LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

OYO ಬ್ಯುಸಿನೆಸ್ ಸ್ಕೆಚ್ : ₹6,650 ಕೋಟಿ IPO ಗೆ ಸಜ್ಜು; ದೇಶಾದ್ಯಂತ ವ್ಯವಹಾರ ವಿಸ್ತರಣೆಗೆ ಮಹತ್ವದ ಹೆಜ್ಜೆ

ಆತಿಥ್ಯ (ಹಾಸ್ಪಿಟಾಲಿಟಿ) ಕ್ಷೇತ್ರದ ಪ್ರಮುಖ ಸಂಸ್ಥೆಯಾದ OYO ಮತ್ತೊಮ್ಮೆ ಸುದ್ದಿಯಲ್ಲಿದೆ. ಸಂಸ್ಥೆಯ ಮಾತೃ ಕಂಪನಿ ಒರಾವೆಲ್ ಸ್ಟೇಸ್ (ಪ್ರಿಜಮ್) ಈ ವರ್ಷ ಷೇರುಪೇಟೆಗೆ (IPO) ಪ್ರವೇಶಿಸಲು ಸಜ್ಜಾಗಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (SEBI) ಗೆ ನವೀಕರಿಸಿದ ಕರಡು ದಾಖಲೆಗಳನ್ನು ಸಲ್ಲಿಸಿದೆ.

ಕಂಪನಿ ₹6,650 ಕೋಟಿ ಮೌಲ್ಯದ ಹೊಸ ಇಕ್ವಿಟಿ ಷೇರುಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಮೂಲಕ ಬೃಹತ್ ಪ್ರಮಾಣದ ಬಂಡವಾಳ ಸಂಗ್ರಹಿಸಲು ಯೋಜಿಸಿದೆ. ಈ ಹಣವನ್ನು ಭವಿಷ್ಯದ ವ್ಯವಹಾರ ವಿಸ್ತರಣೆ, ಬೆಳವಣಿಗೆ ಯೋಜನೆಗಳು ಹಾಗೂ ಕಂಪನಿಯ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಲು ಬಳಸುವ ಉದ್ದೇಶ ಹೊಂದಿದೆ.

ಇತ್ತೀಚೆಗೆ ದೇಶೀಯ ಷೇರುಪೇಟೆಯಲ್ಲಿ ಹಲವು ದೊಡ್ಡ ಕಂಪನಿಗಳ ಐಪಿಒಗಳು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ OYO ಕೂಡ ಸಾರ್ವಜನಿಕ ಹೂಡಿಕೆದಾರರ ಮುಂದೆ ಬರಲು ನಿರ್ಧರಿಸಿದೆ.ಈ ಐಪಿಒಯ ವಿಶೇಷತೆ ಎಂದರೆ ಆಫರ್ ಫಾರ್ ಸೇಲ್ (OFS) ವ್ಯವಸ್ಥೆಯನ್ನು ಒಳಗೊಂಡಿಲ್ಲ. ಅಂದರೆ ಸಂಸ್ಥಾಪಕ ರಿತೇಶ್ ಅಗರ್ವಾಲ್, ಪ್ರಮುಖ ಹೂಡಿಕೆದಾರರಾದ ಸಾಫ್ಟ್‌ಬ್ಯಾಂಕ್, ಮೈಕ್ರೋಸಾಫ್ಟ್, ಏರ್‌ಬಿಎನ್‌ಬಿ, ಪೀಕ್ XV, ಲೈಟ್‌ಸ್ಪೀಡ್, ಗ್ರೀನ್‌ಓಕ್ಸ್ ಕ್ಯಾಪಿಟಲ್ ಸೇರಿದಂತೆ ಇತರ ಹೂಡಿಕೆದಾರರು ಈ ಹಂತದಲ್ಲಿ ತಮ್ಮ ಷೇರುಗಳನ್ನು ಮಾರಾಟ ಮಾಡುವುದಿಲ್ಲ.

ಐಪಿಒಗೂ ಮುನ್ನ ಕಂಪನಿ ಸುಮಾರು ₹1,330 ಕೋಟಿ ಪ್ರೀ-ಐಪಿಒ ಪ್ಲೇಸ್‌ಮೆಂಟ್ ಮೂಲಕ ಹೆಚ್ಚುವರಿ ಬಂಡವಾಳ ಸಂಗ್ರಹಿಸುವ ಯೋಜನೆಯನ್ನೂ ಹೊಂದಿದೆ. ಇದು ಯಶಸ್ವಿಯಾದರೆ ಸಾರ್ವಜನಿಕ ಐಪಿಒ ಮೂಲಕ ಸಂಗ್ರಹಿಸಬೇಕಾದ ಮೊತ್ತ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಐಪಿಒ ಮೂಲಕ ಸಂಗ್ರಹವಾಗುವ ಹಣದಲ್ಲಿ ಸುಮಾರು ₹4,987.50 ಕೋಟಿ ಮೊತ್ತವನ್ನು ಕಂಪನಿಯ ಸಾಲ ತೀರಿಸಲು ಬಳಸುವ ಯೋಜನೆ ಇದೆ. ಉಳಿದ ಹಣವನ್ನು ದೈನಂದಿನ ಕಾರ್ಯಾಚರಣೆ, ಸಾಮಾನ್ಯ ಕಾರ್ಪೊರೇಟ್ ಅಗತ್ಯಗಳು ಹಾಗೂ ಭವಿಷ್ಯದ ವ್ಯವಹಾರ ವಿಸ್ತರಣೆಗೆ ವಿನಿಯೋಗಿಸಲಾಗುತ್ತದೆ. ಇದರಿಂದ ಕಂಪನಿಯ ಮೇಲಿರುವ ಬಡ್ಡಿ ಹೊರೆ ಗಮನಾರ್ಹವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ