾನ ಮೂಸ್ತಾನೂ ಇಲ್ಲ, ಈ ನಿರ್ಮಾಪಕರಿಂದಲೇ ಕನ್ನಡ ಇಂಡಸ್ಟ್ರಿ ಸೋತಿದೆ: ಪವನ್ ಒಡೆಯರ್ ಆರೋಪ

ಈ ವರ್ಷ ಭಾರತದ ವಿವಿಧ ಚಿತ್ರರಂಗಗಳಲ್ಲಿ ಸೋಲುಂಡಿರುವ ಚಿತ್ರರಂಗ ಯಾವುದು ಎಂಬ ಪ್ರಶ್ನೆ ಮೂಡಿದರೆ, ಸಿನಿಮಾ ಬಗ್ಗೆ ಜ್ಞಾನ ಇರುವ ಪ್ರತಿಯೊಬ್ಬನ ಬಾಯಲ್ಲೂ ಬರುವ ಹೆಸರು ಕನ್ನಡ ಚಿತ್ರರಂಗ.

ಹೌದು, ಈ ವರ್ಷ ಕನ್ನಡದಲ್ಲಿ ಗೆದ್ದ ಚಿತ್ರಗಳ ಹತ್ತು ಹೆಸರುಗಳನ್ನು ಹೇಳಿ ಎಂದರೆ ಯಾರ ಬಳಿಯೂ ಉತ್ತರವಿಲ್ಲ. ಪೋಸ್ಟರ್‌ಗಳಲ್ಲಿ ಹಾಗೂ ವಿಜಯಯಾತ್ರೆ ಮಾಡಿ ನಾವು ್ಗಗೆದ್ದೆವು ಎಂದು ಘೋಷಿಸಿಕೊಂಡ ಚಿತ್ರಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿರುವುದು ಸಿನಿ ರಸಿಕರಿಗೇ ತಿಳಿದಿರುವ ವಿಷಯ.

ಹೀಗೆ ಹೀನಾಯವಾಗಿ ಸೋಲುತ್ತಿರುವ ಕನ್ನಡದ ಕೆಲ ಚಿತ್ರಗಳು ಚೆನ್ನಾಗಿದ್ದರೂ ತಮಗೆ ಸಿಗಬೇಕಾದ ಬೆಲೆ ಸಿಗದೇ ಕಂಗಾಲಾಗಿವೆ. ಅಂತಹ ಚಿತ್ರಗಳಿಗೆ ಒಟಿಟಿಯಲ್ಲಿ ಒಳ್ಳೆಯ ಮನ್ನಣೆ ಸಿಕ್ಕಿ ಚಿತ್ರ ನಿರ್ಮಿಸಿದ ಹಾಗೂ ನಿರ್ದೇಶಿಸಿದ ನಿರ್ದೇಶಕರಲ್ಲಿ ಭರವಸೆ ಮೂಡಿಸಿದೆ.

ಹಾಗೆಂದ ಮಾತ್ರಕ್ಕೆ ಒಟಿಟಿಯಲ್ಲಿ ಕನ್ನಡದ ಚಿತ್ರಗಳಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡುತ್ತಿಲ್ಲ. ಬದಲಾಗಿ ಒಟಿಟಿಗಳಿಗೆ ಸ್ಟಾರ್‌ಗಳಲ್ಲದವರ ಚಿತ್ರಗಳನ್ನು ತಲುಪಿಸುವುದು ಹರಸಾಹಸವೇ ಸರಿ. ಈ ಕುರಿತು ನಿರ್ದೇಶಕ ಪವನ್ ಒಡೆಯರ್ ಫಸ್ಟ್ ನ್ಯೂಸ್ ಜತೆ ಮಾತನಾಡಿದ್ದು, ಕನ್ನಡ ಚಿತ್ರರಂಗ ಹಾಗೂ ಒಟಿಟಿ ವೇದಿಕೆಗಳ ನಡುವೆ ಇರುವ ಅಂತರ ಹಾಗೂ ಸಮಸ್ಯೆಯ ಕುರಿತು ತಿಳಿಸಿದ್ದಾರೆ.

ಕನ್ನಡ ಚಿತ್ರರಂಗದ ವಿಫಲತೆಗೆ ಪ್ರಮುಖ ಕಾರಣಗಳಲ್ಲಿ ಚಿತ್ರ ಮಾಡಬಲ್ಲ ಸಾಮರ್ಥ್ಯ ಹಾಗೂ ಅನುಭವ ಇರುವ ಕಲಾವಿದರು ಚಿತ್ರ ಮಾಡದೇ ಸುಮ್ಮನಿರುವುದು ಪ್ರಮುಖ ಕಾರಣ ಎಂದರೆ, ಹೆಚ್ಚಾಗಿ ಸಮಸ್ಯೆಯಾಗುತ್ತಿರುವುದು ಹೊಸ ನಿರ್ಮಾಪಕರಿಂದ ಎನ್ನುತ್ತಾರೆ ಪವರ್ ಒಡೆಯರ್. ಯಾರೋ ಅಮೆಜಾನ್‌ನಲ್ಲಿ, ನೆಟ್‌ಫ್ಲಿಕ್ಸ್‌ನಲ್ಲಿ ನಾನು ಮಾಡಿಸಿಕೊಡುತ್ತೇನೆ ಎಂದು ಹೇಳಿದ ಮಾತು ಕೇಳಿ ನಂಬಿ ಮೋಸ ಹೋಗುತ್ತಿದ್ದಾರೆ. ಆದರೆ ಅಸಲಿಯತ್ತಿಗೆ ಅಮೆಜಾನ್ ಪ್ರೈಮ್‌ನವರು ಕನ್ನಡ ಚಿತ್ರಗಳನ್ನು ತೆಗೆದುಕೊಳ್ಳುತ್ತಿಲ್ಲ, ಅವರು ಬಿಡಿ ನೆಟ್‌ಫ್ಲಿಕ್ಸ್‌ನವರು ಕನ್ನಡ ಚಿತ್ರವನ್ನು ಮೂಸುತ್ತಲೂ ಇಲ್ಲ ಎಂದು ಕನ್ನಡ ಚಿತ್ರಗಳತ್ತ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಇರುವ ಬೆಲೆಯನ್ನು ಬಿಚ್ಚಿಟ್ಟಿದ್ದಾರೆ.

ಇನ್ನು ಯಾವುದಾದರೂ ಚಿತ್ರ ಹಿಟ್ ಆದರೆ ಸಾಕು ಅದೇ ಮಾದರಿಯಲ್ಲಿ ಚಿತ್ರವನ್ನು ಮಾಡಲು ಮುಂದಾಗಿಬಿಡುತ್ತಾರೆ. ಅದಕ್ಕೆ ಏನಿಲ್ಲವೆಂದರೂ ಐದಾರು ಕೋಟಿ ಖರ್ಚಾಗುತ್ತದೆ. ಅಷ್ಟು ಖರ್ಚು ಮಾಡಿ ಲಾಭ ಗಳಿಸುವುದಾದರೂ ಹೇಗೆ? ಅದರ ಬದಲು ಒಂದೆರಡು ಕೋಟಿ ಒಳಗೆ ಚಿತ್ರವನ್ನು ನಿರ್ಮಿಸಲು ಮುಂದಾಗಬೇಕು, ಅಂತಹ ಚಿತ್ರಗಳು ಲಾಭ ಗಳಿಸಿ ಮುಂದೆ ಏನಾದರೂ ಮಾಡಲು ವಿಶ್ವಾಸವನ್ನು ಹುಟ್ಟಿಸುತ್ತವೆ. ಉದಾಹರಣೆಗೆ ಸು ಫ್ರಮ್ ಸೋ ತೆಗೆದುಕೊಂಡ ಪವನ್ ಅದೇ ರೀತಿಯ ಹತ್ತಾರು ಚಿತ್ರಗಳು ಕಡಿಮೆ ಬಜೆಟ್‌ನಲ್ಲಿ ಬಂದು ಹಿಟ್ ಆದರೆ ಕನ್ನಡ ಚಿತ್ರರಂಗವೂ ಇತರೆ ಚಿತ್ರಗಳ ಹಾಗೆ ಆಗುತ್ತದೆ ಹಾಗೂ ಒಟಿಟಿಯಲ್ಲಿ ಕನ್ನಡ ಚಿತ್ರಗಳಿಗೂ ಬೆಲೆ ಸಿಗುತ್ತದೆ ಎಂದು ಹೇಳಿಕೊಂಡರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
CWRC ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು: ರಾಜ್ಯದ ರೈತರ ಹಿತ ಕಾಯಲು ಸರ್ಕರ ಬದ್ಧ: ಸಚಿವ ರಾಮಲಿಂಗಾರೆಡ್ಡಿBIG NEWS: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ; ಆದರೂ ಡಿ.ಕೆ.ಶಿವಕುಮಾರ್ ತಮಿಳುನಾಡು ಸಿಎಂ ಅವರನ್ನು ಸಂಧಾನಕ್ಕೆ ಆಹ್ವಾನಿಸಿದ್ದೇಕೆ? ಆರ್.ಅಶೋಕ್ ಪ್ರಶ್ನೆಮಾಜಿ ಸಿಎಂ ಜೆ.ಹೆಚ್. ಪಟೇಲ್ ಬೆಂಬಲಿಗರಾಗಿದ್ದ ಪಿ. ಶೇಖರಪ್ಪ ನಿಧನSHOCKING : ಲವರ್ ಜೊತೆ ಮಾತನಾಡಲು ಅಡ್ಡಿ ; ಅಳುತ್ತಿದ್ದ 3 ವರ್ಷದ ಮಗನನ್ನೇ ಕೊಂದ ಪಾಪಿ ತಾಯಿ.!ಸ್ವಾತಂತ್ರೋತ್ಸವ ಫಲಪುಷ್ಪ ಪ್ರದರ್ಶನ : ಲಾಲ್‌ಬಾಗ್‌ನಲ್ಲಿ ವಿವಿಧ ಸ್ಪರ್ಧೆ, ಮಳಿಗೆ ಹಂಚಿಕೆಗೆ ಅರ್ಜಿ ಆಹ್ವಾನಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾಹಿತಿ ನೀಡಿದವರೇ ಅರೆಸ್ಟ್: ಹೈಕೋರ್ಟ್ ತರಾಟೆಜಲಾಶಯದ ನೀರನ್ನು ಕುಡಿಯುವ ನೀರಿಗಾಗಿ ಮಾತ್ರ ಬಳಸಿBIG NEWS : ಸೈಬರ್ ಅಪರಾಧಗಳಿಗೆ ಮರಣದಂಡನೆ ; ಸಂಸತ್ತಿನಲ್ಲಿ ಮಹತ್ವದ ಮಸೂದೆ ಅಂಗೀಕಾರBREAKING : ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉದ್ವಿಗ್ನತೆ ; ಭದ್ರತಾ ಪಡೆಗಳ ಗುಂಡಿನ ದಾಳಿಯಲ್ಲಿ 20 ಮಂದಿ ಸಾವುಪೊಲೀಸ್ ನೇಮಕಾತಿ ಪರೀಕ್ಷೆ: ವಸ್ತ್ರಸಂಹಿತೆ, ನಿಷೇಧಿತ ವಸ್ತುಗಳು ಸೇರಿ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಸೂಚನೆ