LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವೀಗನ್ ಪ್ರಿಯರಿಗಾಗಿ ಇಲ್ಲಿದೆ ಸ್ಪೆಷಲ್ ಪಿಜ್ಜಾ ರೆಸಿಪಿ: ಹಾಲಿನ ಉತ್ಪನ್ನಗಳಿಲ್ಲದೆ ತಯಾರಿಸಿ ರೆಸ್ಟೋರೆಂಟ್ ಶೈಲಿಯ ರುಚಿ!

ವೀಗನ್ (Vegan) ಜೀವನಶೈಲಿ ಅನುಸರಿಸುವವರಿಗಾಗಿ ಅಥವಾ ಹಾಲಿನ ಉತ್ಪನ್ನಗಳಿಂದ ದೂರವಿರುವವರಿಗಾಗಿ ಪ್ರಾಣಿಜನ್ಯ ಪದಾರ್ಥಗಳನ್ನು ಬಳಸದೆ ತಯಾರಿಸುವ ‘ವೀಗನ್ ಪಜ್ಜಾ’ ಉತ್ತಮ ಆಯ್ಕೆಯಾಗಿದೆ. ಸಸ್ಯಜನ್ಯ ಚೀಸ್ ಬಳಸಿ ತಯಾರಿಸುವ ಈ ಪಜ್ಜಾ ರುಚಿಯಲ್ಲಿ ಸಾಮಾನ್ಯ ಪಜ್ಜಾಕ್ಕಿಂತ ಯಾವುದರಲ್ಲೂ ಕಡಿಮೆ ಇಲ್ಲ. ಇದನ್ನು ಮನೆಯಲ್ಲೇ ಸರಳವಾಗಿ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

ಡ್ರೈ ಈಸ್ಟ್ (Dried yeast): ಅರ್ಧ ಟೀ ಚಮಚ

ಉಗುರು ಬೆಚ್ಚಗಿನ ನೀರು: ಕಾಲು ಕಪ್

ಮೈದಾ ಹಿಟ್ಟು: ಮುಕ್ಕಾಲು ಕಪ್

ಉಪ್ಪು: ಅರ್ಧ ಟೀ ಚಮಚ

ಆಲಿವ್ ಆಯಿಲ್: 1 ಟೇಬಲ್ ಚಮಚ

ಪಜ್ಜಾ ಸಾಸ್: ಅರ್ಧ ಕಪ್

ವೀಗನ್ ಮೊಝರೆಲ್ಲಾ ಮತ್ತು ಚೆಡ್ಡಾರ್ ಚೀಸ್: ತಲಾ ಅರ್ಧ ಕಪ್ (ತುರಿದಿರುವುದು)

ಇಟಾಲಿಯನ್ ಸೀಸನಿಂಗ್ (ಪಜ್ಜಾ ಮಸಾಲೆ): ಅರ್ಧ ಟೀ ಚಮಚ

ತಯಾರಿಸುವ ವಿಧಾನ:

1. ಹಿಟ್ಟಿನ ಸಿದ್ಧತೆ:

  • ಮೊದಲು ಈಸ್ಟ್ ಮತ್ತು ನೀರನ್ನು ಬೆರೆಸಿ 5 ನಿಮಿಷಗಳ ಕಾಲ ನೆನೆಯಲು ಬಿಡಿ.
  • ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ ಮತ್ತು ಉಪ್ಪು ಸೇರಿಸಿ. ಮಧ್ಯದಲ್ಲಿ ಈಸ್ಟ್ ಮಿಶ್ರಣ ಮತ್ತು ಆಲಿವ್ ಆಯಿಲ್ ಹಾಕಿ ಚೆನ್ನಾಗಿ ಕಲಸಿ.
  • ಹಿಟ್ಟು ಮೃದುವಾಗುವವರೆಗೆ ಕೈಯಿಂದ ಚೆನ್ನಾಗಿ ನಾದಿಕೊಳ್ಳಿ. ನಂತರ ಎಣ್ಣೆ ಹಚ್ಚಿದ ಪಾತ್ರೆಯಲ್ಲಿ ಹಿಟ್ಟನ್ನು ಇಟ್ಟು, ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ 30 ನಿಮಿಷಗಳ ಕಾಲ ಬಿಡಿ.

2. ಪಜ್ಜಾ ಬೇಸ್ ತಯಾರಿಕೆ:

  • ಓವನ್ ಅನ್ನು 190 ಡಿಗ್ರಿ ಸೆಲ್ಸಿಯಸ್‌ಗೆ ಪ್ರಿಹೀಟ್ ಮಾಡಿ.
  • ಹಿಟ್ಟನ್ನು ಮತ್ತೊಮ್ಮೆ ನಾದಿಕೊಂಡು, ಸುಮಾರು 12 ಇಂಚಿನ ವೃತ್ತಾಕಾರದಲ್ಲಿ ಲಟ್ಟಿಸಿಕೊಳ್ಳಿ.
  • ಇದನ್ನು ಪಜ್ಜಾ ಪ್ಯಾನ್ ಮೇಲೆ ಇರಿಸಿ ಮೊದಲು 10-12 ನಿಮಿಷಗಳ ಕಾಲ ಬೇಕ್ ಮಾಡಿ.

3. ಟಾಪಿಂಗ್ಸ್ ಮತ್ತು ಬೇಕಿಂಗ್:

  • ಬೇಕ್ ಮಾಡಿದ ಬೇಸ್ ಅನ್ನು ಹೊರತೆಗೆದು ಅದರ ಮೇಲೆ ಪಜ್ಜಾ ಸಾಸ್ ಸವರಿ.
  • ನಂತರ ವೀಗನ್ ಚೀಸ್ ಮತ್ತು ಇಟಾಲಿಯನ್ ಸೀಸನಿಂಗ್ ಅನ್ನು ಮೇಲೆ ಉದುರಿಸಿ.
  • ಮತ್ತೆ 10-12 ನಿಮಿಷಗಳ ಕಾಲ ಅಥವಾ ಚೀಸ್ ಕರಗುವವರೆಗೆ ಬೇಕ್ ಮಾಡಿ.

ಬಿಸಿ ಬಿಸಿಯಾದ ಮತ್ತು ಸ್ವಾದಿಷ್ಟವಾದ ವೀಗನ್ ಪಜ್ಜಾ ಈಗ ಸವಿಯಲು ಸಿದ್ಧ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ