LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರಾಗಿಯಲ್ಲ, ಗೋಧಿಯಲ್ಲ ಈ ಮುದ್ದೆ ತಿಂದ್ರೆ ಮಹಿಳೆಯರಾಗ್ತಾರೆ ಸ್ಟ್ರಾಂಗ್ ಬೊಜ್ಜು ಕರಗಿಸಲು ಇಲ್ಲಿದೆ ಮ್ಯಾಜಿಕ್ ರೆಸಿಪಿ

ಬೆಂಗಳೂರು: ಆರೋಗ್ಯಕರ ಆಹಾರ ಸೇವಿಸಬೇಕು, ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಬೇಕು (Weight Loss) ಎಂದು ಬಯಸುವವರಿಗೆ ಈಗ ಅಗಸೆ ಬೀಜಗಳ ಮುದ್ದೆ (Flax Seeds Mudde) ಹೊಸ ಭರವಸೆಯಾಗಿ ಮೂಡಿಬಂದಿದೆ. ಅನೇಕರು ಅಪೌಷ್ಟಿಕತೆ ಮತ್ತು ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತಹವರಿಗೆ ಅಗಸೆ ಬೀಜ ಒಂದು ಅದ್ಭುತ ವರದಾನ ಎಂದು ಆಯುರ್ವೇದ ತಜ್ಞರು ಹೇಳುತ್ತಿದ್ದಾರೆ.

ಹೃದಯಕ್ಕೆ ಫ್ರೆಂಡ್, ಬೊಜ್ಜಿಗೆ ಎನಿಮಿ
ಅಗಸೆ ಬೀಜಗಳಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಕೇವಲ ಹೃದಯದ ಆರೋಗ್ಯಕ್ಕೆ ಮಾತ್ರವಲ್ಲ, ದೇಹದ ಚಯಾಪಚಯ ಕ್ರಿಯೆಯನ್ನು (Metabolism) ವೇಗಗೊಳಿಸಿ ಬೊಜ್ಜನ್ನು ಬೆಣ್ಣೆಯಂತೆ ಕರಗಿಸಲು ಸಹಾಯ ಮಾಡುತ್ತದೆ. ಮಹಿಳೆಯರಲ್ಲಿ ಕಾಡುವ ಮುಟ್ಟಿನ ಸಮಸ್ಯೆ, PCOD ಮತ್ತು ಋತುಬಂಧದ (Menopause) ತೊಂದರೆಗಳನ್ನು ನಿಯಂತ್ರಿಸುವಲ್ಲಿ ಇದರಲ್ಲಿರುವ ‘ಲಿಗ್ನನ್’ಗಳು ಪ್ರಮುಖ ಪಾತ್ರ ವಹಿಸುತ್ತವೆ.

ಅಗಸೆ ಬೀಜದ ಮುದ್ದೆ ತಯಾರಿಸುವುದು ಹೇಗೆ?
ಈ ಪೌಷ್ಟಿಕಾಂಶಯುಕ್ತ ಮುದ್ದೆ ತಯಾರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಬೇಕಾಗುವ ಪದಾರ್ಥಗಳು:


ಅಗಸೆ ಬೀಜ (1 ಕಪ್), ಎಳ್ಳು (1/2 ಕಪ್), ಕೊತ್ತಂಬರಿ ಸೊಪ್ಪು, ಕರಿಬೇವು, ಒಣ ಮೆಣಸಿನಕಾಯಿ (20-25), ಕಡಲೆ ಬೇಳೆ, ಜೀರಿಗೆ, ಸಬ್ಬಸಿಗೆ, ಹುಣಸೆಹಣ್ಣು, ಬೆಳ್ಳುಳ್ಳಿ, ಲವಂಗ ಮತ್ತು ಇಂಗು.

ತಯಾರಿಸುವ ವಿಧಾನ:

ಬಾಣಲೆಯಲ್ಲಿ ಅಗಸೆ ಬೀಜಗಳನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಎಳ್ಳು, ಕರಿಬೇವು, ಮೆಣಸಿನಕಾಯಿಯನ್ನು ಪ್ರತ್ಯೇಕವಾಗಿ ಹುರಿದು ಪಕ್ಕಕ್ಕೆ ಇರಿಸಿ.

ಜೀರಿಗೆ, ಬೇಳೆ ಹಾಗೂ ಹುಣಸೆಹಣ್ಣನ್ನು ಕೂಡ ಹುರಿದುಕೊಳ್ಳಿ.

ಈ ಎಲ್ಲಾ ಪದಾರ್ಥಗಳು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಉಪ್ಪು, ಇಂಗು ಮತ್ತು ಬೆಳ್ಳುಳ್ಳಿ ಸೇರಿಸಿ ಪುಡಿ ಮಾಡಿ (ಚಟ್ನಿ ಪುಡಿಯಂತೆ).

ಈಗ ಒಲೆಯ ಮೇಲೆ ಪಾತ್ರೆ ಇಟ್ಟು ನೀರು ಕುದಿಸಿ. ನೀರು ಕುದಿಯುವಾಗ ಸಿದ್ಧಪಡಿಸಿದ ಅಗಸೆ ಪುಡಿಯನ್ನು ಸೇರಿಸಿ, ಮುದ್ದೆ ಕೋಲಿನಿಂದ ತಿರುವಿ ಗಟ್ಟಿಯಾಗುತ್ತಿದ್ದಂತೆಯೇ ಮುದ್ದೆ ಕಟ್ಟಿ.

ದಿನಾ ತಿಂದ್ರೆ ಏನೆಲ್ಲಾ ಲಾಭ?


ಮೂಳೆಗಳ ಬಲ: ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಮಹಿಳೆಯರ ಮೂಳೆಗಳನ್ನು ಸ್ಟ್ರಾಂಗ್ ಮಾಡುತ್ತದೆ.

ಹೊಳೆಯುವ ಚರ್ಮ: ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಸುಕ್ಕು ತಡೆದು ಯೌವನ ಕಾಪಾಡುತ್ತವೆ.

ಹಸಿವಿನ ನಿಯಂತ್ರಣ: ಇದರಲ್ಲಿ ಫೈಬರ್ ಹೆಚ್ಚಿರುವುದರಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ, ಇದರಿಂದ ಅತಿಯಾಗಿ ತಿನ್ನುವುದು ತಪ್ಪುತ್ತದೆ.

ಕೂದಲು: ಕೂದಲು ಉದುರುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಸಾರಿಗೆ ಇಲಾಖೆಗೆ 7 ಸಾವಿರ ಕೋಟಿ ರೂ. ಅನುದಾನ ಮಂಜೂರು : ಬೈರತಿ ಸುರೇಶ್ ಘೋಷಣೆ'RSS' ನಂಥ 100 ಸಂಘಟನೆ ಬಂದ್ರೂ ದೇಶ ಹಾಳು ಮಾಡಲು ಸಾಧ್ಯವಿಲ್ಲ : ಬಿಕೆ ಹರಿಪ್ರಸಾದ್ ವಾಗ್ದಾಳಿಕನಕಪುರದ ಬಿಸಿಎಂ ಹಾಸ್ಟೆಲ್‌ಗೆ ಡಿ.ಕೆ. ಶಿವಕುಮಾರ್ ದಿಢೀರ್ ಭೇಟಿ: ವಿದ್ಯಾರ್ಥಿಗಳ ಜೊತೆ ಮುದ್ದೆ ಊಟ ಸವಿದ ಸಿಎಂBREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿ