LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮನೆಯಲ್ಲಿ ‘ರೈಲು ಟಿಕೆಟ್’ ಮರೆತರೂ ನೀವು ಪ್ರಯಾಣ ಮಾಡಬಹುದು..! ಭಾರತೀಯ ರೈಲ್ವೆಯ ಈ ನಿಯಮ ತಿಳಿಯಿರಿ


ರೈಲು ಪ್ರಯಾಣಕ್ಕೆ ರಿಸರ್ವ್ ಟಿಕೆಟ್ ಮಾಡಿಕೊಂಡು ಅದನ್ನು ಮನೆಯಲ್ಲಿ ಮರೆತು ಬಂದಿದ್ದೀರಾ? ಹಾಗಿದ್ದರೂ ಆತಂಕಪಡಬೇಕಿಲ್ಲ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ರಿಸರ್ವೇಶನ್ ಕೌಂಟರ್ನಲ್ಲಿ ಪಡೆದ ಫಿಸಿಕಲ್ ಟಿಕೆಟ್ ಹೊಂದಿರುವ ಪ್ರಯಾಣಿಕರು ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಿದರೆ ಯಾವುದೇ ದಂಡವಿಲ್ಲದೆ ತಮ್ಮ ಪ್ರಯಾಣವನ್ನು ಮುಂದುವರಿಸಬಹುದು. ಆದರೆ ಈ ಸೌಲಭ್ಯ ಆನ್ಲೈನ್ನಲ್ಲಿ ಬುಕ್ ಮಾಡಿದ ಇ-ಟಿಕೆಟ್ಗಳಿಗೆ ಅನ್ವಯಿಸುವುದಿಲ್ಲ.

ಹೌದು. ರೈಲು ಪ್ರಯಾಣಕ್ಕಾಗಿ ಮುಂಗಡ ಕಾಯ್ದಿರಿಸಿದ (ರಿಸರ್ವ್) ಟಿಕೆಟ್ ಅನ್ನು ನೀವು ಮನೆಯಲ್ಲೇ ಮರೆತಿದ್ದರೂ ಆತಂಕಪಡಬೇಕಿಲ್ಲ. ಭಾರತೀಯ ರೈಲ್ವೆಯ ನಿಯಮಗಳ ಪ್ರಕಾರ, ನಿರ್ದಿಷ್ಟ ಪ್ರಕ್ರಿಯೆಯನ್ನು ಅನುಸರಿಸಿದರೆ ಟಿಕೆಟ್ ಇಲ್ಲದೆಯೇ ನಿಮ್ಮ ಪ್ರಯಾಣವನ್ನು ಮುಂದುವರಿಸಬಹುದು.
ರೈಲು ನಿಲ್ದಾಣದ ರಿಸರ್ವೇಶನ್ ಕೌಂಟರ್ನಲ್ಲಿ ಫಿಸಿಕಲ್ (ಮುದ್ರಿತ) ಟಿಕೆಟ್ ಖರೀದಿಸಿ, ಅದನ್ನು ಮನೆಯಲ್ಲಿ ಮರೆತು ರೈಲು ಹತ್ತಿದ್ದರೆ, ಟಿಕೆಟ್ ಇಲ್ಲದೆ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ರೈಲ್ವೆಯ ನಿಯಮಗಳ ಪ್ರಕಾರ, ಕೆಲವು ಕ್ರಮಗಳನ್ನು ಅನುಸರಿಸಿದರೆ ಯಾವುದೇ ತೊಂದರೆಯಿಲ್ಲದೆ ಪ್ರಯಾಣಿಸಬಹುದು.

ಟಿಕೆಟ್ ಮರೆತರೆ ಏನು ಮಾಡಬೇಕು?
• ರೈಲಿನಲ್ಲಿ ಇರುವ TTE (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಅವರಿಗೆ ತಕ್ಷಣವೇ ಮಾಹಿತಿ ನೀಡಿ.
• ನಿಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ಮೂಲ ಟಿಕೆಟ್ ಅನ್ನು ನಿಮ್ಮ ಬೋರ್ಡಿಂಗ್ ಸ್ಟೇಷನ್ನ ಸ್ಟೇಷನ್ ಮಾಸ್ಟರ್ ಅವರಿಗೆ ಒಪ್ಪಿಸುವಂತೆ ತಿಳಿಸಿ.
• ಸ್ಟೇಷನ್ ಮಾಸ್ಟರ್ ಟಿಕೆಟ್ ಪರಿಶೀಲಿಸಿ, ಅಧಿಕೃತ ಸಂದೇಶದ ಮೂಲಕ ಮುಂದಿನ ನಿಲ್ದಾಣದ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ಕಳುಹಿಸುತ್ತಾರೆ.
• ಬಳಿಕ ರೈಲಿನಲ್ಲಿರುವ ಅಧಿಕಾರಿಗಳು ನಿಮ್ಮ ಟಿಕೆಟ್ ಅನ್ನು ದೃಢೀಕರಿಸುತ್ತಾರೆ. ಇದರಿಂದ TTE ಟಿಕೆಟ್ ಕೇಳಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ ಮತ್ತು ನೀವು ಸುಗಮವಾಗಿ ಪ್ರಯಾಣಿಸಬಹುದು.

ಈ ನಿಯಮ ಯಾರಿಗೆ ಅನ್ವಯಿಸುತ್ತದೆ?
ಈ ಸೌಲಭ್ಯ ರೈಲ್ವೆ ರಿಸರ್ವೇಶನ್ ಕೌಂಟರ್ನಿಂದ ಖರೀದಿಸಿದ ಆಫ್ಲೈನ್ (ಫಿಸಿಕಲ್) ರಿಸರ್ವ್ಡ್ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅನ್ವಯಿಸುತ್ತದೆ.
ಆದರೆ IRCTC ವೆಬ್ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಬುಕ್ ಮಾಡಿದ ಇ-ಟಿಕೆಟ್ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ, ಏಕೆಂದರೆ ಇ-ಟಿಕೆಟ್ ವಿವರಗಳನ್ನು ಡಿಜಿಟಲ್ ರೂಪದಲ್ಲೇ ಪರಿಶೀಲಿಸಬಹುದು.

ಹೀಗಾಗಿ, ರೈಲು ಟಿಕೆಟ್ ಅನ್ನು ಮನೆಯಲ್ಲಿ ಮರೆತಿದ್ದರೂ ಗಾಬರಿಯಾಗುವ ಅಗತ್ಯವಿಲ್ಲ. ನೀವು ರಿಸರ್ವೇಶನ್ ಕೌಂಟರ್ನಿಂದ ಪಡೆದ ಫಿಸಿಕಲ್ ಟಿಕೆಟ್ ಹೊಂದಿದ್ದರೆ, ತಕ್ಷಣವೇ TTEಗೆ ಮಾಹಿತಿ ನೀಡಿ ಹಾಗೂ ಕುಟುಂಬದ ಸದಸ್ಯರ ಮೂಲಕ ಟಿಕೆಟ್ ಅನ್ನು ಸ್ಟೇಷನ್ ಮಾಸ್ಟರ್ಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಯಾವುದೇ ತೊಂದರೆಯಿಲ್ಲದೆ ಪ್ರಯಾಣ ಮುಂದುವರಿಸಬಹುದು. ಆದರೆ ಈ ನಿಯಮವು IRCTC ಮೂಲಕ ಬುಕ್ ಮಾಡಿದ ಇ-ಟಿಕೆಟ್ಗಳಿಗೆ ಅನ್ವಯಿಸುವುದಿಲ್ಲ ಎಂಬುದನ್ನು ಪ್ರಯಾಣಿಕರು ಗಮನದಲ್ಲಿಟ್ಟುಕೊಳ್ಳಬೇಕು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ