LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶೌರ್ಯ ಮೆರೆದ ಯೋಧರಿಗೆ ಗೌರವ: ಪ್ರಥಮ ದರ್ಜೆ, ಎಸಿ ಕೋಚ್‌ಗಳಲ್ಲಿ ಇನ್ಮುಂದೆ ಉಚಿತ ರೈಲು ಸೇವೆ !

ದೇಶದ ರಕ್ಷಣೆಗಾಗಿ ಅದಮ್ಯ ಸಾಹಸ ಮೆರೆದ ಸಶಸ್ತ್ರ ಪಡೆಗಳ ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರು ಮತ್ತು ಅವರ ಕುಟುಂಬದ ಅರ್ಹ ಸದಸ್ಯರಿಗೆ ಭಾರತೀಯ ರೈಲ್ವೆಯಲ್ಲಿ ಜೀವಮಾನವಿಡೀ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ವಿಸ್ತರಿಸಿದೆ. ಈಗಾಗಲೇ ಚಾಲ್ತಿಯಲ್ಲಿರುವ ಪ್ರಮುಖ ಶೌರ್ಯ ಪ್ರಶಸ್ತಿಗಳ ಜತೆಗೆ, ಇನ್ನುಮುಂದೆ ಸೇನಾ ಪದಕ, ನೌಕಾ ಸೇನಾ ಪದಕ ಹಾಗೂ ವಾಯು ಸೇನಾ ಪದಕ ಪಡೆದ ವೀರ ಯೋಧರಿಗೂ ಈ ಉಚಿತ ಸೌಲಭ್ಯ ಅನ್ವಯವಾಗಲಿದೆ.

ಈ ಯೋಜನೆಯನ್ನು ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ವ್ಯವಸ್ಥೆಯ ಮೂಲಕ ಜಾರಿಗೆ ತರಲಾಗುತ್ತಿದೆ. ಅರ್ಹ ಫಲಾನುಭವಿಗಳು ಭಾರತೀಯ ರೈಲ್ವೆ ರಿಯಾಯಿತಿ ಕಾರ್ಡ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡು ಪರಿಶೀಲನೆ ಪೂರ್ಣಗೊಳಿಸಬೇಕಾಗುತ್ತದೆ. ಪರಿಶೀಲನೆಯ ನಂತರ ಅವರಿಗೆ ಎಲೆಕ್ಟ್ರಾನಿಕ್ ಇ-ಪಾಸ್ ನೀಡಲಾಗುವುದು. ಈ ಇ-ಪಾಸ್ ಬಳಸಿಕೊಂಡು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ 2026 ರ ನವೆಂಬರ್ 1 ರಿಂದ ನೇರವಾಗಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ನೂತನ ಸೌಲಭ್ಯದ ಅಡಿಯಲ್ಲಿ ಅರ್ಹ ಪದಕ ಪುರಸ್ಕೃತರು ಭಾರತೀಯ ರೈಲ್ವೆಯ ಪ್ರಥಮ ದರ್ಜೆ, ಸೆಕೆಂಡ್ ಎಸಿ ಹಾಗೂ ಎಸಿ ಚೇರ್ ಕಾರ್ ಬೋಗಿಗಳಲ್ಲಿ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಪ್ರಯಾಣಿಸಬಹುದು. ಅಷ್ಟೇ ಅಲ್ಲದೆ, ಅವರೊಂದಿಗೆ ಪ್ರಯಾಣಿಸುವ ಒಬ್ಬ ಸಹಪ್ರಯಾಣಿಕರಿಗೂ ಸಂಪೂರ್ಣ ಉಚಿತ ಟಿಕೆಟ್ ಸೌಲಭ್ಯ ಸಿಗಲಿದೆ.

ಈ ಯೋಜನೆಯು ಕೇವಲ ಪದಕ ಪಡೆದ ಯೋಧರಿಗೆ ಮಾತ್ರ ಸೀಮಿತವಾಗಿರದೆ, ಅವರ ಅರ್ಹ ಕುಟುಂಬ ಸದಸ್ಯರಿಗೂ ಅನ್ವಯವಾಗಲಿದೆ. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಪದಕ ಪುರಸ್ಕೃತ ಯೋಧರ ಪತಿ ಅಥವಾ ಪತ್ನಿ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಕರ್ತವ್ಯದ ವೇಳೆ ಹುತಾತ್ಮರಾದ ಶೌರ್ಯ ಪ್ರಶಸ್ತಿ ವಿಜೇತರ ಪತ್ನಿ ಅಥವಾ ಪತಿ ಮರುಮದುವೆಯಾಗದಿದ್ದರೆ ಅವರಿಗೂ ಈ ಸವಲತ್ತು ಸಿಗಲಿದೆ. ಒಂದು ವೇಳೆ ಮರಣೋತ್ತರವಾಗಿ ಪದಕ ಪಡೆದ ಸೈನಿಕರು ಅವಿವಾಹಿತರಾಗಿದ್ದರೆ, ಅಂತಹ ಹುತಾತ್ಮರ ತಂದೆ-ತಾಯಿಗೂ ಈ ಉಚಿತ ಪ್ರಯಾಣ ಯೋಜನೆಯನ್ನು ವಿಸ್ತರಿಸಲಾಗಿದೆ.

ಈ ಹಿಂದೆ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ ಹಾಗೂ ಶೌರ್ಯ ಚಕ್ರ ಪಡೆದ ಯೋಧರಿಗೆ ಮಾತ್ರ ಈ ಜೀವಮಾನದ ಉಚಿತ ರೈಲು ಪ್ರಯಾಣದ ಸವಲತ್ತು ಲಭ್ಯವಿತ್ತು. ಇದೀಗ ಸಾಹಸ ಮತ್ತು ಶೌರ್ಯಕ್ಕಾಗಿ ಸೇನಾ ಪದಕ ಪಡೆದ ಇತರ ಯೋಧರನ್ನೂ ಈ ವ್ಯಾಪ್ತಿಗೆ ತರಲಾಗಿದೆ. ರಕ್ಷಣಾ ಸಚಿವಾಲಯದ ಈ ಕ್ರಮವು ದೇಶಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡಿದ ವೀರ ಯೋಧರ ತ್ಯಾಗ ಮತ್ತು ಬಲಿದಾನಕ್ಕೆ ಸಲ್ಲಿಸಿದ ಅತ್ಯುನ್ನತ ಗೌರವವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING: ದಕ್ಷಿಣ ಕನ್ನಡ ಜಿಲ್ಲೆ ಇನ್ಮುಂದೆ 'ಮಂಗಳೂರು ಜಿಲ್ಲೆ': ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧಾರBIG BREAKING: ತುಳುವಿಗೆ ರಾಜ್ಯದ 2ನೇ ಭಾಷೆ ಮಾನ್ಯತೆ ನೀಡಲು ರಾಜ್ಯ ಸಚಿವ ಸಂಪುಟ ತೀರ್ಮಾನಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ: ಸಿಎಂ ಡಿ.ಕೆ. ಶಿವಕುಮಾರ್‌ಗೆ ವಕೀಲರ ನಿಯೋಗದಿಂದ ಮನವಿ ಸಲ್ಲಿಕೆKPSC ನೇಮಕಾತಿ ಅಕ್ರಮದ ಜಾಲ ಭೇದಿಸಿದ CID: 13 ಬೇನಾಮಿ ಖಾತೆಗಳಲ್ಲಿದ್ದ 67 ಲಕ್ಷ ಸೀಜ್!BREAKING : ನಟ ದರ್ಶನ್ ಗೆ ಬಿಗ್ ರಿಲೀಫ್ : ಕ್ರಾಸ್ ಎಕ್ಸಾಮಿನೇಷನ್ ವೇಳೆ, ಖುದ್ದು ಹಾಜರಾತಿಗೆ ಅನುಮತಿ ನೀಡಿದ ಹೈಕೋರ್ಟ್ತೆರವುಗೊಳಿಸಿದ್ದ ಫುಟ್‌ಪಾತ್ ಮೇಲೆ ಮತ್ತೆ ವ್ಯಾಪಾರ ಮಾಡಿದ್ರೆ FIR, ಸಾಮಗ್ರಿ ಜಪ್ತಿ: ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆಕರ್ನಾಟಕ 'SSLC ಅರ್ಧವಾರ್ಷಿಕ ಪರೀಕ್ಷೆ'ಯ ವೇಳಾಪಟ್ಟಿ ಪ್ರಕಟ | Karnataka SSLC Examಮಂಗಳೂರಿನಲ್ಲಿಂದು ಐತಿಹಾಸಿಕ ಸಂಪುಟ ಸಭೆ: ಕರಾವಳಿ ಜನರ ಚಿತ್ತ ಸರ್ಕಾರದ ನಿರ್ಧಾರಗಳತ್ತಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಿಎಂ ಡಿಕೆಶಿ ಹೊಸ ಮಿಷನ್ : 50,000 ನಿವೇಶನ, ಕಲಬುರಗಿಯಲ್ಲಿ ಐಇ ಪಾರ್ಕ್.!