LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮದುವೆಯಾದ ಮಗಳಿಗೂ ಪೋಷಕರ ಆಸ್ತಿಯಲ್ಲಿ ಪಾಲಿದೆಯೇ ? ಈ ನಿಯಮ ಪ್ರತಿಯೊಬ್ಬರೂ ತಿಳಿಯಲೇಬೇಕು!

ಆಸ್ತಿ ಹಂಚಿಕೆ ವಿಚಾರದಲ್ಲಿ ಕುಟುಂಬದ ಸದಸ್ಯರ ನಡುವೆ ವಿವಾದಗಳು ನಡೆಯುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆಸ್ತಿಗಾಗಿ ವರ್ಷಗಟ್ಟಲೆ ನ್ಯಾಯಾಲಯದ ಮೆಟ್ಟಿಲೇರುವವರೂ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ಕಾನೂನಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಎಂದು ಹೇಳಬಹುದು.

ಭಾರತೀಯ ಕಾನೂನಿನ ಪ್ರಕಾರ, ಪೋಷಕರ ಆಸ್ತಿಯಲ್ಲಿ ಪುರುಷರಿಗೆ ಇರುವಷ್ಟೇ ಹಕ್ಕು ಮಹಿಳೆಯರಿಗೂ ಇದೆ. ಆದರೆ ಕೆಲವೊಮ್ಮೆ ಪೋಷಕರು ಮಗನಿಗೆ ಹೆಚ್ಚಿನ ಆಸ್ತಿ ನೀಡುವುದರಿಂದ ಕುಟುಂಬದಲ್ಲಿ ವಿವಾದಗಳು ಉಂಟಾಗುತ್ತವೆ. ಪೋಷಕರು ತಮ್ಮ ಸಂಪೂರ್ಣ ಆಸ್ತಿಯನ್ನು ಮಗನ ಹೆಸರಿಗೆ ಬರೆದರೆ ಮಗಳಿಗೆ ಪಾಲು ಸಿಗುತ್ತದೆಯೇ? ಮದುವೆಯಾದ ನಂತರವೂ ಮಗಳು ತನ್ನ ಪಾಲನ್ನು ಕೇಳಬಹುದೇ? ಪಿತ್ರಾರ್ಜಿತ ಆಸ್ತಿಯಲ್ಲೂ ಮಗಳಿಗೆ ಸಮಾನ ಹಕ್ಕು ಇದೆಯೇ? ಎಂಬುದು ಹಲವರಿಗೆ ತಿಳಿದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಆಸ್ತಿಯನ್ನು ಯಾರಿಗಾದರೂ ನೀಡಬಹುದು

ಪೂರ್ವಜರಿಂದ ಬಂದ ಆಸ್ತಿಯ ಬದಲಿಗೆ, ಪೋಷಕರು ತಮ್ಮ ಸ್ವಂತ ದುಡಿಮೆಯಿಂದ ಸಂಪಾದಿಸಿರುವ ಆಸ್ತಿಯನ್ನು ತಮ್ಮ ಇಚ್ಛೆಯಂತೆ ಯಾರಿಗಾದರೂ ನೀಡಬಹುದು. ಅದು ಅವರ ಸ್ವಯಾರ್ಜಿತ ಆಸ್ತಿಯಾಗಿರುವುದರಿಂದ ಅದರ ಮೇಲೆ ಪೋಷಕರಿಗೆ ಸಂಪೂರ್ಣ ಹಕ್ಕು ಇರುತ್ತದೆ. ಹೀಗಾಗಿ ಅವರು ತಮ್ಮ ಆಸ್ತಿಯನ್ನು ತಮಗೆ ಇಷ್ಟವಾದ ವ್ಯಕ್ತಿಗೆ ನೀಡಬಹುದು.

ಪೋಷಕರು ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಕೇವಲ ಮಗನಿಗೆ ನೀಡಲು ಬಯಸಿದರೆ, ಸಾಮಾನ್ಯವಾಗಿ ಮಗಳಿಗೆ ಅದರ ಮೇಲೆ ಸ್ವತಂತ್ರವಾಗಿ ಪಾಲು ಕೇಳುವ ಹಕ್ಕು ಇರುವುದಿಲ್ಲ. ಪೋಷಕರು ಗಿಫ್ಟ್ ಡೀಡ್ ಅಥವಾ ವಿಲ್ (ವೀಲುನಾಮೆ) ಮೂಲಕ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಸಂಪೂರ್ಣವಾಗಿ ಮಗನಿಗೆ ನೀಡಬಹುದು.

ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು

ಪೋಷಕರಿಗೆ ಸ್ವಂತ ದುಡಿಮೆಯಿಂದ ಬಂದ ಆಸ್ತಿಯಲ್ಲ, ಬದಲಾಗಿ ಪೂರ್ವಜರಿಂದ ಬಂದ ಪಿತ್ರಾರ್ಜಿತ ಆಸ್ತಿ ಇದ್ದರೆ ನಿಯಮಗಳು ವಿಭಿನ್ನವಾಗಿರುತ್ತವೆ. ಇಂತಹ ಆಸ್ತಿಯಲ್ಲಿ ಮಗನಂತೆ ಮಗಳಿಗೂ ಸಮಾನ ಹಕ್ಕು ಇರುತ್ತದೆ.

ಮಗಳಿಗೆ ಮದುವೆಯಾಗಿದ್ದರೂ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಆಕೆಯ ಹಕ್ಕು ಮುಂದುವರಿಯುತ್ತದೆ. ಪೋಷಕರು ಇಂತಹ ಆಸ್ತಿಯನ್ನು ಸಂಪೂರ್ಣವಾಗಿ ಮಗನ ಹೆಸರಿಗೆ ಬರೆದರೆ, ಮಗಳು ಕಾನೂನುಬದ್ಧವಾಗಿ ತನ್ನ ಹಕ್ಕಿಗಾಗಿ ನ್ಯಾಯಾಲಯವನ್ನು ಆಶ್ರಯಿಸಬಹುದು.

ಇನ್ನು ಪೋಷಕರು ತಮ್ಮ ಸ್ವಯಾರ್ಜಿತ ಆಸ್ತಿಗೆ ಯಾವುದೇ ವಿಲ್ ಬರೆಯದೆ ಮೃತಪಟ್ಟರೆ, ಅನ್ವಯಿಸುವ ವೈಯಕ್ತಿಕ ಉತ್ತರಾಧಿಕಾರ ಕಾನೂನಿನ ಪ್ರಕಾರ ಕಾನೂನುಬದ್ಧ ವಾರಸುದಾರರಿಗೆ ಆಸ್ತಿಯಲ್ಲಿ ಪಾಲು ದೊರೆಯಬಹುದು. ಹಿಂದೂ ಕುಟುಂಬಗಳಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯಿಸುವ ಸಂದರ್ಭಗಳಲ್ಲಿ, ಮಗಳು ಕೂಡ ಮಗನಂತೆ ಸಮಾನ ಹಕ್ಕು ಹೊಂದಿರುತ್ತಾಳೆ.

ಆಸ್ತಿ ಹಂಚಿಕೆ ಕುರಿತು ಯಾವುದೇ ವಿವಾದ ಉಂಟಾದರೆ, ಮಗಳು ಸೇರಿದಂತೆ ಕಾನೂನುಬದ್ಧ ವಾರಸುದಾರರು ಸಿವಿಲ್ ನ್ಯಾಯಾಲಯದ ಮೂಲಕ ತಮ್ಮ ಹಕ್ಕನ್ನು ಪಡೆಯಲು ಮುಂದಾಗಬಹುದು. ಆದ್ದರಿಂದ ಆಸ್ತಿ ಹಂಚಿಕೆ ಮಾಡುವ ಮೊದಲು ಸಂಬಂಧಿಸಿದ ಕಾನೂನು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ