LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಎಕ್ಸ್‌ಪೈರಿ ದಿನಾಂಕದ 69 ರೂ. ಕೋಲ್ಡ್ ಡ್ರಿಂಕ್ ; ಗ್ರಾಹಕಿಗೆ ಸಿಕ್ತು 10 ಸಾವಿರ ರೂಪಾಯಿ ಪರಿಹಾರ !

ಗಡುವು ಮೀರಿದ (Expiry date) ಕೇವಲ 69 ರೂಪಾಯಿಯ ಕೂಲ್ ಡ್ರಿಂಕ್ಸ್ ಬಾಟಲಿಯನ್ನು ಗ್ರಾಹಕಿಗೆ ಮಾರಾಟ ಮಾಡಿದ ಚಿಲ್ಲರೆ ಮಾರಾಟ ಮಳಿಗೆಗೆ (ರೀಟೇಲರ್) ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ. ಖರೀದಿಸಿದ ವಸ್ತುವಿನ ಪೂರ್ಣ ಮೊತ್ತವನ್ನು ಮರುಪಾವತಿಸುವುದರ ಜತೆಗೆ, ಗ್ರಾಹಕಿಗೆ 10,000 ರೂಪಾಯಿ ಪರಿಹಾರ ಪಾವತಿಸುವಂತೆ ಪಂಜಾಬ್‌ನ ಜಿಲ್ಲಾ ಗ್ರಾಹಕರ ಆಯೋಗವು ಮಹತ್ವದ ಆದೇಶ ನೀಡಿದೆ.

ಆಯೋಗದ ಅಧ್ಯಕ್ಷ ಸಂಜೀವ್ ಬಾತ್ರಾ ಮತ್ತು ಸದಸ್ಯೆ ಮೋನಿಕಾ ಭಗತ್ ಅವರಿದ್ದ ಪೀಠವು ಈ ತೀರ್ಪು ಪ್ರಕಟಿಸಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದು ಸೇವೆಯಲ್ಲಿನ ಗಂಭೀರ ಲೋಪ ಮತ್ತು ಅನುಚಿತ ವ್ಯಾಪಾರ ಪದ್ಧತಿ ಎಂದು ಕಟುವಾಗಿ ಆಕ್ಷೇಪಿಸಿದೆ. ಈ ಕೃತ್ಯದಿಂದ ಗ್ರಾಹಕರಿಗೆ ಹಣಕಾಸಿನ ನಷ್ಟ ಮಾತ್ರವಲ್ಲದೆ ಮಾನಸಿಕ ಆಘಾತ ಮತ್ತು ತೊಂದರೆಯೂ ಉಂಟಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರಗಳ ಪ್ರಕಾರ, ದೂರುದಾರ ಮಹಿಳೆ 2025 ರ ಜುಲೈ 30 ರಂದು ಮಳಿಗೆಗೆ ಭೇಟಿ ನೀಡಿ 69.30 ರೂಪಾಯಿ ಬೆಲೆಯ ತಂಪು ಪಾನೀಯ ಬಾಟಲಿ ಸೇರಿದಂತೆ ಇತರ ದಿನಸಿ ವಸ್ತುಗಳನ್ನು ಒಟ್ಟು 116.05 ರೂಪಾಯಿ ನೀಡಿ ಖರೀದಿಸಿದ್ದರು. ಮನೆಗೆ ತೆರಳಿದ ನಂತರ ಆ ಬಾಟಲಿಯನ್ನು ಗಮನಿಸಿದಾಗ, ಅದರ ಮೇಲೆ ಬಳಕೆ ಮಾಡಲು ಕೊನೆಯ ದಿನಾಂಕ (Best Before) 2025 ರ ಜುಲೈ 29 ಎಂದು ನಮೂದಾಗಿತ್ತು. ಅಂದರೆ ಆಕೆ ಖರೀದಿಸುವ ಹಿಂದಿನ ದಿನವೇ ಅದರ ಅವಧಿ ಮುಗಿದಿತ್ತು.

ಈ ಬಗ್ಗೆ ಮಹಿಳೆ ಅಂಗಡಿಯವರನ್ನು ಸಂಪರ್ಕಿಸಿ ನಂತರ ಕಾನೂನು ನೋಟಿಸ್ ಕಳುಹಿಸಿದರೂ ಮಳಿಗೆಯಿಂದ ಯಾವುದೇ ಸ್ಪಂದನೆ ಸಿಗಲಿಲ್ಲ. ಇದರಿಂದ ಬೇಸತ್ತ ಅವರು, ಪಾನೀಯದ ಹಣ ವಾಪಸ್ ಕೊಡಿಸುವುದರ ಜತೆಗೆ 2 ಲಕ್ಷ ರೂಪಾಯಿ ಪರಿಹಾರ ಹಾಗೂ 3,500 ರೂಪಾಯಿ ಕಾನೂನು ವೆಚ್ಚ ಕೊಡಿಸುವಂತೆ ಕೋರಿ ಗ್ರಾಹಕರ ಆಯೋಗದ ಮೊರೆ ಹೋದರು.

ವಿಚಾರಣೆ ವೇಳೆ ಮಳಿಗೆಯು ತನ್ನ ತಪ್ಪನ್ನು ಮುಚ್ಚಿಹಾಕಲು ಯತ್ನಿಸಿ, ಬಿಲ್ ತೋರಿಸಿದ ಮಾತ್ರಕ್ಕೆ ಅದೇ ದಿನ ಈ ಬಾಟಲಿಯನ್ನು ಖರೀದಿಸಲಾಗಿದೆ ಎಂದು ಹೇಳಲಾಗದು ಅಥವಾ ಈ ಬಾಟಲಿಯನ್ನು ಬೇರೆ ಅಂಗಡಿಯಿಂದ ತಂದಿರಬಹುದು ಎಂದು ವಾದಿಸಿತು. ಆದರೆ, ತನ್ನಲ್ಲಿ ಅತ್ಯಾಧುನಿಕ ಡಿಜಿಟಲ್ ಇನ್ವೆಂಟರಿ ಮತ್ತು ಕಂಪ್ಯೂಟರೀಕೃತ ಬಿಲ್ಲಿಂಗ್ ವ್ಯವಸ್ಥೆ ಇದೆ ಎಂದು ಹೇಳಿಕೊಂಡಿದ್ದ ಮಳಿಗೆಯು, ಆ ನಿರ್ದಿಷ್ಟ ಬಿಲ್‌ನಲ್ಲಿ ಮಾರಾಟವಾದ ಉತ್ಪನ್ನದ ಬ್ಯಾಚ್ ನಂಬರ್ ಹಾಗೂ ಎಕ್ಸ್‌ಪೈರಿ ದಿನಾಂಕದ ವಿವರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ವಿಫಲವಾಯಿತು. ಮಳಿಗೆಯು ತನ್ನ ಬಳಿ ಇದ್ದ ಪ್ರಮುಖ ಸಾಕ್ಷ್ಯವನ್ನು ಮರೆಮಾಚಿದೆ ಎಂದು ಆಯೋಗ ತೀರ್ಮಾನಿಸಿತು.

ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ಅವಧಿ ಮೀರಿದ ಅಸುರಕ್ಷಿತ ಉತ್ಪನ್ನವನ್ನು ಮಾರಾಟ ಮಾಡಿದ್ದಕ್ಕಾಗಿ ಮಳಿಗೆಯನ್ನು ಹೊಣೆಗಾರರನ್ನಾಗಿ ಮಾಡಿದ ಆಯೋಗವು, ತಂಪು ಪಾನೀಯದ ಮೊತ್ತ 69 ರೂಪಾಯಿಯನ್ನು ಮರುಪಾವತಿಸಲು ಹಾಗೂ ಗ್ರಾಹಕಿಗೆ ಉಂಟಾದ ಮಾನಸಿಕ ತೊಂದರೆ ಮತ್ತು ವ್ಯಾಜ್ಯದ ವೆಚ್ಚಕ್ಕಾಗಿ 10,000 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತು. ಗ್ರಾಹಕರು ಖರೀದಿಸುವ ದಿನಸಿ ವಸ್ತುಗಳ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಮತ್ತು ತಮ್ಮ ಹಕ್ಕುಗಳ ರಕ್ಷಣೆಗೆ ಗ್ರಾಹಕರ ವೇದಿಕೆಯನ್ನು ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಕರ್ನಾಟಕ 'SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ | Karnataka SSLC Examಮಂಗಳೂರಿನಲ್ಲಿಂದು ಐತಿಹಾಸಿಕ ಸಂಪುಟ ಸಭೆ: ಕರಾವಳಿ ಜನರ ಚಿತ್ತ ಸರ್ಕಾರದ ನಿರ್ಧಾರಗಳತ್ತಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಡಿಕೆಶಿ ಹೊಸ ಮಿಷನ್ : 50,000 ನಿವೇಶನ, ಕಲಬುರಗಿಯಲ್ಲಿ ಐಇ ಪಾರ್ಕ್.!