ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಯಾತ್ರಾ ಸ್ಥಳವೆಂದರೆ ಅದು ಕೇರಳಂನ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಶಿವನ ದೇವಸ್ಥಾನ.
ಎರಡು ವರ್ಷಗಳ ಮುಂಚ ಇಂತಹ ಜಾಗವೊಂದಿದೆ ಎಂಬ ಮಾಹಿತಿಯೂ ಇರದಿದ್ದ ಸಾವಿರಾರು ಮಂದಿ ಸದ್ಯ ಈ ದೇವಾಲಯದತ್ತ ಮುಖ ಮಾಡುತ್ತಿದ್ದಾರೆ. ಚಾಮರಾಜನಗರ ಹಾಗೂ ಮೈಸೂರು ನಗರಗಳಿಂದ ಸುಮಾರು ನಾಲ್ಕು ಗಂಟೆಗಳ ತಡೆರಹಿತ ಪ್ರಯಾಣದ ಅಂತರದಲ್ಲಿರುವ ಈ ದೇವಾಲಯಕ್ಕೆ ತನ್ನದೇ ಆತ ಆಳವಾದ ಇತಿಹಾಸವಿದೆ.
ವರ್ಷಕ್ಕೆ ಒಂದು ತಿಂಗಳು ಮಾತ್ರ ತೆರೆಯುವ ಈ ದೇವಸ್ಥಾನಕ್ಕೆ ಸ್ಥಳೀಯರು ಆಗಮಿಸಿ ಅವರ ಆಚರಣೆ ಪ್ರಕಾರ ಪೂನೆ ಸಲ್ಲಿಸುವುದು ವಾಡಿಕೆ. ಇನ್ನು ಹಿಂದೆಲ್ಲ ಕೇವಲ ಸ್ಥಳೀಯ ಜನರ ಆರಾಧ್ಯ ತಾಣವಾಗಿದ್ದ ಈ ಜಾಗ ಸದ್ಯ ಕಳೆದ ವರ್ಷದಿಂದ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.
ಹೌದು, ಈ ಹಿಂದೆ ಕೊಟ್ಟಿಯೂರು ಶಿವನ ದೇವಾಲಯಕ್ಕೆ ಜನರೇನು ದೊಡ್ಡ ಮಟ್ಟದಲ್ಲಿ ಭೇಟಿ ನೀಡುತ್ತಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ದೇವಾಲಯದ ಕುರಿತು ವಿಡಿಯೊಗಳು ಹೆಚ್ಚಾಗಿ ಹರಿದಾಡಿದ ಕಾರಣ ಸದ್ಯ ಈ ವರ್ಷ ಜನರ ಸಾಗರವೇ ದೇವಾಲಯಕ್ಕೆ ಹರಿದು ಬಂದಿದೆ.
ಪರಿಣಾಮ ದೇವಾಲಯದ ಬಳಿ ಜನಸ್ತೋಮ ನೆರೆದು ಇಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ. ಅಪಾರ ಸಂಖ್ಯೆಯ ಜನರು ಭೇಟಿ ನೀಡಬಹುದಾದ ತಾಣವಲ್ಲದ ಈ ದೇವಾಲಯದಲ್ಲಿ ಸದ್ಯ ಜನ ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಅದರಲ್ಲೂ ಕರ್ನಾಟಕ ಮೂಲದ ಪ್ರವಾಸಿಗರಿಗೆ ಅಲ್ಲಿನ ಸಿಬ್ಬಂದಿ ಮರ್ಯಾದೆ ಕೊಡುತ್ತಿಲ್ಲ, ಅವಮಾನ ಮಾಡುತ್ತಿದ್ದಾರೆ, ಮಹಿಳೆಯರ ಮೇಲೆ ಪುಂಡಾಟ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಸಾವಿರ ರೂ ಟಿಕೆಟ್ಗೆ ಪಾವತಿ ಮಾಡಿಸಿಕೊಳ್ಳುತ್ತಾರೆ, ಆದರೆ ಯಾವುದೇ ಭದ್ರತೆ ಇಲ್ಲ ಎಂದು ಹಲವಾರು ಮಂದಿ ವಿಡಿಯೊ ಮಾಡಿ ಹಂಚಿಕೊಂಡಿದ್ದಾರೆ.
ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ಸಹ ವ್ಯಕ್ತವಾಗಿದ್ದು, ತಪ್ಪು ಯಾರದ್ದು, ಅಷ್ಟು ಜನ ಒಟ್ಟಿಗೆ ಹೋಗುವ ಅವರ್ಶಯಕತೆ ಏನಿತ್ತು ಎಂದೂ ಸಹ ಕಾಮೆಂಟ್ ಬರತೊಡಗಿವೆ. ಈ ನಡುವೆ ಈ ಜಾಗಕ್ಕೆ ಕರ್ನಾಟಕದ ಮಂದಿ ಏಕಾಏಕಿ ಇಷ್ಟು ಜನ ಬರಲು ಕಾರಣವೇನು ಎಂಬುದೂ ಸಹ ಚರ್ಚೆಯಾಗುತ್ತಿದೆ. ಇದಕ್ಕೆ ಅನೇಕ ದರ್ಶನ್ ಅಭಿಮಾನಿಗಳು ಕಳೆದ ವರ್ಷ ದೇವಾಲಯ ತೆರೆದಾಗ ತಮ್ಮ ನೆಚ್ಚಿನ ನಟ ದರ್ಶನ್ ಭೇಟಿ ನೀಡಿದ್ದರು. ಈ ವಿಡಿಯೊ ವೈರಲ್ ಆದ ಬಳಿಕ ಕರ್ನಾಟಕ ಜನತೆ ಈ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದರು ಎಂದು ಹಳೆಯ ವಿಡಿಯೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
