LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜೈಲಿನಲ್ಲಿ ಬೇಸತ್ತು ನಟ ದರ್ಶನ್ ಆತ್ಮಹತ್ಯೆ ಯತ್ನ? ಡಿಜಿಪಿ ಅಲೋಕ್ ಕುಮಾರ್‌ ಕೊಟ್ಟ ಉತ್ತರವೇನು?

ನಿನ್ನೆ ( ಮೇ 19 ) ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ವಿಶೇಷ ದಿನವಿತ್ತು. ಹೀಗಾಗಿ ವಿಜಯಲಕ್ಷ್ಮಿ ದರ್ಶನ್ ತಾವು ತಮ್ಮ ಪತಿಯನ್ನು ಖುದ್ದಾಗಿ, ವೈಯಕ್ತಿಕವಾಗಿ ಭೇಟಿಯಾಗಲು ಅನುವು ಮಾಡಿಕೊಡುವಂತೆ ಪರಪ್ಪನ ಅಗ್ರಹಾರ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಬೇಡಿಕೆಯನ್ನು ಇಟ್ಟಿದ್ದರು.

ಅದರಂತೆ ವಿಜಯಲಕ್ಷ್ಮಿ ದರ್ಶನ್ ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಮಗನ ಸಮೇತ ಕೊಲೆ ಆರೋಪಿ ದರ್ಶನ್ ಇದ್ದ ಕಾರಾಗೃಹಕ್ಕೆ ತೆರಳಿ ಭೇಟಿಯಾಗಿ ಬಂದಿದ್ದರು.

ಈ ಸುದ್ದಿಗಳ ಜತೆ ಕೆಲ ಮಾಧ್ಯಮಗಳು ನಟ ದರ್ಶನ್ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ಸುದ್ದಿ ಸಹ ಹರಿದಾಡಿತ್ತು. ಹಲವು ದಿನಗಳಿಂದ ಜೈಲಿನಲ್ಲೇ ಇರುವ ದರ್ಶನ್ ಬೇಸತ್ತು ಆತ್ಮಹತ್ಯೆ ಯತ್ನ ಮಾಡಿದರು ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ ಎಂದು ಹೆಡ್‌ಲೈನ್‌ಗಳು ಹರಿದಾಡಿದ್ದವು.

ಇದನ್ನು ದರ್ಶನ್ ಮೇಲೆ ಎಲ್ಲಿಲ್ಲದ ಪ್ರೀತಿ ಇಟ್ಟುಕೊಂಡಿರುವ ಕೆಲ ಅಭಿಮಾನಿಗಳು ಕಂಡು ತೀರ ಬೇಸರಕ್ಕೆ ಒಳಗಾಗಿದ್ದರು. ಆದರೆ ಪರಪ್ಪನ ಅಗ್ರಹಾರ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆಯನ್ನು ಕೊಟ್ಟರು. ಇದೊಂದು ಗಾಳಿ ಸುದ್ದಿಯಾಗಿದ್ದು ಅಭಿಮಾನಿಗಳಲ್ಲಿ ಇದರಿಂದ ಆತಂಕ ಮೂಡಿದೆ, ಯಾರೂ ಸಹ ಈ ಸುದ್ದಿಗೆ ಕಿವಿಗೊಡಬೇಡಿ ಎಂದರು. ಇನ್ನು ಇದೊಂದು ಆಧಾರರಹಿತ ವದಂತಿಯಾಗಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದರು.

ಇನ್ನೂ ಮುಂದುವರಿದು ಮಾತನಾಡಿದ ಅಲೋಕ್ ಕುಮಾರ್ ದರ್ಶನ್ ಅವರಿಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಬೇಲ್ ಸಿಗದೇ ಇರುವುದರಿಂದ ಕುಗ್ಗಿರುವುದು ನಿಜ ಎಂದರು. ಅಲ್ಲದೇ ತಿಂಗಳಿಗೆ 60 ನಿಮಿಷ ದೂರವಾಣಿಯಲ್ಲಿ ಮಾತನಾಡುವ ಅವಕಾಶವನ್ನು ಏರಿಕೆ ಮಾಡಿ ಎಂದೂ ಸಹ ದರ್ಶನ್ ಮನವಿ ಮಾಡಿಕೊಂಡರು ಎಂದು ಅಲೋಕ್ ಕುಮಾರ್ ತಿಳಿಸಿದರು.

Disclaimer: ಜೀವನದಲ್ಲಿ ಯಾವುದೇ ಕಹಿ ಘಟನೆ ನಡೆದರೂ ಅಥವಾ ಹಿನ್ನಡೆಯುಂಟಾದರೂ ಎಲ್ಲದ್ದಕ್ಕೂ ಆತ್ಮಹತ್ಯೆಯೇ ಪರಿಹಾರವಲ್ಲ. ಒಂದುವೇಳೆ ನಿಮಗೆ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆ ಬಂದರೆ ನಿಮ್ಮ ಪ್ರೀತಿ ಪಾತ್ರರ ಜತೆ ಮಾತನಾಡಿ ಅಥವಾ ಈ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ: 9152987821

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಆಸ್ಟ್ರೇಲಿಯಾದ ಮ್ಯಾರಥಾನ್ ನಲ್ಲಿ ಗಮನಸೆಳೆದ ಪೊಲೀಸ್ ಅಧಿಕಾರಿ ಸಂದೀಪ್ ಪಾಟೀಲ್, ಸದಾನಂದ ಅಮ್ರಾಪುರBIG NEWS: ಕುಮಾರಸ್ವಾಮಿ ಪಂಥಾಹ್ವಾನ ನಾನು ಸ್ವೀಕರಿಸುವೆ: ದಿನಾಂಕ ಹಾಗೂ ಸ್ಥಳ ನಿಗದಿ ಮಾಡಲಿ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ಜೂ. 1 ರಿಂದ ಬೀಡಿ ಕಾರ್ಮಿಕರ ಕಲ್ಯಾಣ ನಿಧಿ ಆಸ್ಪತ್ರೆ ಬಂದ್ಕೊಳವೆಬಾವಿಗಳ ಜಲ ಮರುಪೂರಣಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆ: ‘ಸ್ಪಾಂಜ್ ಜೋನ್’ ಮೂಲಕ ಅಂತರ್ಜಲ ಮಟ್ಟ ಹೆಚ್ಚಳ, ಬತ್ತಿದ ಬೋರ್ ವೆಲ್ ಗಳಿಗೆ ಮರುಜೀವಮಹಿಳೆ ಸರ ದೋಚಿ ಪರಾರಿಯಾಗುತ್ತಿದ್ದಾಗಲೇ ಸಿಕ್ಕಿಬಿದ್ದ ಕಳ್ಳಜೈಲಿನಲ್ಲಿ ಬೇಸತ್ತು ನಟ ದರ್ಶನ್ ಆತ್ಮಹತ್ಯೆ ಯತ್ನ? ಡಿಜಿಪಿ ಅಲೋಕ್ ಕುಮಾರ್‌ ಕೊಟ್ಟ ಉತ್ತರವೇನು?BIG NEWS: ವಿಜಯ್ ಸಂಪುಟದಲ್ಲಿ ಕಾಂಗ್ರೆಸ್ ನ ಇಬ್ಬರಿಗೆ ಸಚಿವ ಸ್ಥಾನ: ತಮಿಳುನಾಡಿನಲ್ಲಿ 59 ವರ್ಷಗಳ ನಂತರ ಸಚಿವ ಸಂಪುಟಕ್ಕೆ ಕಾಂಗ್ರೆಸ್ ಶಾಸಕರು ಸೇರ್ಪಡೆರಾಜ್ಯದಲ್ಲಿ 6,000 ಕೋಟಿ ರೂ. ಹೂಡಿಕೆಗೆ ಆ್ಯಕ್ಸಿಸ್ ಕೇಡ್ಸ್ ಏರೊಸ್ಪೇಸ್ ಒಲವು: 20 ಸಾವಿರ ಪ್ರತ್ಯಕ್ಷ ಹಾಗೂ 54 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿBIG NEWS: ‘ವಿಜಯ್ ಸಂಪುಟದಲ್ಲಿ ಎಐಎಡಿಎಂಕೆ ಬಂಡಾಯಗಾರರು ಇರಲ್ಲ’: ಸಿಪಿಎಂ, ವಿಸಿಕೆ ಎಚ್ಚರಿಕೆ ಬೆನ್ನಲ್ಲೇ ಮಿತ್ರಪಕ್ಷಗಳಿಗೆ ಟಿವಿಕೆ ಭರವಸೆ2026-27ರ ದೇಶೀಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ; ಅ. 11 ರಿಂದ ರಣಜಿ ಟ್ರೋಫಿ ಆರಂಭ