LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರ್‌ಸಿಬಿ ತನ್ನನ್ನು ಖರೀದಿಸಿದಾಗ ಆಶ್ಚರ್ಯವಾಗಿತ್ತು: ಮೆಗಾ ಹರಾಜಿನ ರಹಸ್ಯ ಬಿಚ್ಚಿಟ್ಟ ಭುವನೇಶ್ವರ್ ಕುಮಾರ್

ಐಪಿಎಲ್ 2026ರ ಸರಣಿಯಲ್ಲಿ 28 ವಿಕೆಟ್ ಕಳೆದು ಆರ್‌ಸಿಬಿ ತಂಡವು ಸತತ ಎರಡನೇ ಬಾರಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್, 2025ರ ಮೆಗಾ ಹರಾಜಿನಲ್ಲಿ ಬೆಂಗಳೂರು ತಂಡ ತನಗೆ ಬಿಡ್ ಮಾಡಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಜಟಿನ್ ಸಪ್ರು ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಹರಾಜಿನ ವೇಳೆ ನಡೆದ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಹರಾಜಿನ ಮೊದಲ ದಿನ ಎಸ್ಆರ್‌ಎಚ್ ಕೋಚ್ ಡೇನಿಯಲ್ ವೆಟ್ಟೋರಿ ಕೆಲವು ತಂಡಗಳು ನಿಮಗಾಗಿ ಕಾಯುತ್ತಿವೆ ಎಂದು ಹೇಳಿದ್ದರು. ಎಸ್ಆರ್‌ಎಚ್ ಕೂಡ ನನ್ನನ್ನು ಉಳಿಸಿಕೊಳ್ಳಲು ಬಯಸಿತ್ತು ಆದರೆ ಬಜೆಟ್ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ ಎಂದು ಭುವನೇಶ್ವರ್ ತಿಳಿಸಿದ್ದಾರೆ. ಹರಾಜಿನ ಎರಡನೇ ದಿನ ಭುವನೇಶ್ವರ್ ಉತ್ತರ ಪ್ರದೇಶ ತಂಡದ ನಾಯಕರಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯದಲ್ಲಿ ಆಡುತ್ತಿದ್ದರು. ಗ್ರೌಂಡ್‌ಗೆ ಇಳಿಯುವ ಮುನ್ನ ವೀಡಿಯೊ ಅನಾಲಿಸ್ಟ್ ಮೊಬೈಲ್‌ನಲ್ಲಿ ಹರಾಜು ನೋಡಿದಾಗ ಮುಂಬೈ ಮತ್ತು ಲಕ್ನೋ ತಂಡಗಳು ಬಿಡ್ ಮಾಡಲು ಪ್ರಾರಂಭಿಸಿದ್ದವು. ಬಿಡ್ ಮೊತ್ತ 5 ರಿಂದ 6 ಕೋಟಿ ರೂಪಾಯಿ ತಲುಪಿದ್ದಾಗ ಪಂದ್ಯಕ್ಕಾಗಿ ಅವರು ಮೈದಾನಕ್ಕೆ ಹೋಗಬೇಕಾಯಿತು.

ಕೆಲವು ಓವರ್‌ಗಳ ನಂತರ ಆರ್‌ಸಿಬಿ ತಂಡವು 10.75 ಕೋಟಿ ರೂಪಾಯಿಗೆ ತನ್ನನ್ನು ಖರೀದಿಸಿದೆ ಎಂಬ ಸುದ್ದಿ ತಿಳಿಯಿತು. ಆರಂಭದಲ್ಲಿ ಬೇರೆ ತಂಡಗಳು ಬಿಡ್ ಮಾಡುತ್ತಿದ್ದರಿಂದ ಆರ್‌ಸಿಬಿ ತನ್ನನ್ನು ಆಯ್ಕೆ ಮಾಡಿದ್ದು ಸ್ವಲ್ಪ ಆಶ್ಚರ್ಯ ತಂದಿತ್ತು ಎಂದು ಅವರು ಹೇಳಿದ್ದಾರೆ. ಆದರೆ ಅಷ್ಟು ದೊಡ್ಡ ಅಭಿಮಾನಿ ಬಳಗವಿರುವ ತಂಡವನ್ನು ಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

17 ವರ್ಷಗಳಿಂದ ಟ್ರೋಫಿ ಗೆಲ್ಲದ ಆರ್‌ಸಿಬಿ ತಂಡವನ್ನು ಸೇರಿದಾಗ ಯಾವುದೇ ಒತ್ತಡವಿರಲಿಲ್ಲ ಎಂದು ತಿಳಿಸಿದ ಅವರು, ಗೆದ್ದರೆ ಸಂತೋಷ ಆದರೆ ಸೋತರೆ ಮುಂದಿನ ವರ್ಷ ಪ್ರಯತ್ನಿಸೋಣ ಎಂಬ ಹಗುರವಾದ ವಾತಾವರಣ ತಂಡದಲ್ಲಿತ್ತು ಎಂದಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ಆರ್‌ಸಿಬಿ ಪರ ಒಂದೇ ಪಂದ್ಯ ಆಡಿದ್ದ ಭುವನೇಶ್ವರ್, ಪುನಃ ತಂಡಕ್ಕೆ ಮರಳಿದ ನಂತರ 2025 ಮತ್ತು 2026ರ ಎರಡು ಸೀಸನ್‌ಗಳಲ್ಲಿ ಒಟ್ಟು 45 ವಿಕೆಟ್ ಪಡೆದು ತಂಡದ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಕರ್ನಾಟಕ 'SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ | Karnataka SSLC Examಮಂಗಳೂರಿನಲ್ಲಿಂದು ಐತಿಹಾಸಿಕ ಸಂಪುಟ ಸಭೆ: ಕರಾವಳಿ ಜನರ ಚಿತ್ತ ಸರ್ಕಾರದ ನಿರ್ಧಾರಗಳತ್ತಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಡಿಕೆಶಿ ಹೊಸ ಮಿಷನ್ : 50,000 ನಿವೇಶನ, ಕಲಬುರಗಿಯಲ್ಲಿ ಐಇ ಪಾರ್ಕ್.!