LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

‘PF ಹಣ’ ಹಿಂಪಡೆಯುವಿಕೆ ನಿಯಮ ಬದಲಾವಣೆ ; ಕೇಂದ್ರದಿಂದ ಕಠಿಣ ನಿರ್ಬಂಧ, ವರ್ಷಕ್ಕೆ 2 ಬಾರಿ ಮಾತ್ರ ಅವಕಾಶ.!

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (EPF) ಖಾತೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ. ಪಿಎಫ್ ಹಣದ ಭಾಗಶಃ ಹಿಂಪಡೆಯುವಿಕೆ (Partial Withdrawal) ಹಾಗೂ ಪಿಂಚಣಿ ಸಂಬಂಧಿತ ನಿಯಮಗಳನ್ನು ಪರಿಷ್ಕರಿಸಿ ಹೊಸ EPF Scheme-2026 ಅನ್ನು ಜಾರಿಗೆ ತಂದಿದೆ. 1952ರ ಹಳೆಯ EPF ಯೋಜನೆಯ ಬದಲಿಗೆ ಹೊಸ ಯೋಜನೆ ಜೂನ್ 29ರಿಂದ ಜಾರಿಗೆ ಬಂದಿದೆ.

ಹೊಸ ನಿಯಮಗಳ ಪ್ರಕಾರ, ಉದ್ಯೋಗದಲ್ಲಿರುವಾಗಲೇ ಪಿಎಫ್ ಖಾತೆಯಿಂದ ಭಾಗಶಃ ಹಣ ಹಿಂಪಡೆಯಲು ಕೆಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಪಿಎಫ್ ಖಾತೆಯಲ್ಲಿ ಕನಿಷ್ಠ 25% ಮೊತ್ತವನ್ನು ಕಡ್ಡಾಯವಾಗಿ ಉಳಿಸಬೇಕು. ಉಳಿದ ಹಣದಲ್ಲಿ ಮಾತ್ರ 50% ರಿಂದ 75% ವರೆಗೆ ಅಗತ್ಯಕ್ಕೆ ಅನುಗುಣವಾಗಿ ಹಣ ಹಿಂಪಡೆಯಲು ಅವಕಾಶ ನೀಡಲಾಗಿದೆ.

ವೈದ್ಯಕೀಯ ಚಿಕಿತ್ಸೆಗಾಗಿ ವಿಶೇಷ ಅವಕಾಶ

ಹೊಸ ನಿಯಮಗಳ ಪ್ರಕಾರ, 12 ತಿಂಗಳ ಸೇವೆ ಪೂರ್ಣಗೊಂಡ ನಂತರ, ಸ್ವಂತ ಅಥವಾ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ಅರ್ಹ ಬ್ಯಾಲೆನ್ಸ್‌ನ 100% ವರೆಗೆ ಹಣವನ್ನು ಹಿಂಪಡೆಯಬಹುದು. ಆದರೆ ಈ ಸೌಲಭ್ಯವನ್ನು ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಬಳಸಬಹುದು.

ಶಿಕ್ಷಣ, ಮದುವೆ ಹಾಗೂ ಮನೆ ಖರೀದಿಗೆ ನಿಯಮಗಳು

  • ಶಿಕ್ಷಣಕ್ಕಾಗಿ ಸೇವಾ ಅವಧಿಯಲ್ಲಿ ಗರಿಷ್ಠ 10 ಬಾರಿ ಹಣ ಹಿಂಪಡೆಯಬಹುದು.
  • ವಿವಾಹ ವೆಚ್ಚಕ್ಕಾಗಿ ಗರಿಷ್ಠ 5 ಬಾರಿ ಹಣ ಪಡೆಯಲು ಅವಕಾಶವಿದೆ.
  • ಮನೆ ಖರೀದಿ, ನಿರ್ಮಾಣ, ದುರಸ್ತಿ ಅಥವಾ ಗೃಹ ಸಾಲ ಮರುಪಾವತಿಗಾಗಿ ಅರ್ಹ ಬ್ಯಾಲೆನ್ಸ್‌ನ 100% ವರೆಗೆ ಹಣವನ್ನು ಹಿಂಪಡೆಯಬಹುದು.

ಉದ್ಯೋಗ ತೊರೆದ ಬಳಿಕವೂ ಹೊಸ ನಿಯಮ

ಉದ್ಯೋಗವನ್ನು ತೊರೆದ ಎರಡು ತಿಂಗಳ ನಂತರ ಪಿಎಫ್ ಖಾತೆಯಲ್ಲಿರುವ 100% ಮೊತ್ತವನ್ನು ಹಿಂಪಡೆಯಬಹುದು. ಆದರೆ ಈ ಅವಕಾಶವೂ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಲಭ್ಯವಿರುತ್ತದೆ.ಕೇಂದ್ರ ಸರ್ಕಾರದ ಪ್ರಕಾರ, ಈ ಹೊಸ ನಿಯಮಗಳ ಉದ್ದೇಶ ಉದ್ಯೋಗಿಗಳಿಗೆ ದೀರ್ಘಕಾಲಿಕ ಆರ್ಥಿಕ ಭದ್ರತೆಯನ್ನು ಒದಗಿಸುವುದಾಗಿದೆ.

ಪಿಎಫ್ ಕೊಡುಗೆ (Contribution) ನಿಯಮಗಳಲ್ಲೂ ಬದಲಾವಣೆ

ಹೊಸ ಯೋಜನೆಯ ಪ್ರಕಾರ, ತಿಂಗಳಿಗೆ ₹15,000 ಅಥವಾ ಅದಕ್ಕಿಂತ ಕಡಿಮೆ ಮೂಲ ವೇತನ ಪಡೆಯುವ ಉದ್ಯೋಗಿಗಳಿಗೆ 12% ಪಿಎಫ್ ಕೊಡುಗೆ ಕಡ್ಡಾಯವಾಗಿದೆ. ಮತ್ತೊಂದೆಡೆ, ತಿಂಗಳಿಗೆ ₹1 ಲಕ್ಷ ಮೂಲ ವೇತನ ಪಡೆದರೂ ಕಡ್ಡಾಯ ಪಿಎಫ್ ಕೊಡುಗೆ ₹1,800 ಮಾತ್ರವಾಗಿರುತ್ತದೆ.ಆದರೆ, ಉದ್ಯೋಗಿಗಳು ಕಡ್ಡಾಯ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಪಿಎಫ್‌ಗೆ ಜಮಾ ಮಾಡಬಹುದು. ಆ ಹೆಚ್ಚುವರಿ ಮೊತ್ತವನ್ನು ಸ್ವಯಂಪ್ರೇರಿತ (Voluntary Contribution) ಎಂದು ಪರಿಗಣಿಸಲಾಗುತ್ತದೆ.ಈ ಹೊಸ ನಿಯಮಗಳಿಂದ ದೇಶದ ಸುಮಾರು 8 ಕೋಟಿ EPF ಖಾತೆದಾರರ ಮೇಲೆ ಪರಿಣಾಮ ಬೀಳುವ ನಿರೀಕ್ಷೆಯಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ