LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಟೈಲಿಶ್ ಲಿವಿಂಗ್ ಏರಿಯಾ, ಕಿತ್ತಳೆ ಬಣ್ಣದ ವಿಂಟೇಜ್ ಬಾಗಿಲು:ಹೇಗಿದೆ ಗೊತ್ತಾ ಧಕ್ ಧಕ್ ಬೆಡಗಿಯ ಸೀ-ಫೇಸಿಂಗ್ ಅರಮನೆ?

ಬಾಲಿವುಡ್‌ನ ಎವರ್‌ಗ್ರೀನ್ ನಟಿ ಮಾಧುರಿ ದೀಕ್ಷಿತ್ ಮತ್ತು ಡಾ. ಶ್ರೀರಾಮ್ ಮಾಧವ್ ನೆನೆ ಅವರ ಮುಂಬೈನಲ್ಲಿರುವ ಅಪಾರ್ಟ್‌ಮೆಂಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮುಂಬೈನ ಪ್ರತಿಷ್ಠಿತ ಕಟ್ಟಡವೊಂದರ 53ನೇ ಮಹಡಿಯಲ್ಲಿರುವ, ಅರಬ್ಬೀ ಸಮುದ್ರಕ್ಕೆ ಮುಖ ಮಾಡಿರುವ ಈ ಸೀ-ಫೇಸಿಂಗ್ ಮನೆ ಬರೋಬ್ಬರಿ 48 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. 5,500 ಚದರ ಅಡಿಯ ಈ ವಿಶಾಲವಾದ ಮನೆ ಕೇವಲ ಐಷಾರಾಮಿ ಮಾತ್ರವಲ್ಲ, ಪ್ರಸಿದ್ಧ ಕಲಾವಿದ ಎಂ.ಎಫ್. ಹುಸೇನ್ ಅವರ ವರ್ಣಚಿತ್ರಗಳಿಂದ ಕಲಾ ಪ್ರೇಮಿಗಳ ಮ್ಯೂಸಿಯಂನಂತೆ ಕಂಗೊಳಿಸುತ್ತಿದೆ. ಪ್ರಸಿದ್ಧ ಆರ್ಕಿಟೆಕ್ಟ್ ಅಪೂರ್ವಾ ಶ್ರಾಫ್ ನೇತೃತ್ವದ ಲೈತ್ ಡಿಸೈನ್ ಸಂಸ್ಥೆ ಈ ಮನೆಯನ್ನು ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಿದೆ.

ಎಂ.ಎಫ್. ಹುಸೇನ್ ಕಲಾಕೃತಿಗಳಿಂದ ಕಂಗೊಳಿಸುವ ಲಿವಿಂಗ್ ರೂಮ್

ಮನೆಯ ಪ್ರವೇಶದ್ವಾರದಲ್ಲೇ ದೊಡ್ಡ ಕಿತ್ತಳೆ ಬಣ್ಣದ ವಿಂಟೇಜ್ ಶೈಲಿಯ ಬಾಗಿಲು ಅತಿಥಿಗಳನ್ನು ಸ್ವಾಗತಿಸುತ್ತದೆ. ಲಿವಿಂಗ್ ರೂಮ್ ಮತ್ತು ಡೈನಿಂಗ್ ಏರಿಯಾವನ್ನು ಯಾವುದೇ ಗೋಡೆಗಳಿಲ್ಲದೆ ಮುಕ್ತವಾಗಿ ವಿನ್ಯಾಸಗೊಳಿಸಲಾಗಿದ್ದು, ಇಡೀ ಜಾಗಕ್ಕೆ ಕ್ರೀಮ್ ಮತ್ತು ಬಿಳಿ ಬಣ್ಣದ ಟಚ್ ನೀಡಲಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಭಾರತದ ಖ್ಯಾತ ಚಿತ್ರಕಲಾವಿದ ಎಂ.ಎಫ್. ಹುಸೇನ್ ಅವರ ವರ್ಣಚಿತ್ರಗಳು. ಮಾಧುರಿ ದೀಕ್ಷಿತ್ ಅವರ ಲಿವಿಂಗ್ ರೂಮ್ ಗೋಡೆಗಳನ್ನು ಇವರ ಪೇಂಟಿಂಗ್‌ಗಳು ಅಲಂಕರಿಸಿವೆ. ಒಮ್ಮೆ ಎಂ.ಎಫ್. ಹುಸೇನ್ ಅವರು ಮಾಧುರಿ ಅವರ ಮನೆಯ ಗೋಡೆಗಳ ಮೇಲೆಯೇ ನೇರವಾಗಿ ಚಿತ್ರ ಬಿಡಿಸಲು ಬಯಸಿದ್ದರಂತೆ. ಆದರೆ ಮನೆ ಬದಲಾಯಿಸುವಾಗ ಗೋಡೆಯನ್ನು ಕೊಂಡೊಯ್ಯಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಮಾಧುರಿ ಅವರು ಪೇಂಟಿಂಗ್‌ಗಳನ್ನು ಮಾತ್ರ ಹಾಕಲು ಒಪ್ಪಿಕೊಂಡಿದ್ದರಂತೆ. ಇಲ್ಲಿನ ಬಾಲ್ಕನಿಯಿಂದ ಮುಂಬೈ ನಗರ ಮತ್ತು ಅರಬ್ಬೀ ಸಮುದ್ರದ ಅದ್ಭುತ ನೋಟ ಕಣ್ಣಿಗೆ ಕಟ್ಟುತ್ತದೆ.

ಡಾ. ನೆನೆ ಇಷ್ಟದ ಗಿಟಾರ್ ಮತ್ತು ಸಂಗೀತದ ಕೋಣೆ

ಈ ಮನೆಯ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಇಡೀ ಕುಟುಂಬ ಒಟ್ಟಿಗೆ ಸಮಯ ಕಳೆಯುವ ಮ್ಯೂಸಿಕ್ ರೂಮ್. ಗಿಟಾರ್, ಡ್ರಮ್ ಸೆಟ್ ಹಾಗೂ ಅತ್ಯಾಧುನಿಕ ಹೋಮ್ ಥಿಯೇಟರ್ ಒಳಗೊಂಡಿರುವ ಈ ಕೋಣೆ ಜ್ಯಾಮಿಂಗ್ ಸೆಷನ್‌ಗಳಿಗೆ ಸೂಕ್ತವಾದ ಜಾಗವಾಗಿದೆ. ಇನ್ನು ಮಾಧುರಿ ದೀಕ್ಷಿತ್ ಅವರ ಪುತ್ರರಾದ ಆರಿನ್ ಮತ್ತು ರೇಯಾನ್ ಅವರ ಕೊಠಡಿಗಳನ್ನು ಬ್ಲೂ ಮತ್ತು ಗ್ರೇ ಬಣ್ಣದ ಲೈಟಿಂಗ್ಸ್ ಹಾಗೂ ಕಂಟೆಂಪರರಿ ಶೈಲಿಯ ಪೀಠೋಪಕರಣಗಳಿಂದ ವಿನ್ಯಾಸಗೊಳಿಸಲಾಗಿದೆ. ದಂಪತಿಗಳ ಮಲಗುವ ಕೋಣೆಯೂ ಸಹ ಗ್ರೇ ಮತ್ತು ಬಿಳಿ ಬಣ್ಣದ ಥೀಮ್ ಹೊಂದಿದ್ದು, ಇಂಡೋರ್ ಪ್ಲಾಂಟ್ಸ್ ಮತ್ತು ಕಲಾಕೃತಿಗಳಿಂದ ಕಂಗೊಳಿಸುತ್ತಿದೆ.

ವೀಕ್ಷಣೆಗಾಗಿ ಫ್ಲೋರ್-ಟು-ಸೀಲಿಂಗ್ ಕಿಟಕಿಗಳಿರುವ ಮಾಡರ್ನ್ ಕಿಚನ್

ಮಾಧುರಿ ದೀಕ್ಷಿತ್ ಅವರ ಪತಿ ಡಾ. ನೆನೆ ಅವರಿಗೆ ಮನೆಯಲ್ಲೇ ಅತ್ಯಂತ ಪ್ರಿಯವಾದ ಜಾಗವೆಂದರೆ ಅದು ಕಿಚನ್. ಸಂಪೂರ್ಣ ಕಪ್ಪು ಮತ್ತು ಗ್ರೇ ಬಣ್ಣದ ಥೀಮ್‌ನಲ್ಲಿ ಸಿದ್ಧವಾಗಿರುವ ಈ ಮಾಡರ್ನ್ ಕಿಚನ್‌ನಲ್ಲಿ ಅಡುಗೆ ಮಾಡುವಾಗ ಮುಂಬೈ ನಗರದ ಸುಂದರ ನೋಟವನ್ನು ಸವಿಯಲು ಅನುಕೂಲವಾಗುವಂತೆ ನೆಲದಿಂದ ಸೀಲಿಂಗ್‌ವರೆಗೆ ದೊಡ್ಡ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ. ಅಡುಗೆ ತಯಾರಿಕೆಯನ್ನು ಸುಲಭಗೊಳಿಸಲು ಮಧ್ಯದಲ್ಲಿ ಸ್ಟವ್ ಮತ್ತು ಚಿಮಣಿ ಇರುವ ಪ್ಯಾರಲಲ್ ಕೌಂಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಮಾಧುರಿ ದೀಕ್ಷಿತ್ ದಂಪತಿಯ ಆಲೋಚನೆಗೆ ತಕ್ಕಂತೆ ಈ ಕನಸಿನ ಅರಮನೆಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸೈನರ್ಸ್ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BIG NEWS: ಇನ್ನು ಎಲ್ಲ ಬಾರ್, ಪಬ್‌, ಕ್ಲಬ್‌, ರೆಸ್ಟೋರೆಂಟ್ ಪ್ರವೇಶಕ್ಕೆ ವಯಸ್ಸಿನ ಪುರಾವೆ ಕಡ್ಡಾಯ: ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧBREAKING: ಉಜ್ವಲ ಯೋಜನೆ ಫಲಾನುಭವಿಗಳಿಗೆ ಶಾಕಿಂಗ್ ನ್ಯೂಸ್: ಸಬ್ಸಿಡಿ LPG ಸಿಲಿಂಡರ್‌ ವರ್ಷಕ್ಕೆ 9 ರಿಂದ 4ಕ್ಕೆ ಇಳಿಕೆವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ: ಕಾದ ಕಬ್ಬಿಣ ಸೋರಿಕೆಯಾಗಿ 8 ಕಾರ್ಮಿಕರು ಸಾವು: ಪ್ರಧಾನಿ ಮೋದಿ ಪರಿಹಾರ ಘೋಷಣೆಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ದಾಳಿಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಬರಲಿದೆ ಸ್ಮಾರ್ಟ್ ಕಾರ್ಡ್BREAKING: ನೀರಿನ ಟ್ಯಾಂಕ್ ನಲ್ಲಿ ಮುಳುಗಿ 18 ತಿಂಗಳ ಮಗು ಸಾವು: ಉಪ್ಪಿನಲ್ಲಿ ಮಗುವಿನ ಮೃತದೇಹವಿಟ್ಟು ಕಿವಿಯ ಬಳಿ ಮೊಬೈನ್ ನಲ್ಲಿ ಕುರಾನ್ ಹಾಡು ಹಾಕಿದ ಪೋಷಕರುಮುಡಾ ಹೂಡಿಕೆ ವಿವಾದ :ಮಾಜಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧದ ಅರ್ಜಿ ವಿಚಾರಣೆ ಜುಲೈ 3ಕ್ಕೆ ಮುಂದೂಡಿದ ಹೈಕೋರ್ಟ್ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪತಿಗೆ ಜೈಲು ಶಿಕ್ಷೆ, ದಂಡಏಯ್ ಯಾವ್ ಡಿ ಬಾಸೂ ಇಲ್ಲ ಸುಮ್ನೆ ಇರಿ, ಪೊಲೀಸರಿಂದ ಲಾಠಿ ಏಟೇ; ದರ್ಶನ್ ರಿಲೀಸ್ ಮಾಡಿಸಿ ಎಂದ ಫ್ಯಾನ್ಸ್‌ಗೆ ಸಿಎಂ ಡಿಕೆಯಿಂದ ಭಾರೀ ಅವಮಾನ!