LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೊಟ್ಟಿಯೂರಿಗೆ ಹೋದಮೇಲೆ ದರ್ಶನ್ ಜೀವನ ಹಾಳಾಗಿ ಜೈಲು ಸೇರಿದರು, ನಿಮ್ಮ ಜೀವನವನ್ನೂ ಹಾಳುಮಾಡಿಕೊಳ್ಳಬೇಡಿ; ಕೊಟ್ಟಿಯೂರಿಗೆ ತೆರಳುವ ಕನ್ನಡಿಗರಿಗೆ ನೆಟ್ಟಿಗನ ಬುದ್ದಿವಾದ!

ಸಾಮಾಜಿಕ ಜಾಲತಾಣದಲ್ಲಿ ಸದ್ಯ ಕೊಟ್ಟಿಯೂರು ಕುರಿತ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಕಳೆದ ವರ್ಷಕ್ಕೂ ಮುನ್ನ ಇಂತಹದ್ದೊಂದು ದೇವಸ್ಥಾನವಿದೆ ಎಂಬುದರ ಅರಿವೂ ಸಹ ಇಲ್ಲದ ಜನರು ಕಳೆದ ವರ್ಷ ಈ ಜಾಗದ ಕುರಿತು ವೈರಲ್ ಆದ ರೀಲ್‌ಗಳನ್ನು ಕಂಡು ಭಾರೀ ದೊಡ್ಡ ಮಟ್ಟದಲ್ಲಿ ಭೇಟಿ ನೀಡಲು ಆರಂಭಿಸಿದ್ದಾರೆ.

ದೇವಾಲಯದ ಸುತ್ತ ನೀರು, ಆ ನೀರನ್ನೇ ದಾಟಿ ದರ್ಶನ ಪಡೆಯುವ ವಿಡಿಯೊವನ್ನು ಕಂಡ ಜನರು ಇದೊಂಥರ ವಿಭಿನ್ನವಾಗಿದೆಯಲ್ಲ ಎಂಬ ಕಾರಣಕ್ಕೆ ಮನಸೋತು ದೇವಾಲಯದ ಕಡೆ ಮುಖ ಮಾಡಲು ಶುರು ಮಾಡಿದರು.

ಅಲ್ಲದೇ ಈ ದೇವಸ್ಥಾನಕ್ಕೆ ಬರುವವರು ನಾಗರಹೊಳೆ ಅಥವಾ ಬಂಡೀಪುರ ಕಾಡಿನ ಮೂಲಕ ಕರ್ನಾಟಕ – ಕೇರಳ ಗಡಿ ದಾಟಿ ಕೇರಳಕ್ಕೆ ಪ್ರವೇಶ ಪಡೆದುಕೊಳ್ಳಬೇಕಿದ್ದು, ಸಾಗುವ ಹಾದಿ ಸಹ ಕಣ್ಣಿಗೆ ಹಬ್ಬ ಎಂದು ಹೇಳಬಹುದು. ಹೀಗೆ ಹೋಗುವ ಜಾಗ, ಹೋಗುವ ಹಾದಿ ಎಲ್ಲವೂ ಚೆನ್ನಾಗಿದೆ ಎಂಬ ಕಾರಣಕ್ಕೆ ವೈರಲ್ ಆದ ಈ ಜಾಗಕ್ಕೆ ಮೈಸೂರು ಹಾಗೂ ಚಾಮರಾಜನಗರದಿಂದ ನಾಲ್ಕು ಗಂಟೆಗಳಲ್ಲಿ ತಲುಪಿಬಿಡಬಹುದು ಎಂದು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ತೆರಳತೊಡಗಿದರು.

ಸದ್ಯ ಕಳೆದ ವರ್ಷದ ಹಾಗೆ ಈ ವರ್ಷವೂ ಸಹ ಒಂದು ತಿಂಗಳ ಕಾಲ ಈ ದೇವಾಲಯ ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲ್ಪಟ್ಟಿದ್ದು, ಕಳೆದ ವರ್ಷದ ಹಾಗೆರ ಈ ವರ್ಷವೂ ಸಹ ದೊಡ್ಡ ಸಂಖ್ಯೆಯಲ್ಲಿ ರಾಜ್ಯದ ಜನರು ಅಲ್ಲಿಗೆ ತೆರಳಿದ್ದಾರೆ. ಅಲ್ಲದೇ ದೇವಾಲಯದ ಸಿಬ್ಬಂದಿ ವಿರುದ್ಧ ತಮ್ಮ ಜತೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ, ಸಾವಿರ ರೂ ಕೊಟ್ಟು ಟಿಕೆಟ್ ಪಡೆದು ತೆರಳಿದರೂ ಸರಿಯಾದ ವ್ಯವಸ್ಥೆ ಇಲ್ಲ, ಮಹಿಳೆಯರ ಜತೆ ಸರಿಯಾಗಿ ನಡೆದುಕೊಳ್ಳದೇ ದರ್ಪ ತೋರುತ್ತಾರೆ ಎಂದು ಕನ್ನಡಿಗರು ಕಿಡಿಕಾರಿದ್ದಾರೆ.

ಇದಕ್ಕೆ ಕೇರಳಿಗರು ಇಲ್ಲಿಗೆ ಬಂದ ಮೇಲೆ ಇಲ್ಲಿನ ನಿಯಮಗಳನ್ನು ಪಾಲಿಸಿ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು, ಕ್ಯೂ ಪಾಲಿಸದಿರುವುದು, ಮನ ಬಂದಂತೆ ಕಿರುಚುವುದು ಮಾಡುತ್ತೀರ ಎಂದು ಕೌಂಟರ್ ಕೊಟ್ಟಿದ್ದಾರೆ. ಅಲ್ಲದೇ ನಿಮ್ಮ ದೇವಾಲಯಗಳನ್ನು ಬಿಟ್ಟು ಇತಿಹಾಸವಿರುವ ನಮ್ಮ ಕಾಡಿನ ದೇವಾಲಯಕ್ಕೆ ಬನ್ನಿ ಎಂದು ನಿಮಗೆ ಹೇಳಿದ್ದು ಯಾರು, ಒಟ್ಟಿಗೆ ಇಷ್ಟು ಜನ ಬಂದರೆ ಹೇಗೆ ಸರಿಯಾದ ವ್ಯವಸ್ಥೆ ಮಾಡಲಾಗುತ್ತದೆ ಎಂದೂ ಸಹ ಕಿಡಿಕಾರಿದ್ದಾರೆ.

ಇದೇ ಸಮಯಕ್ಕೆ ಸರಿಯಾಗಿ ದರ್ಶನ್ ಅಭಿಮಾನಿಗಳು ‘ಪವರ್‌ಫುಲ್ ಪೀಪಲ್ ಮೇಕ್ಸ್ ಪ್ಲೇಸಸ್ ಪವರ್‌ಫುಲ್’ ಎಂದು ಸ್ವಾಗ್ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಕಳೆದ ವರ್ಷ ಜೂನ್ ತಿಂಗಳಲ್ಲಿ ದರ್ಶನ್ ಭೇಟಿ ನೀಡಿದ್ದಕ್ಕೆ ಈ ತಾಣ ಇಷ್ಟು ಖ್ಯಾತಿ ಪಡೆಯಿತು ಎಂದಿದ್ದಾರೆ.

ಹೀಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಈ ಕುರಿತು ಹಲವಾರು ಮಂದಿ ಪ್ರತಿಕ್ರಿಯಿಸಿ ನಮ್ಮ ರಾಜ್ಯದಲ್ಲೇ ಹಲವಾರು ಶಿವನ ದೇವಾಲಯಗಳಿವೆ, ಕೊಟ್ಟಿಯೂರಿಗೆ ಹೋಗಬೇಕು ಎನ್ನುವ ನಿಯಮವಿಲ್ಲ, ಅಲ್ಲಿಗೆ ಹೋಗಿ ಮರ್ಯಾದೆ ಇಲ್ಲ ಎಂದು ಅಳುವ ಬದಲು ರಾಜ್ಯದಲ್ಲೇ ಇರುವ ದೇವಾಲಯಗಳಿಗೆ ಭೇಟಿ ನೀಡಿ ಎಂದು ಬುದ್ದಿವಾದ ಹೇಳಿದ್ದಾರೆ. ಹಾಗೆಯೇ ದರ್ಶನ್ ಹೋಗಿದ್ದ ದೇವಸ್ಥಾನ ಎಂಬ ಕಾರಣಕ್ಕೆ ತೆರಳುತ್ತಿರುವವರ ಕುರಿತು ಮಿಸ್ಟರ್ ಐಜಿ ಎಂಬ ಎಕ್ಸ್ ಬಳಕೆದಾರ ಟ್ವೀಟ್ ಮಾಡಿದ್ದು, ‘ದುರಾದೃಷ್ಟವಷಾತ್ ಇಲ್ಲಿಗೆ ಭೇಟಿ ನೀಡಿದ ಬಳಿಕ ದರ್ಶನ್ ಜೀವನವೇನೂ ಸರಿಯಾಗಲಿಲ್ಲ. ಬೇಲ್ ಮೇಲೆ ಹೊರಗಿದ್ದ ದರ್ಶನ್ ಮತ್ತೆ ಜೈಲುಪಾಲಾದರು. ಅಷ್ಟು ಗುಂಪಿರುವ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಜೀವವನ್ನು ರಿಸ್ಕ್ ಮಾಡಿಕೊಳ್ಳಬೇಡಿ. ನಿಮ್ಮ ರಾಜ್ಯದಲ್ಲಿರುವ ದೇವಾಲಯಗಳಿಗೆ ಹೋಗಿ, ನಿಮ್ಮ ಮನೆ ದೇವರಿಗೆ ಹೋಗಿ. ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುವ ದೇವಾಲಯಗಳಿಗೆ ಹೋಗುವುದನ್ನು ನಿಲ್ಲಿಸಿ’ ಎಂದು ಬರೆದುಕೊಂಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಆಡಳಿತ ಯಂತ್ರಕ್ಕೆ ಮತ್ತಷ್ಟು ವೇಗ ನೀಡಿದ ಡಿ.ಕೆ. ಶಿವಕುಮಾರ್: ಮುಖ್ಯಮಂತ್ರಿಯಾದ ಒಂದೇ ವಾರಕ್ಕೆ ಮಹತ್ವದ ಸಭೆರಸ್ತೆಯಲ್ಲಿ ಉಗುಳಬೇಡಿ ಎಂದು ಹೇಳಿದ ವೃದ್ಧನ ಮೇಲೆ ಕ್ಯಾಬ್ ಚಾಲಕನಿಂದ ಅಮಾನುಷ ಹಲ್ಲೆ | VIDEOಎರಡೂವರೆ ತಿಂಗಳಲ್ಲಿ ರಾಷ್ಟ್ರೀಯ ಗ್ರಿಡ್‌ಗೆ 423 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಮಾರಾಟ; ಕೆಜೆ ಜಾರ್ಜ್ ಮಾಹಿತಿ44ನೇ ವಯಸ್ಸಿನಲ್ಲಿ 193 ಕಿ.ಮೀ/ಗಂ ವೇಗ: ಸೆರೆನಾ ವಿಲಿಯಮ್ಸ್‌ನ ಟೆನಿಸ್ ಪುನರಾಗಮನ ಎಲ್ಲರನ್ನೂ ನಿಬ್ಬೆರಗಾಗಿಸಿತು140 ಕೋಟಿ ಭಾರತೀಯರ ಆಕಾಂಕ್ಷೆಗಳು ಖಂಡಿತ ಈಡೇರುತ್ತವೆ: NDA ಸಮಾವೇಶದಲ್ಲಿ ಪ್ರಧಾನಿ ಮೋದಿBREAKING: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ, ಅರ್ಹ ಫಲಾನುಭವಿಗಳಿಗೆ ಹಣ: ಸಿಎಂ ಡಿ.ಕೆ. ಶಿವಕುಮಾರ್5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಕಡ್ಡಾಯ ಲಸಿಕೆ ಹಾಕಿಸಲು ಜೂ. 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕೆಐಎಡಿಬಿಯಲ್ಲಿ ಮಹತ್ವದ ಬದಲಾವಣೆ: ಭೂಸ್ವಾಧೀನದಿಂದ ಇ-ಖಾತಾವರೆಗೆ ಎಲ್ಲವೂ ಡಿಜಿಟಲ್!ಉಡುಪಿ ಕೃಷ್ಣ ಮಠದ ಬಳಿ ತೆಲಂಗಾಣ ಕುಟುಂಬದ ಮೇಲೆ ಹಲ್ಲೆ: ಆರೋಪಿ ಅರೆಸ್ಟ್ಒಂದು ಕಾಲದಲ್ಲಿ ನಾನು ಮೋದಿಯನ್ನು ಕಟುವಾಗಿ ಟೀಕಿಸಿದ್ದೆ; ಪತ್ರಿಕಾಗೋಷ್ಟಿಯಲ್ಲಿ ದೇವೇಗೌಡ ಓಪನ್ ಟಾಕ್